<p><strong>ಮಡಿಕೇರಿ:</strong> ವೇತನ ತಾರತಮ್ಯವನ್ನು ನಿವಾರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶಿಕ್ಷಕರ ದಿನವಾದ ಸೋಮವಾರ ಧರಣಿ ನಡೆಸಿದರು.<br /> <br /> ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ವೇತನ ತಾರತಮ್ಯ ನಿವಾರಿಸುವಂತೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. <br /> <br /> ಸಂಘದ ಅಧ್ಯಕ್ಷ ಸಿ.ಎನ್. ವಿಶ್ವನಾಥ್ ಮಾತನಾಡಿ, 1998ರಿಂದ ಈಚೆಗೆ ಪದವಿ ಮತ್ತು ಪದವಿ ಪೂರ್ವ ಉಪನ್ಯಾಸಕರ ವೇತನದಲ್ಲಿ ಭಾರಿ ತಾರತಮ್ಯ ಉಂಟಾಗಿದೆ. ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅದಕ್ಕಾಗಿ ಶಿಕ್ಷಕರ ದಿನಾಚರಣೆಯ ದಿನದಂದೇ ಕರಾಳದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.<br /> <br /> 4 ಹಾಗೂ 5ನೇ ವೇತನ ಆಯೋಗದಲ್ಲಿ ಉಂಟಾಗಿರುವ ಈ ತಾರತಮ್ಯ ನೀತಿಯನ್ನು ಮುಂದಿನ 6ನೇ ವೇತನ ಆಯೋಗದಲ್ಲಿ ಸರಿದೂಗಿಸುವಂತೆ ಮನವಿ ಮಾಡಿದ ಅವರು ಕೇವಲ ಮಡಿಕೇರಿಯಲ್ಲಿ ನೀಡುತ್ತಿರುವ ಗಿರಿಜನ ಭತ್ಯೆಯನ್ನು ಇತರ ಭಾಗಗಳಲ್ಲಿಯೂ ನೀಡುವಂತೆ ಅವರು ಒತ್ತಾಯಿಸಿದರು. <br /> <br /> ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಪದವಿ ಮಹಾವಿದ್ಯಾಲಯಗಳಗೆ ಬಡ್ತಿ ನೀಡುವ ಅವಕಾಶ ಕಲ್ಪಿಸಬೇಕು. ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು 1991ರಲ್ಲಿ ಸಕ್ರಮಗೊಂಡ ಉಪನ್ಯಾಸಕರ ಕಾಲ್ಪನಿಕ ವೇತನ ಬಡ್ತಿ ಹಿಂದಕ್ಕೆ ಪಡೆಯುವ ಆದೇಶವನ್ನು ರದ್ದು ಪಡಿಸುವಂತೆ ಒತ್ತಾಯಿಸಿದರು.<br /> <br /> ಈ ಧರಣಿಯಲ್ಲಿ ಸಂಘದ ಪದಾಧಿಕಾರಿಗಳಾದ ಫಿಲಿಪ್ ವಾಸ್, ಹೇಮಂತ್ ಕುಮಾರ್, ಬಿ.ಎಂ.ಬೆಳ್ಳಿಯಪ್ಪ, ಎಸ್.ಬೋಜಣ್ಣರೆಡ್ಡಿ, ಪಿ.ಆರ್.ವಿಜಯ್, ಎಚ್. ಜೆ. ನಾಗರಾಜ್. ಎ.ಎನ್. ಶ್ರೀಲತಾ, ಬಿ.ಡಿ ಸರೋಜ, ಎಚ್.ಆರ್ ಸರ್ವೋತ್ತಮ್, ಎಸ್.ಎಸ್. ಅಪ್ಪಣ್ಣ್ಗೋಳ್, ಕೆ.ಜಿ. ಅಶ್ವಿನಿ, ಎಂ. ಆರ್. ಸುರೇಶ್ ಕುಮಾರ್, ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ವೇತನ ತಾರತಮ್ಯವನ್ನು ನಿವಾರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶಿಕ್ಷಕರ ದಿನವಾದ ಸೋಮವಾರ ಧರಣಿ ನಡೆಸಿದರು.<br /> <br /> ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ವೇತನ ತಾರತಮ್ಯ ನಿವಾರಿಸುವಂತೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. <br /> <br /> ಸಂಘದ ಅಧ್ಯಕ್ಷ ಸಿ.ಎನ್. ವಿಶ್ವನಾಥ್ ಮಾತನಾಡಿ, 1998ರಿಂದ ಈಚೆಗೆ ಪದವಿ ಮತ್ತು ಪದವಿ ಪೂರ್ವ ಉಪನ್ಯಾಸಕರ ವೇತನದಲ್ಲಿ ಭಾರಿ ತಾರತಮ್ಯ ಉಂಟಾಗಿದೆ. ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅದಕ್ಕಾಗಿ ಶಿಕ್ಷಕರ ದಿನಾಚರಣೆಯ ದಿನದಂದೇ ಕರಾಳದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.<br /> <br /> 4 ಹಾಗೂ 5ನೇ ವೇತನ ಆಯೋಗದಲ್ಲಿ ಉಂಟಾಗಿರುವ ಈ ತಾರತಮ್ಯ ನೀತಿಯನ್ನು ಮುಂದಿನ 6ನೇ ವೇತನ ಆಯೋಗದಲ್ಲಿ ಸರಿದೂಗಿಸುವಂತೆ ಮನವಿ ಮಾಡಿದ ಅವರು ಕೇವಲ ಮಡಿಕೇರಿಯಲ್ಲಿ ನೀಡುತ್ತಿರುವ ಗಿರಿಜನ ಭತ್ಯೆಯನ್ನು ಇತರ ಭಾಗಗಳಲ್ಲಿಯೂ ನೀಡುವಂತೆ ಅವರು ಒತ್ತಾಯಿಸಿದರು. <br /> <br /> ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಪದವಿ ಮಹಾವಿದ್ಯಾಲಯಗಳಗೆ ಬಡ್ತಿ ನೀಡುವ ಅವಕಾಶ ಕಲ್ಪಿಸಬೇಕು. ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು 1991ರಲ್ಲಿ ಸಕ್ರಮಗೊಂಡ ಉಪನ್ಯಾಸಕರ ಕಾಲ್ಪನಿಕ ವೇತನ ಬಡ್ತಿ ಹಿಂದಕ್ಕೆ ಪಡೆಯುವ ಆದೇಶವನ್ನು ರದ್ದು ಪಡಿಸುವಂತೆ ಒತ್ತಾಯಿಸಿದರು.<br /> <br /> ಈ ಧರಣಿಯಲ್ಲಿ ಸಂಘದ ಪದಾಧಿಕಾರಿಗಳಾದ ಫಿಲಿಪ್ ವಾಸ್, ಹೇಮಂತ್ ಕುಮಾರ್, ಬಿ.ಎಂ.ಬೆಳ್ಳಿಯಪ್ಪ, ಎಸ್.ಬೋಜಣ್ಣರೆಡ್ಡಿ, ಪಿ.ಆರ್.ವಿಜಯ್, ಎಚ್. ಜೆ. ನಾಗರಾಜ್. ಎ.ಎನ್. ಶ್ರೀಲತಾ, ಬಿ.ಡಿ ಸರೋಜ, ಎಚ್.ಆರ್ ಸರ್ವೋತ್ತಮ್, ಎಸ್.ಎಸ್. ಅಪ್ಪಣ್ಣ್ಗೋಳ್, ಕೆ.ಜಿ. ಅಶ್ವಿನಿ, ಎಂ. ಆರ್. ಸುರೇಶ್ ಕುಮಾರ್, ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>