<p><strong>ವಿಜಯಪುರ: </strong>ಕನ್ನಡ ಸಾಹಿತ್ಯಕ್ಕೆ ಶರಣರು ನೀಡಿರುವ ಅಮೋಘ ಕೊಡುಗೆ ವಚನ ಸಾಹಿತ್ಯ ಎಂದು ಬಸವಕಲ್ಯಾಣ ಮಠದ ಮಹದೇವ ಸ್ವಾಮೀಜಿ ಅಭಿಪ್ರಾಯಪಟ್ಟರು.<br /> ಇಲ್ಲಿನ ಬಸವಕಲ್ಯಾಣ ಮಠದಲ್ಲಿ ನಡೆದ ಗುರುಪೂರ್ಣಿಮೆ ಚಿಂತನಗೋಷ್ಠಿ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಶರಣರ ಬೋಧನೆಗಳು ಸಾರ್ವಕಾಲಿಕವಾದವು. ಭೋಗ ಮತ್ತು ವಿಲಾಸ ಮನುಷ್ಯನನ್ನು ದುಃಖಕ್ಕೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.<br /> <br /> ಎಚ್.ಸಿ.ಪರಮಶಿವಯ್ಯ ಮಾತನಾಡಿ, ಶರಣರ ವಚನಗಳು ಅನುಭವದ ಸಂಪತ್ತಿನಿಂದ ಕೂಡಿವೆ. ವಿಚಾರ ಕ್ರಾಂತಿಗೆ ವಚನಗಳು ಮೂಲವಾಗಿವೆ ಎಂದು ವಿವರಿಸಿದರು.ದೊರೆಕಾವಲು ಶಿವರುದ್ರಪ್ಪ ಅಧ್ಯಕ್ಷತೆವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಪರಮಶಿವಯ್ಯ ಮತ್ತು ಎಚ್.ಎಸ್.ರುದ್ರೇಶಮೂರ್ತಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಭಂಜನ ಎಜುಕೇಶನ್ ಟ್ರಸ್ಟ್ನ ವಿ.ಎನ್.ರಮೇಶ್, ಚಿಕ್ಕ ಅಯ್ಯೂರು ಅನಾಥಾಶ್ರಮದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮತ್ತಿತರರು ಉಪಸ್ಥಿತರಿದ್ದರು. ಎಚ್.ಎಸ್.ರುದ್ರೇಶಮೂರ್ತಿ ಸ್ವಾಗತಿಸಿ, ನಿರೂಪಿಸಿದರು. ಬಯಂಡಹಳ್ಳಿಯ ಬಿ.ಎಂ.ಬಿ ವಿನಾಯಕ ಕಲಾಬಳಗದ ತಂಡದವರಿಂದ ವಚನ ಗಾಯನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಕನ್ನಡ ಸಾಹಿತ್ಯಕ್ಕೆ ಶರಣರು ನೀಡಿರುವ ಅಮೋಘ ಕೊಡುಗೆ ವಚನ ಸಾಹಿತ್ಯ ಎಂದು ಬಸವಕಲ್ಯಾಣ ಮಠದ ಮಹದೇವ ಸ್ವಾಮೀಜಿ ಅಭಿಪ್ರಾಯಪಟ್ಟರು.<br /> ಇಲ್ಲಿನ ಬಸವಕಲ್ಯಾಣ ಮಠದಲ್ಲಿ ನಡೆದ ಗುರುಪೂರ್ಣಿಮೆ ಚಿಂತನಗೋಷ್ಠಿ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಶರಣರ ಬೋಧನೆಗಳು ಸಾರ್ವಕಾಲಿಕವಾದವು. ಭೋಗ ಮತ್ತು ವಿಲಾಸ ಮನುಷ್ಯನನ್ನು ದುಃಖಕ್ಕೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.<br /> <br /> ಎಚ್.ಸಿ.ಪರಮಶಿವಯ್ಯ ಮಾತನಾಡಿ, ಶರಣರ ವಚನಗಳು ಅನುಭವದ ಸಂಪತ್ತಿನಿಂದ ಕೂಡಿವೆ. ವಿಚಾರ ಕ್ರಾಂತಿಗೆ ವಚನಗಳು ಮೂಲವಾಗಿವೆ ಎಂದು ವಿವರಿಸಿದರು.ದೊರೆಕಾವಲು ಶಿವರುದ್ರಪ್ಪ ಅಧ್ಯಕ್ಷತೆವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಪರಮಶಿವಯ್ಯ ಮತ್ತು ಎಚ್.ಎಸ್.ರುದ್ರೇಶಮೂರ್ತಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಭಂಜನ ಎಜುಕೇಶನ್ ಟ್ರಸ್ಟ್ನ ವಿ.ಎನ್.ರಮೇಶ್, ಚಿಕ್ಕ ಅಯ್ಯೂರು ಅನಾಥಾಶ್ರಮದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮತ್ತಿತರರು ಉಪಸ್ಥಿತರಿದ್ದರು. ಎಚ್.ಎಸ್.ರುದ್ರೇಶಮೂರ್ತಿ ಸ್ವಾಗತಿಸಿ, ನಿರೂಪಿಸಿದರು. ಬಯಂಡಹಳ್ಳಿಯ ಬಿ.ಎಂ.ಬಿ ವಿನಾಯಕ ಕಲಾಬಳಗದ ತಂಡದವರಿಂದ ವಚನ ಗಾಯನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>