<p><strong>ನವದೆಹಲಿ (ಐಎಎನ್ಎಸ್/ಪಿಟಿಐ): </strong>ಇದೇ ತಿಂಗಳ ಅಂತ್ಯದೊಳಗೆ `ರಾಷ್ಟ್ರೀಯ ಜಲ ನೀತಿ~ ಸಿದ್ಧವಾಗಲಿದೆ ಎಂದು ಜಲ ಸಂಪನ್ಮೂಲ ಸಚಿವ ಪವನ್ ಕುಮಾರ್ ಬನ್ಸಾಲ್ ಭರವಸೆ ನೀಡಿದರು.<br /> <br /> ಮಂಗಳವಾರದಿಂದ ಇಲ್ಲಿ ಆರಂಭವಾಗುವ `ಇಂಡಿಯಾ ವಾಟರ್ ವೀಕ್~ ಕಾರ್ಯಕ್ರಮ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ `ರಾಷ್ಟ್ರೀಯ ಜಲನೀತಿ~ಕರಡು ಸಿದ್ಧವಾಗಿದೆ. ಸಂಬಂಧಿಸಿದ ಇಲಾಖೆಗಳೊಂದಿಗೆ ಸಂವಾದ ಆಯೋಜಿಸುತ್ತಿದ್ದೇವೆ. ತಿಂಗಳ ಅಂತ್ಯದೊಳಗೆ ಅಂತಿಮರೂಪ ಪಡೆಯಲಿದೆ ಎಂದರು.<br /> <br /> <strong>`ವಾಟರ್ ವೀಕ್~ ಉದ್ಘಾಟನೆ:</strong><br /> `ಇಂಡಿಯಾ ವಾಟರ್ ವೀಕ್~ ಕಾರ್ಯಕ್ರಮವನ್ನು ಪ್ರಧಾನಿ ಮನಮೋಹನ್ ಸಿಂಗ್ ಉದ್ಘಾಟಿಸಲಿದ್ದಾರೆ. ನೀರಿಗೆ ಸಂಬಂಧಿಸಿದ ವಿಚಾರಗಳನ್ನು ಕಾರ್ಯಕ್ರಮದಲ್ಲಿ ಚರ್ಚಿಸಲಾಗುತ್ತದೆ.<br /> <br /> ಮೊದಲ ದಿನ ನೀರು, ಇಂಧನ ಮತ್ತು ಆಹಾರ ಸುರಕ್ಷತೆ ಕುರಿತು ಚರ್ಚೆ ನಡೆಯುತ್ತದೆ. ಇದೇ ಸಂದರ್ಭದಲ್ಲಿ `ವಾರಿಸ್~ (WARISWater Resources Info-m-ation System) ವೆಬ್ ಆಧಾರಿತ ಮಾಹಿತಿ ಪ್ರದರ್ಶನವಿದೆ.<br /> <br /> ಕಾರ್ಯಕ್ರಮದಲ್ಲಿ ವಿಶ್ವ ಮಟ್ಟದ ಜಲನೀತಿ ರೂಪಕರು, ಕೈಗಾರಿಕೋದ್ಯಮಿಗಳು, ತಂತ್ರಜ್ಞರು, ವೃತ್ತಿಪರರನ್ನು ಒಂದೇ ಸೂರಿನಡಿ ಸೇರಿಸಿ, ಜಾಗತಿಕ ಮಟ್ಟದಲ್ಲಿ ಎದುರಾಗಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಬನ್ಸಾಲ್ ವಿವರಿಸಿದರು.<br /> <br /> ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಿಂದ ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ಇವುಗಳ ಜೊತೆಗೆ ಆಫ್ಘಾನಿಸ್ತಾನ, ನೇಪಾಳ ಸೇರಿದಂತೆ 43 ರಾಷ್ಟ್ರದ ಜಲಸಂಪನ್ಮೂಲ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಐಎಎನ್ಎಸ್/ಪಿಟಿಐ): </strong>ಇದೇ ತಿಂಗಳ ಅಂತ್ಯದೊಳಗೆ `ರಾಷ್ಟ್ರೀಯ ಜಲ ನೀತಿ~ ಸಿದ್ಧವಾಗಲಿದೆ ಎಂದು ಜಲ ಸಂಪನ್ಮೂಲ ಸಚಿವ ಪವನ್ ಕುಮಾರ್ ಬನ್ಸಾಲ್ ಭರವಸೆ ನೀಡಿದರು.<br /> <br /> ಮಂಗಳವಾರದಿಂದ ಇಲ್ಲಿ ಆರಂಭವಾಗುವ `ಇಂಡಿಯಾ ವಾಟರ್ ವೀಕ್~ ಕಾರ್ಯಕ್ರಮ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ `ರಾಷ್ಟ್ರೀಯ ಜಲನೀತಿ~ಕರಡು ಸಿದ್ಧವಾಗಿದೆ. ಸಂಬಂಧಿಸಿದ ಇಲಾಖೆಗಳೊಂದಿಗೆ ಸಂವಾದ ಆಯೋಜಿಸುತ್ತಿದ್ದೇವೆ. ತಿಂಗಳ ಅಂತ್ಯದೊಳಗೆ ಅಂತಿಮರೂಪ ಪಡೆಯಲಿದೆ ಎಂದರು.<br /> <br /> <strong>`ವಾಟರ್ ವೀಕ್~ ಉದ್ಘಾಟನೆ:</strong><br /> `ಇಂಡಿಯಾ ವಾಟರ್ ವೀಕ್~ ಕಾರ್ಯಕ್ರಮವನ್ನು ಪ್ರಧಾನಿ ಮನಮೋಹನ್ ಸಿಂಗ್ ಉದ್ಘಾಟಿಸಲಿದ್ದಾರೆ. ನೀರಿಗೆ ಸಂಬಂಧಿಸಿದ ವಿಚಾರಗಳನ್ನು ಕಾರ್ಯಕ್ರಮದಲ್ಲಿ ಚರ್ಚಿಸಲಾಗುತ್ತದೆ.<br /> <br /> ಮೊದಲ ದಿನ ನೀರು, ಇಂಧನ ಮತ್ತು ಆಹಾರ ಸುರಕ್ಷತೆ ಕುರಿತು ಚರ್ಚೆ ನಡೆಯುತ್ತದೆ. ಇದೇ ಸಂದರ್ಭದಲ್ಲಿ `ವಾರಿಸ್~ (WARISWater Resources Info-m-ation System) ವೆಬ್ ಆಧಾರಿತ ಮಾಹಿತಿ ಪ್ರದರ್ಶನವಿದೆ.<br /> <br /> ಕಾರ್ಯಕ್ರಮದಲ್ಲಿ ವಿಶ್ವ ಮಟ್ಟದ ಜಲನೀತಿ ರೂಪಕರು, ಕೈಗಾರಿಕೋದ್ಯಮಿಗಳು, ತಂತ್ರಜ್ಞರು, ವೃತ್ತಿಪರರನ್ನು ಒಂದೇ ಸೂರಿನಡಿ ಸೇರಿಸಿ, ಜಾಗತಿಕ ಮಟ್ಟದಲ್ಲಿ ಎದುರಾಗಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಬನ್ಸಾಲ್ ವಿವರಿಸಿದರು.<br /> <br /> ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಿಂದ ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ಇವುಗಳ ಜೊತೆಗೆ ಆಫ್ಘಾನಿಸ್ತಾನ, ನೇಪಾಳ ಸೇರಿದಂತೆ 43 ರಾಷ್ಟ್ರದ ಜಲಸಂಪನ್ಮೂಲ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>