<p>ಬೆಂಗಳೂರು: `ಕರ್ನಾಟಕದ ಹಲವು ಕನ್ನಡಗಳ ನಡುವೆ ಒಂದು ಒಪ್ಪಿತ ಕನ್ನಡವನ್ನು ರೂಪಿಸಿದ ಕೀರ್ತಿ ಡಾ.ರಾಜ್ಕುಮಾರ್ ಅವರದ್ದು~ ಎಂದು ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಹೇಳಿದರು.<br /> <br /> ನಗರದಲ್ಲಿ ಮಂಗಳವಾರ ವಾರ್ತಾ ಇಲಾಖೆ ಆಯೋಜಿಸಿದ್ದ ರಾಜ್ ಕುಮಾರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.<br /> <br /> `ಕನ್ನಡದ ಮೊದಲ ಲಕ್ಷಣ ಗ್ರಂಥವಾದ ಕವಿರಾಜಮಾರ್ಗದಲ್ಲಿ ನಾಡಿನ ಹಲವು ಕನ್ನಡಗಳಿಂದ ಹೊಮ್ಮುವ ಒಂದು ಸಾಮಾನ್ಯ ಶುದ್ಧ ಕನ್ನಡವನ್ನು ರೂಪಿಸುವ ಮೂಲಕ ಕಾವೇರಿಯಿಂದ ಗೋದಾವರಿವರೆಗಿನ ಕನ್ನಡ ನಾಡನ್ನು ಒಂದು ಮಾಡಲು ಸಾಧ್ಯ ಎಂದು ಹೇಳಲಾಗಿದೆ. ಕವಿಮಾರ್ಗಕಾರನ ಈ ಆಶಯವನ್ನು ನಿಜವಾಗಿಸಿದವರು ರಾಜ್~ ಎಂದರು.<br /> <br /> `ರಾಜ್ ವಿನಯಕ್ಕೆ ಮಿತಿ ಇರಲಿಲ್ಲ. ಸಾಮಾಜಿಕ, ಪೌರಾಣಿಕ ಪಾತ್ರಗಳೆರಡರಲ್ಲೂ ಸಮರ್ಥವಾಗಿ ಪಾತ್ರ ನಿರ್ವಹಿಸಿದ ಸಮರ್ಥ ನಟ ರಾಜ್. ಅವರಿಗೆ ಸರಿಸಾಟಿಯಾಗುವ ನಟರು ಭಾರತೀಯ ಭಾಷೆಗಳಲ್ಲೇ ಇಲ್ಲ~ ಎಂದರು.<br /> <br /> ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, `ಮನುಷ್ಯ ಸಂಬಂಧಗಳೇ ಶಿಥಿಲಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ರಾಜ್ಕುಮಾರ್ ಅವರು ಆದರ್ಶವಾಗಿ ಕಾಣುತ್ತಾರೆ~ ಎಂದರು.<br /> <br /> ಸಮಾರಂಭದಲ್ಲಿ ರಾಜ್ಕುಮಾರ್ ಅಭಿನಯದ ಚಲನಚಿತ್ರಗಳ ಗೀತ - ನೃತ್ಯಗಳ ಪ್ರದರ್ಶನ ನಡೆಯಿತು. ಶಿವರಾಜ್ ಕುಮಾರ್ ಅವರು `ನಾ ನಿನ್ನ ಮರೆಯಲಾರೆ~ ಗೀತೆಯನ್ನು ಹಾಗೂ ಪುನೀತ್ ರಾಜ್ುಮಾರ್ ಅವರು `ಬಾನಿಗೊಂದು ಎಲ್ಲೆ ಎಲ್ಲಿದೆ~, `ಕಾಣದಂತೆ ಮಾಯವಾದನೋ~ ಗೀತೆಗಳನ್ನು ಹಾಡಿದರು.<br /> <br /> ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ, ಶಾಸಕ ದಿನೇಶ್ ಗುಂಡೂರಾವ್, ನಟ ರಾಘವೇಂದ್ರ ರಾಜ್ಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ಹಾಗೂ ನಟ ಜಗ್ಗೇಶ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ಕರ್ನಾಟಕದ ಹಲವು ಕನ್ನಡಗಳ ನಡುವೆ ಒಂದು ಒಪ್ಪಿತ ಕನ್ನಡವನ್ನು ರೂಪಿಸಿದ ಕೀರ್ತಿ ಡಾ.ರಾಜ್ಕುಮಾರ್ ಅವರದ್ದು~ ಎಂದು ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಹೇಳಿದರು.<br /> <br /> ನಗರದಲ್ಲಿ ಮಂಗಳವಾರ ವಾರ್ತಾ ಇಲಾಖೆ ಆಯೋಜಿಸಿದ್ದ ರಾಜ್ ಕುಮಾರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.<br /> <br /> `ಕನ್ನಡದ ಮೊದಲ ಲಕ್ಷಣ ಗ್ರಂಥವಾದ ಕವಿರಾಜಮಾರ್ಗದಲ್ಲಿ ನಾಡಿನ ಹಲವು ಕನ್ನಡಗಳಿಂದ ಹೊಮ್ಮುವ ಒಂದು ಸಾಮಾನ್ಯ ಶುದ್ಧ ಕನ್ನಡವನ್ನು ರೂಪಿಸುವ ಮೂಲಕ ಕಾವೇರಿಯಿಂದ ಗೋದಾವರಿವರೆಗಿನ ಕನ್ನಡ ನಾಡನ್ನು ಒಂದು ಮಾಡಲು ಸಾಧ್ಯ ಎಂದು ಹೇಳಲಾಗಿದೆ. ಕವಿಮಾರ್ಗಕಾರನ ಈ ಆಶಯವನ್ನು ನಿಜವಾಗಿಸಿದವರು ರಾಜ್~ ಎಂದರು.<br /> <br /> `ರಾಜ್ ವಿನಯಕ್ಕೆ ಮಿತಿ ಇರಲಿಲ್ಲ. ಸಾಮಾಜಿಕ, ಪೌರಾಣಿಕ ಪಾತ್ರಗಳೆರಡರಲ್ಲೂ ಸಮರ್ಥವಾಗಿ ಪಾತ್ರ ನಿರ್ವಹಿಸಿದ ಸಮರ್ಥ ನಟ ರಾಜ್. ಅವರಿಗೆ ಸರಿಸಾಟಿಯಾಗುವ ನಟರು ಭಾರತೀಯ ಭಾಷೆಗಳಲ್ಲೇ ಇಲ್ಲ~ ಎಂದರು.<br /> <br /> ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, `ಮನುಷ್ಯ ಸಂಬಂಧಗಳೇ ಶಿಥಿಲಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ರಾಜ್ಕುಮಾರ್ ಅವರು ಆದರ್ಶವಾಗಿ ಕಾಣುತ್ತಾರೆ~ ಎಂದರು.<br /> <br /> ಸಮಾರಂಭದಲ್ಲಿ ರಾಜ್ಕುಮಾರ್ ಅಭಿನಯದ ಚಲನಚಿತ್ರಗಳ ಗೀತ - ನೃತ್ಯಗಳ ಪ್ರದರ್ಶನ ನಡೆಯಿತು. ಶಿವರಾಜ್ ಕುಮಾರ್ ಅವರು `ನಾ ನಿನ್ನ ಮರೆಯಲಾರೆ~ ಗೀತೆಯನ್ನು ಹಾಗೂ ಪುನೀತ್ ರಾಜ್ುಮಾರ್ ಅವರು `ಬಾನಿಗೊಂದು ಎಲ್ಲೆ ಎಲ್ಲಿದೆ~, `ಕಾಣದಂತೆ ಮಾಯವಾದನೋ~ ಗೀತೆಗಳನ್ನು ಹಾಡಿದರು.<br /> <br /> ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ, ಶಾಸಕ ದಿನೇಶ್ ಗುಂಡೂರಾವ್, ನಟ ರಾಘವೇಂದ್ರ ರಾಜ್ಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ಹಾಗೂ ನಟ ಜಗ್ಗೇಶ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>