<p><strong>ಶೃಂಗೇರಿ : </strong>ಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಕನಿಷ್ಠ 7ರಿಂದ 8 ಬಾರಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಾಹನಗಳ ಮಾಲೀಕರು ಮತ್ತು ಪ್ರಯಾಣಿಕರು ಪರದಾಡುವಂತಾಗಿದೆ.<br /> <br /> ಎರಡು ವರ್ಷಗಳಿಂದ ಹೆಚ್ಚಾಗಿರುವ ವಾಹನಗಳು ಮತ್ತು ಶೃಂಗೇರಿಗೆ ಅಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು ವಾಹನ ನಿಲುಗಡೆ ಮತ್ತು ಸಂಚಾರ ವ್ಯವಸ್ಥೆಯಲ್ಲಿ ತೊಡಕು ಉಂಟಾಗಿದೆ. ಅಲ್ಲದೇ ರಸ್ತೆಯು ಕಿರಿದಾಗಿರುವುದರಿಂದ ಪುರದ್ವಾರದಿಂದ ಆಗಮಿಸುವ ಒಂದೇ ಒಂದು ದೊಡ್ಡ ವಾಹನ ಬಂದರೂ ಟ್ರಾಫಿಕ್ ಜಾಮ್ ಗ್ಯಾರಂಟಿಯಾಗಿದೆ. <br /> <br /> ಸೋಮವಾರ ಸಂತೆ ದಿನ ಟ್ರಾಫಿಕ್ ಜಾಮ್ ಆಗುವುದು ಮಾಮೂಲಿ ಸಂಗತಿ. ಮುಖ್ಯರಸ್ತೆಯ ಕೇಂದ್ರಬಿಂದು ಕಟ್ಟೆಬಾಗಿಲು ಬಳಿ ಪ್ರತಿನಿತ್ಯವು ಜಾಮ್ ಆಗುವುದು ಸರ್ವೇ ಸಾಮಾನ್ಯವಾಗಿದೆ. ಸರ್ಕಾರದಿಂದ ಮುಖ್ಯರಸ್ತೆ ಕಾಂಕ್ರಿಟ್ ರಸ್ತೆಯನ್ನಾಗಿಸಲು ಸುಮಾರು 5 ಕೋಟಿ ರೂ. ಅನುದಾನ ನೀಡಿದ್ದು, ಇದೀಗ ಮತ್ತೆ ರಸ್ತೆ ವಿಸ್ತರಣೆ ಬಗ್ಗೆ ಉಹಾಪೋಹಗಳು ಹಬ್ಬುತ್ತಲಿದೆ. <br /> <br /> ಪಟ್ಟಣದ ಸಮಾರಂಭವೊಂದರಲ್ಲಿ ಇತ್ತೀಚಿಗೆ ಶಾಸಕ ಡಿ.ಎನ್. ಜೀವರಾಜ್ ರಸ್ತೆ ವಿಸ್ತರಣೆ ಬಗ್ಗೆ ಆಗಬೇಕೇ ಬೇಡವೇ ಎಂಬುದನ್ನು ಪಟ್ಟಣದ ಜನರೇ ತೀರ್ಮಾನಿಸಬೇಕು ಎಂದಿದ್ದರು.<br /> <br /> <strong>ನಾಗರಿಕರು ಏನು ಹೇಳುತ್ತಾರೆ: </strong>ಸುಭಾಷ್ ಬೀದಿಯ ಕೊನೆಯ ಭಾಗದಲ್ಲಿ ರಸ್ತೆಯಲ್ಲಿ ಪ್ರಾಥಮಿಕ ಶಾಲೆ ನಿರ್ಮಿಸಲಾಗಿದೆ. ಭಾರತೀಬೀದಿಯ ನಿವಾಸಿಗಳು ಈಗ ಮನೆ ಮುಂಭಾಗ ಕಳೆದುಕೊಳ್ಳಬೇಕಾಗಿದೆ.ಕೆಲವು ಮನೆಯ ಮುಂಭಾಗ ಹೋದರೆ ಇದೇ ಮನೆಯೇ ಬಿದ್ದು ಹೋಗುತ್ತದೆ ಎನ್ನುತ್ತಾರೆ ಕಡೇಮನೆ ಗಣಪತಿ ಭಟ್ಟ.<br /> <br /> ರಸ್ತೆ ವಿಸ್ತರಣೆ ಹೆಸರಿನಲ್ಲಿ ಮನೆ ಗಳನ್ನು ಮತ್ತೊಮ್ಮೆ ಒಡೆಯುವುದು ಸರಿಯಲ್ಲ. ಹಿಂದೆ ಸಚಿವ ರೇವಣ್ಣರ ಕಾಲದಲ್ಲಿ ರಸ್ತೆ ವಿಸ್ತರಣೆಗೊಂಡಾಗ ಮುಖ್ಯರಸ್ತೆಯಲ್ಲಿರುವ ವಾಗೀಶ್ವರೀ ದೇವಸ್ಥಾನದ ಮುಂಭಾಗದಲ್ಲಿರುವ ಎರಡು ಆನೆಕಲ್ಲುಗಳನ್ನು ಕಿತ್ತು ಹಾಕಲಾಗಿತ್ತು.<br /> <br /> ಈ ಬಗ್ಗೆ ಖ್ಯಾತ ಜೋಯಿಸರು ಆನೆಕಲ್ಲು ಕಿತ್ತ ಸರ್ಕಾರ ಉಳಿಯು ವುದಿಲ್ಲ. ಅದಕ್ಕೆ ಕಾರಣರಾದವರು ಅಧಿಕಾರ ಕಳೆದುಕೊಳ್ಳುವುದು ನಿಶ್ಚಯ ಎಂದು ಪಂಥ ಕಟ್ಟಿದ್ದರು. ಅದರಂತೆ ನಡೆದು ಹೋಗಿರುವುದನ್ನು ಜ್ಞಾಪಿಸಿ ಕೊಳ್ಳಬೇಕು ಎಂದು ಪಟ್ಟಣದ ಮತ್ತೊಬ್ಬ ನಿವಾಸಿ ಹೇಳುತ್ತಾರೆ. <br /> <br /> ಮಧ್ಯರಸ್ತೆಯಲ್ಲಿ ನಿಲ್ಲಿಸುವ ವಾಹನ ಮಾಲೀಕರು ರಸ್ತೆ ಅಗಲೀಕರಣದ ನಂತರವೂ ನಿಲ್ಲಿಸುವುದಿಲ್ಲ ಎಂಬ ಗ್ಯಾರಂಟಿ ಏನು? ಎಂಬುದು ಪಟ್ಟಣದ ವರ್ತಕ ಎಸ್. ರಮಾನಂದರದ್ದು. <br /> <br /> ಮುಕ್ತ ಮನಸ್ಸಿನಿಂದ ಹಾಗೂ ಸ್ವಯಂ ಪ್ರೇರಣೆಯಿಂದ ವಿಸ್ತರಣೆ ಕಾರ್ಯವಾಗಬೇಕಿದೆ. ಸಮಸ್ಯೆಗಳು ಸಹಜ. ಅದನ್ನು ಪರಿಹರಿಸುವ ಕಾರ್ಯ ಜನಪ್ರತಿನಿಧಿಗಳಿಂದ ಆಗಬೇಕಾಗಿದೆ ಎನ್ನುತ್ತಾರೆ ವರ್ತಕ ಸಂಘದ ಅಧ್ಯಕ್ಷ ಗೇರ್ಬೈಲ್ ಶಂಕರಪ್ಪ. <br /> <br /> ಭಾರತೀಬೀದಿಗೆ ರಸ್ತೆ ಪರ್ಯಾಯವಾಗಿ ತುಂಗಾನದಿಯ ದಂಡೆ ಗಾಂಧಿ ಮೈದಾನದಲ್ಲಿ ಈಗಾಗಲೇ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ 500 ಮೀಟರ್ ರಸ್ತೆ ಕಾಮಗಾರಿ ಮುಕ್ತಾಯಗೊಂಡಿದೆ. ಇನ್ನುಳಿದ ಕಾಮಗಾರಿ ತುಂಗಾನದಿ ಮೇಲೆ ರಸ್ತೆ ನಿರ್ಮಿಸಬೇಕಿದೆ. ಕೇವಲ 4 ತಿಂಗಳು ಮಾತ್ರ ಕಾಮಗಾರಿ ನಡೆಸಲು ಸಾಧ್ಯ. <br /> <br /> ಮಳೆಗಾಲದ ಸಮಯದಲ್ಲಿ ಕಾಮಗಾರಿ ನಡೆಸಲು ಕಷ್ಟಸಾಧ್ಯ. 2012ರ ಅಂತ್ಯಕ್ಕೆ ಪರ್ಯಾಯ ರಸ್ತೆ ಸಿದ್ಧಗೊಳ್ಳಲಿದೆ. ಮುಂದೊಂದು ದಿನ ತುಂಗಾನದಿಯ ಪಕ್ಕದಲ್ಲಿ ರಸ್ತೆ ನಿರ್ಮಿಸಿರುವುದರಿಂದ ಪ್ರೇಕ್ಷಣಿಯ ಸ್ಥಳವೂ ಆಗಬಹುದು ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಸದಸ್ಯ ಟಿ.ಕೆ. ಪರಾಶರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶೃಂಗೇರಿ : </strong>ಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಕನಿಷ್ಠ 7ರಿಂದ 8 ಬಾರಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಾಹನಗಳ ಮಾಲೀಕರು ಮತ್ತು ಪ್ರಯಾಣಿಕರು ಪರದಾಡುವಂತಾಗಿದೆ.<br /> <br /> ಎರಡು ವರ್ಷಗಳಿಂದ ಹೆಚ್ಚಾಗಿರುವ ವಾಹನಗಳು ಮತ್ತು ಶೃಂಗೇರಿಗೆ ಅಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು ವಾಹನ ನಿಲುಗಡೆ ಮತ್ತು ಸಂಚಾರ ವ್ಯವಸ್ಥೆಯಲ್ಲಿ ತೊಡಕು ಉಂಟಾಗಿದೆ. ಅಲ್ಲದೇ ರಸ್ತೆಯು ಕಿರಿದಾಗಿರುವುದರಿಂದ ಪುರದ್ವಾರದಿಂದ ಆಗಮಿಸುವ ಒಂದೇ ಒಂದು ದೊಡ್ಡ ವಾಹನ ಬಂದರೂ ಟ್ರಾಫಿಕ್ ಜಾಮ್ ಗ್ಯಾರಂಟಿಯಾಗಿದೆ. <br /> <br /> ಸೋಮವಾರ ಸಂತೆ ದಿನ ಟ್ರಾಫಿಕ್ ಜಾಮ್ ಆಗುವುದು ಮಾಮೂಲಿ ಸಂಗತಿ. ಮುಖ್ಯರಸ್ತೆಯ ಕೇಂದ್ರಬಿಂದು ಕಟ್ಟೆಬಾಗಿಲು ಬಳಿ ಪ್ರತಿನಿತ್ಯವು ಜಾಮ್ ಆಗುವುದು ಸರ್ವೇ ಸಾಮಾನ್ಯವಾಗಿದೆ. ಸರ್ಕಾರದಿಂದ ಮುಖ್ಯರಸ್ತೆ ಕಾಂಕ್ರಿಟ್ ರಸ್ತೆಯನ್ನಾಗಿಸಲು ಸುಮಾರು 5 ಕೋಟಿ ರೂ. ಅನುದಾನ ನೀಡಿದ್ದು, ಇದೀಗ ಮತ್ತೆ ರಸ್ತೆ ವಿಸ್ತರಣೆ ಬಗ್ಗೆ ಉಹಾಪೋಹಗಳು ಹಬ್ಬುತ್ತಲಿದೆ. <br /> <br /> ಪಟ್ಟಣದ ಸಮಾರಂಭವೊಂದರಲ್ಲಿ ಇತ್ತೀಚಿಗೆ ಶಾಸಕ ಡಿ.ಎನ್. ಜೀವರಾಜ್ ರಸ್ತೆ ವಿಸ್ತರಣೆ ಬಗ್ಗೆ ಆಗಬೇಕೇ ಬೇಡವೇ ಎಂಬುದನ್ನು ಪಟ್ಟಣದ ಜನರೇ ತೀರ್ಮಾನಿಸಬೇಕು ಎಂದಿದ್ದರು.<br /> <br /> <strong>ನಾಗರಿಕರು ಏನು ಹೇಳುತ್ತಾರೆ: </strong>ಸುಭಾಷ್ ಬೀದಿಯ ಕೊನೆಯ ಭಾಗದಲ್ಲಿ ರಸ್ತೆಯಲ್ಲಿ ಪ್ರಾಥಮಿಕ ಶಾಲೆ ನಿರ್ಮಿಸಲಾಗಿದೆ. ಭಾರತೀಬೀದಿಯ ನಿವಾಸಿಗಳು ಈಗ ಮನೆ ಮುಂಭಾಗ ಕಳೆದುಕೊಳ್ಳಬೇಕಾಗಿದೆ.ಕೆಲವು ಮನೆಯ ಮುಂಭಾಗ ಹೋದರೆ ಇದೇ ಮನೆಯೇ ಬಿದ್ದು ಹೋಗುತ್ತದೆ ಎನ್ನುತ್ತಾರೆ ಕಡೇಮನೆ ಗಣಪತಿ ಭಟ್ಟ.<br /> <br /> ರಸ್ತೆ ವಿಸ್ತರಣೆ ಹೆಸರಿನಲ್ಲಿ ಮನೆ ಗಳನ್ನು ಮತ್ತೊಮ್ಮೆ ಒಡೆಯುವುದು ಸರಿಯಲ್ಲ. ಹಿಂದೆ ಸಚಿವ ರೇವಣ್ಣರ ಕಾಲದಲ್ಲಿ ರಸ್ತೆ ವಿಸ್ತರಣೆಗೊಂಡಾಗ ಮುಖ್ಯರಸ್ತೆಯಲ್ಲಿರುವ ವಾಗೀಶ್ವರೀ ದೇವಸ್ಥಾನದ ಮುಂಭಾಗದಲ್ಲಿರುವ ಎರಡು ಆನೆಕಲ್ಲುಗಳನ್ನು ಕಿತ್ತು ಹಾಕಲಾಗಿತ್ತು.<br /> <br /> ಈ ಬಗ್ಗೆ ಖ್ಯಾತ ಜೋಯಿಸರು ಆನೆಕಲ್ಲು ಕಿತ್ತ ಸರ್ಕಾರ ಉಳಿಯು ವುದಿಲ್ಲ. ಅದಕ್ಕೆ ಕಾರಣರಾದವರು ಅಧಿಕಾರ ಕಳೆದುಕೊಳ್ಳುವುದು ನಿಶ್ಚಯ ಎಂದು ಪಂಥ ಕಟ್ಟಿದ್ದರು. ಅದರಂತೆ ನಡೆದು ಹೋಗಿರುವುದನ್ನು ಜ್ಞಾಪಿಸಿ ಕೊಳ್ಳಬೇಕು ಎಂದು ಪಟ್ಟಣದ ಮತ್ತೊಬ್ಬ ನಿವಾಸಿ ಹೇಳುತ್ತಾರೆ. <br /> <br /> ಮಧ್ಯರಸ್ತೆಯಲ್ಲಿ ನಿಲ್ಲಿಸುವ ವಾಹನ ಮಾಲೀಕರು ರಸ್ತೆ ಅಗಲೀಕರಣದ ನಂತರವೂ ನಿಲ್ಲಿಸುವುದಿಲ್ಲ ಎಂಬ ಗ್ಯಾರಂಟಿ ಏನು? ಎಂಬುದು ಪಟ್ಟಣದ ವರ್ತಕ ಎಸ್. ರಮಾನಂದರದ್ದು. <br /> <br /> ಮುಕ್ತ ಮನಸ್ಸಿನಿಂದ ಹಾಗೂ ಸ್ವಯಂ ಪ್ರೇರಣೆಯಿಂದ ವಿಸ್ತರಣೆ ಕಾರ್ಯವಾಗಬೇಕಿದೆ. ಸಮಸ್ಯೆಗಳು ಸಹಜ. ಅದನ್ನು ಪರಿಹರಿಸುವ ಕಾರ್ಯ ಜನಪ್ರತಿನಿಧಿಗಳಿಂದ ಆಗಬೇಕಾಗಿದೆ ಎನ್ನುತ್ತಾರೆ ವರ್ತಕ ಸಂಘದ ಅಧ್ಯಕ್ಷ ಗೇರ್ಬೈಲ್ ಶಂಕರಪ್ಪ. <br /> <br /> ಭಾರತೀಬೀದಿಗೆ ರಸ್ತೆ ಪರ್ಯಾಯವಾಗಿ ತುಂಗಾನದಿಯ ದಂಡೆ ಗಾಂಧಿ ಮೈದಾನದಲ್ಲಿ ಈಗಾಗಲೇ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ 500 ಮೀಟರ್ ರಸ್ತೆ ಕಾಮಗಾರಿ ಮುಕ್ತಾಯಗೊಂಡಿದೆ. ಇನ್ನುಳಿದ ಕಾಮಗಾರಿ ತುಂಗಾನದಿ ಮೇಲೆ ರಸ್ತೆ ನಿರ್ಮಿಸಬೇಕಿದೆ. ಕೇವಲ 4 ತಿಂಗಳು ಮಾತ್ರ ಕಾಮಗಾರಿ ನಡೆಸಲು ಸಾಧ್ಯ. <br /> <br /> ಮಳೆಗಾಲದ ಸಮಯದಲ್ಲಿ ಕಾಮಗಾರಿ ನಡೆಸಲು ಕಷ್ಟಸಾಧ್ಯ. 2012ರ ಅಂತ್ಯಕ್ಕೆ ಪರ್ಯಾಯ ರಸ್ತೆ ಸಿದ್ಧಗೊಳ್ಳಲಿದೆ. ಮುಂದೊಂದು ದಿನ ತುಂಗಾನದಿಯ ಪಕ್ಕದಲ್ಲಿ ರಸ್ತೆ ನಿರ್ಮಿಸಿರುವುದರಿಂದ ಪ್ರೇಕ್ಷಣಿಯ ಸ್ಥಳವೂ ಆಗಬಹುದು ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಸದಸ್ಯ ಟಿ.ಕೆ. ಪರಾಶರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>