<p>ಸಪ್ತಕ, ಬಾಲಚಂದ್ರ ನಾಯ್ಕನಕಟ್ಟೆ ಟ್ರಸ್ಟ್ ಹಾಗೂ ಕೆರೆಮನೆ ಯಕ್ಷ ನಕ್ಷತ್ರಗಳ ನೆನಪಿನಲ್ಲಿ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ಇದೇ ಭಾನುವಾರ ಶ್ರೀಕೃಷ್ಣ ಸಂಧಾನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. <br /> <br /> ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎಲ್.ಸಾಮಗ ದುರ್ಯೋಧನನ ಪಾತ್ರದಲ್ಲಿ ಹಾಗೂ ಕೆರೆಮನೆ ಶಿವಾನಂದ ಹೆಗಡೆ ಶ್ರೀಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನಂತ ಹೆಗಡೆ (ಭಾಗವತರು), ಪರಮೇಶ್ವರ ಹೆಗಡೆ, ತಾರೆಸರ (ಮದ್ದಳೆ), ಗಜಾನನ ಹೆಗಡೆ (ಚಂಡೆ)ಯಲ್ಲಿ ಸಹಕರಿಸುವರು.<br /> <br /> ಕಾರ್ಯಕ್ರಮದಲ್ಲಿ ಪತ್ರಕರ್ತ ಸಚ್ಚಿದಾನಂದ ಹೆಗಡೆ ಶಿರಸಿ ಹಾಗೂ ಸಮಾಜ ಸೇವಕ ಎನ್.ಆರ್.ನಾರಾಯಣ ರಾವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ವಿ.ಆರ್.ಹೆಗಡೆ ಅವರನ್ನು ಸನ್ಮಾನಿಸಲಾಗುವುದು. <br /> <br /> ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಡತೋಕ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ಹೆಗಡೆ ಎಂ.ಎ, ಎಲ್.ಎಲ್.ಬಿ.ಪದವೀಧರರು. ಅಧ್ಯಾಪಕನಾಗಿ ವೃತ್ತಿ ಆರಂಭಿಸಿದರೂ ಸುಪ್ತವಾದ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ತುಡಿತಗಳ ಒಲವಿನಿಂದ ಕೇಂದ್ರ ಸರ್ಕಾರದ ನೌಕರಿಗೂ ರಾಜೀನಾಮೆ ನೀಡಿದವರು. <br /> <br /> 2001ರಲ್ಲಿ ಆರಂಭವಾದ `ಅಗ್ನಿ ಸೇವಾ ಟ್ರಸ್ಟ್~ ಇದರ ಕಾರ್ಯಾಧ್ಯಕ್ಷರು ಹಾಗೂ `ಯಕ್ಷಗಾನ ಯೋಗಕ್ಷೇಮ ಅಭಿಯಾನ~ದ ಸಾರಥಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕಲಾ ಸೇವಕ ಹಾಗೂ ಕಲಾ ಪೋಷಕರಾಗಿ ಇವರು ಮಾಡಿರುವ ಸೇವೆ ಪರಿಗಣಿಸಿ ಭಾನುವಾರ ಹೆಗಡೆ ಅವರನ್ನು ಸನ್ಮಾನಿಸಲಾಗುವುದು.<br /> <strong>ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 5. </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಪ್ತಕ, ಬಾಲಚಂದ್ರ ನಾಯ್ಕನಕಟ್ಟೆ ಟ್ರಸ್ಟ್ ಹಾಗೂ ಕೆರೆಮನೆ ಯಕ್ಷ ನಕ್ಷತ್ರಗಳ ನೆನಪಿನಲ್ಲಿ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ಇದೇ ಭಾನುವಾರ ಶ್ರೀಕೃಷ್ಣ ಸಂಧಾನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. <br /> <br /> ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎಲ್.ಸಾಮಗ ದುರ್ಯೋಧನನ ಪಾತ್ರದಲ್ಲಿ ಹಾಗೂ ಕೆರೆಮನೆ ಶಿವಾನಂದ ಹೆಗಡೆ ಶ್ರೀಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನಂತ ಹೆಗಡೆ (ಭಾಗವತರು), ಪರಮೇಶ್ವರ ಹೆಗಡೆ, ತಾರೆಸರ (ಮದ್ದಳೆ), ಗಜಾನನ ಹೆಗಡೆ (ಚಂಡೆ)ಯಲ್ಲಿ ಸಹಕರಿಸುವರು.<br /> <br /> ಕಾರ್ಯಕ್ರಮದಲ್ಲಿ ಪತ್ರಕರ್ತ ಸಚ್ಚಿದಾನಂದ ಹೆಗಡೆ ಶಿರಸಿ ಹಾಗೂ ಸಮಾಜ ಸೇವಕ ಎನ್.ಆರ್.ನಾರಾಯಣ ರಾವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ವಿ.ಆರ್.ಹೆಗಡೆ ಅವರನ್ನು ಸನ್ಮಾನಿಸಲಾಗುವುದು. <br /> <br /> ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಡತೋಕ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ಹೆಗಡೆ ಎಂ.ಎ, ಎಲ್.ಎಲ್.ಬಿ.ಪದವೀಧರರು. ಅಧ್ಯಾಪಕನಾಗಿ ವೃತ್ತಿ ಆರಂಭಿಸಿದರೂ ಸುಪ್ತವಾದ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ತುಡಿತಗಳ ಒಲವಿನಿಂದ ಕೇಂದ್ರ ಸರ್ಕಾರದ ನೌಕರಿಗೂ ರಾಜೀನಾಮೆ ನೀಡಿದವರು. <br /> <br /> 2001ರಲ್ಲಿ ಆರಂಭವಾದ `ಅಗ್ನಿ ಸೇವಾ ಟ್ರಸ್ಟ್~ ಇದರ ಕಾರ್ಯಾಧ್ಯಕ್ಷರು ಹಾಗೂ `ಯಕ್ಷಗಾನ ಯೋಗಕ್ಷೇಮ ಅಭಿಯಾನ~ದ ಸಾರಥಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕಲಾ ಸೇವಕ ಹಾಗೂ ಕಲಾ ಪೋಷಕರಾಗಿ ಇವರು ಮಾಡಿರುವ ಸೇವೆ ಪರಿಗಣಿಸಿ ಭಾನುವಾರ ಹೆಗಡೆ ಅವರನ್ನು ಸನ್ಮಾನಿಸಲಾಗುವುದು.<br /> <strong>ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 5. </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>