<p>ಹುಬ್ಬಳ್ಳಿ: ಮಧ್ಯಾಹ್ನವಾದರೂ ಭಾನುವಾರ ಅವಳಿನಗರದಲ್ಲಿ ಚುಮುಚುಮು ಚಳಿ. ಚಳಿಗೆ ಕೈಜೋಡಿಸಿ ಯುಗಳ ಗೀತೆ ಹಾಡಿದ ಸಂಕ್ರಾಂತಿ ಭೋಜನದ ಸವಿ! <br /> <br /> ಸಂಕ್ರಮಣದ ದಿನ ಮನೆಯಿಂದ ಹೊರಗೆ ಹೋಗಿ ಊಟ ಮಾಡುವುದು ಇಲ್ಲಿನ ಸಂಪ್ರದಾಯ. ಹೀಗಾಗಿ ಹುಬ್ಬಳ್ಳಿಯ ನೃಪತುಂಗ ಬೆಟ್ಟ, ಮಹಾತ್ಮ ಗಾಂಧಿ ಉದ್ಯಾನ, ಧಾರವಾಡದ ಆಝಾದ್ ಪಾರ್ಕ್, ಶಾಲ್ಮಲಾ ಉಗಮ ಸ್ಥಾನ... ಮೊದಲಾದೆಡೆ ಜನಜಾತ್ರೆಯೇ ಸೇರಿತ್ತು.<br /> <br /> ಖಡಕ್ ಸಜ್ಜಿ ರೊಟ್ಟಿ, ಚಪಾತಿ ಪಲ್ಯ, ಮುಳಗಾಯಿ ಎಣಗಾಯಿ, ಶೇಂಗಾ ಚಟ್ನಿ, ಮೇಲೊಂದಿಷ್ಟು ಕೆನೆ ಮೊಸರು... ಆಹಾ...! ಬಾಯಲ್ಲಿ ನೀರೂರಿತೆ ? ಸ್ವಲ್ಪ ತಾಳಿ. ಇನ್ನೂ ಮುಗಿದಿಲ್ಲ.. ಸಬ್ಬೆ ಸೊಪ್ಪು- ಹೆಸರು ಕಾಳು ಪಲ್ಯ, ಶೇಂಗಾ ಹೋಳಿಗೆ, ಹುಳಿ ಬುತ್ತಿ, ಮೊಸರನ್ನ, ಮಾದ್ಲಿ... ಹೀಗೆ ಹಲವು ಬಗೆಯ ತಿನಿಸುಗಳು ಹಬ್ಬದ ಊಟಕ್ಕೆ ಕಳೆಗಟ್ಟಿಸಿದ್ದವು.<br /> <br /> ಹೊಟ್ಟೆ ತುಂಬಿ ಬಿರಿದರೂ ಹಬ್ಬಕ್ಕಾಗಿ ಸಿದ್ಧಪಡಿಸಲಾಗಿದ್ದ ಎಲ್ಲ ತಿನಿಸುಗಳನ್ನೂ ತಿನ್ನಲೇಬೇಕು ಎನ್ನುವ ಪ್ರೀತಿಯ ಕಟ್ಟಪ್ಪಣೆ ಮುದ ನೀಡುವಂತಿತ್ತು.<br /> <br /> ಭೋಜನದ ನಂತರ ಬಾಳೆಹಣ್ಣು, ಪಾನ್ ತಿನ್ನಲೂ ಹೊಟ್ಟೆಯಲ್ಲಿ ಜಾಗವಿರಲಿಲ್ಲ ಎನ್ನಿ.<br /> ಇವೆಲ್ಲ ಸಂಕ್ರಾಂತಿ ಭೋಜನದ ವಿಶೇಷತೆಗಳು. ಹಬ್ಬ ಅಂದ್ರೆನೆ ಊಟ. ಅದರಲ್ಲೂ ಸಂಕ್ರಾಂತಿ ಊಟದ ಸವಿ ಉಳಿದೆಲ್ಲದಕ್ಕಿಂತ ಭಿನ್ನ. ಮಾತಿನ ನಡುವೆ ಊಟ ಖಾಲಿಯಾಗಿದ್ದೇ ಗೊತ್ತಾಗುತ್ತಿರಲಿಲ್ಲ.<br /> <br /> ಊಟ ಮುಗಿಸಿ ಮೇಲೇಳುವ ಹೊತ್ತಿಗೆ ನಿದ್ದೆಯೂ ಶುರು. ವಿಶ್ರಾಂತಿಗಾಗಿ ಉದ್ಯಾನದಲ್ಲಿಯೇ ಮೈಯೊಡ್ಡಿ ಒಂದಿಷ್ಟು ನಿದ್ದೆ. ಆಮೇಲೆ ಮಕ್ಕಳು, ಮನೆಯವರೊಂದಿಗೆ ಮಾತು, ಹರಟೆ. ಮಕ್ಕಳ ಆಟ.<br /> <br /> ಸಂಜೆಗತ್ತಲು ಸೋಮವಾರಕ್ಕೆ ಮುನ್ನುಡಿ ಬರೆಯುತ್ತಿದ್ದಂತೇ ಮನೆಯತ್ತ ಹೆಜ್ಜೆ. ನಂತರ ಎಳ್ಳು-ಬೆಲ್ಲ ವಿನಿಮಯದ ಸಂಭ್ರಮ. <br /> <br /> ಪ್ರವೇಶ ನಿಷೇಧ: ಹುಬ್ಬಳ್ಳಿಯ ಉಣಕಲ್ಲ ಉದ್ಯಾನದಲ್ಲಿ ಸಂಕ್ರಾಂತಿ ಭೋಜನ ಮಾಡಬೇಕು ಎಂಬ ಅಪೇಕ್ಷೆಗೆ ಈ ಬಾರಿ ಅವಕಾಶ ಇರಲಿಲ್ಲ. ಉಣಕಲ್ಲ ಉದ್ಯಾನ ನವೀಕರಣಗೊಳ್ಳುತ್ತಿರುವುದರಿಂದ ಜಿಲ್ಲಾಡಳಿತ ಪ್ರವೇಶಕ್ಕೆ ನಿರ್ಬಂಧವನ್ನು ಹೇರಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಮಧ್ಯಾಹ್ನವಾದರೂ ಭಾನುವಾರ ಅವಳಿನಗರದಲ್ಲಿ ಚುಮುಚುಮು ಚಳಿ. ಚಳಿಗೆ ಕೈಜೋಡಿಸಿ ಯುಗಳ ಗೀತೆ ಹಾಡಿದ ಸಂಕ್ರಾಂತಿ ಭೋಜನದ ಸವಿ! <br /> <br /> ಸಂಕ್ರಮಣದ ದಿನ ಮನೆಯಿಂದ ಹೊರಗೆ ಹೋಗಿ ಊಟ ಮಾಡುವುದು ಇಲ್ಲಿನ ಸಂಪ್ರದಾಯ. ಹೀಗಾಗಿ ಹುಬ್ಬಳ್ಳಿಯ ನೃಪತುಂಗ ಬೆಟ್ಟ, ಮಹಾತ್ಮ ಗಾಂಧಿ ಉದ್ಯಾನ, ಧಾರವಾಡದ ಆಝಾದ್ ಪಾರ್ಕ್, ಶಾಲ್ಮಲಾ ಉಗಮ ಸ್ಥಾನ... ಮೊದಲಾದೆಡೆ ಜನಜಾತ್ರೆಯೇ ಸೇರಿತ್ತು.<br /> <br /> ಖಡಕ್ ಸಜ್ಜಿ ರೊಟ್ಟಿ, ಚಪಾತಿ ಪಲ್ಯ, ಮುಳಗಾಯಿ ಎಣಗಾಯಿ, ಶೇಂಗಾ ಚಟ್ನಿ, ಮೇಲೊಂದಿಷ್ಟು ಕೆನೆ ಮೊಸರು... ಆಹಾ...! ಬಾಯಲ್ಲಿ ನೀರೂರಿತೆ ? ಸ್ವಲ್ಪ ತಾಳಿ. ಇನ್ನೂ ಮುಗಿದಿಲ್ಲ.. ಸಬ್ಬೆ ಸೊಪ್ಪು- ಹೆಸರು ಕಾಳು ಪಲ್ಯ, ಶೇಂಗಾ ಹೋಳಿಗೆ, ಹುಳಿ ಬುತ್ತಿ, ಮೊಸರನ್ನ, ಮಾದ್ಲಿ... ಹೀಗೆ ಹಲವು ಬಗೆಯ ತಿನಿಸುಗಳು ಹಬ್ಬದ ಊಟಕ್ಕೆ ಕಳೆಗಟ್ಟಿಸಿದ್ದವು.<br /> <br /> ಹೊಟ್ಟೆ ತುಂಬಿ ಬಿರಿದರೂ ಹಬ್ಬಕ್ಕಾಗಿ ಸಿದ್ಧಪಡಿಸಲಾಗಿದ್ದ ಎಲ್ಲ ತಿನಿಸುಗಳನ್ನೂ ತಿನ್ನಲೇಬೇಕು ಎನ್ನುವ ಪ್ರೀತಿಯ ಕಟ್ಟಪ್ಪಣೆ ಮುದ ನೀಡುವಂತಿತ್ತು.<br /> <br /> ಭೋಜನದ ನಂತರ ಬಾಳೆಹಣ್ಣು, ಪಾನ್ ತಿನ್ನಲೂ ಹೊಟ್ಟೆಯಲ್ಲಿ ಜಾಗವಿರಲಿಲ್ಲ ಎನ್ನಿ.<br /> ಇವೆಲ್ಲ ಸಂಕ್ರಾಂತಿ ಭೋಜನದ ವಿಶೇಷತೆಗಳು. ಹಬ್ಬ ಅಂದ್ರೆನೆ ಊಟ. ಅದರಲ್ಲೂ ಸಂಕ್ರಾಂತಿ ಊಟದ ಸವಿ ಉಳಿದೆಲ್ಲದಕ್ಕಿಂತ ಭಿನ್ನ. ಮಾತಿನ ನಡುವೆ ಊಟ ಖಾಲಿಯಾಗಿದ್ದೇ ಗೊತ್ತಾಗುತ್ತಿರಲಿಲ್ಲ.<br /> <br /> ಊಟ ಮುಗಿಸಿ ಮೇಲೇಳುವ ಹೊತ್ತಿಗೆ ನಿದ್ದೆಯೂ ಶುರು. ವಿಶ್ರಾಂತಿಗಾಗಿ ಉದ್ಯಾನದಲ್ಲಿಯೇ ಮೈಯೊಡ್ಡಿ ಒಂದಿಷ್ಟು ನಿದ್ದೆ. ಆಮೇಲೆ ಮಕ್ಕಳು, ಮನೆಯವರೊಂದಿಗೆ ಮಾತು, ಹರಟೆ. ಮಕ್ಕಳ ಆಟ.<br /> <br /> ಸಂಜೆಗತ್ತಲು ಸೋಮವಾರಕ್ಕೆ ಮುನ್ನುಡಿ ಬರೆಯುತ್ತಿದ್ದಂತೇ ಮನೆಯತ್ತ ಹೆಜ್ಜೆ. ನಂತರ ಎಳ್ಳು-ಬೆಲ್ಲ ವಿನಿಮಯದ ಸಂಭ್ರಮ. <br /> <br /> ಪ್ರವೇಶ ನಿಷೇಧ: ಹುಬ್ಬಳ್ಳಿಯ ಉಣಕಲ್ಲ ಉದ್ಯಾನದಲ್ಲಿ ಸಂಕ್ರಾಂತಿ ಭೋಜನ ಮಾಡಬೇಕು ಎಂಬ ಅಪೇಕ್ಷೆಗೆ ಈ ಬಾರಿ ಅವಕಾಶ ಇರಲಿಲ್ಲ. ಉಣಕಲ್ಲ ಉದ್ಯಾನ ನವೀಕರಣಗೊಳ್ಳುತ್ತಿರುವುದರಿಂದ ಜಿಲ್ಲಾಡಳಿತ ಪ್ರವೇಶಕ್ಕೆ ನಿರ್ಬಂಧವನ್ನು ಹೇರಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>