<p><strong>ವೈದ್ಯರ ಮುಷ್ಕರ: 5 ರೋಗಿಗಳ ಸಾವು<br /> ಲಖನೌ (ಐಎಎನ್ಎಸ್): </strong>ಇಲ್ಲಿನ ಐದು ಆಸ್ಪತ್ರೆಗಳ ವೈದ್ಯರು ಶನಿವಾರ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಐವರು ರೋಗಿಗಳು ಸೂಕ್ತ ಚಿಕಿತ್ಸೆ ಇಲ್ಲದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>35ಕ್ಕೂ ಹೆಚ್ಚು ವೈದ್ಯರನ್ನು ಬಂಧಿಸಿದ ಕ್ರಮದ ವಿರುದ್ಧ ಪ್ರತಿಭಟಿಸಿದ ವೈದ್ಯರು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.<br /> <br /> <span style="font-size: 26px;">ರೋಗಿಯೊಬ್ಬರಿಗೆ ಕೂಡಲೇ ಚಿಕಿತ್ಸೆ ನೀಡುವಂತೆ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಲಂಕಿ ವೈದ್ಯರಿಗೆ ಹೇಳುವಂತೆ ರೋಗಿಯ ಸಂಬಂಧಿಕರಿಗೆ ಹೇಳಿದ್ದರು. ಆದರೆ ಶುಕ್ರವಾರ ಈ ಶಿಫಾರಸನ್ನು ವೈದ್ಯರು ತಿರಸ್ಕರಿಸಿದ್ದರು.</span><br /> <br /> <span style="font-size: 26px;">ನಂತರ ಶಾಸಕರು ತಮ್ಮ ಅಂಗರಕ್ಷಕನನ್ನು ಕಳುಹಿಸಿದಾಗಲೂ ವೈದ್ಯರು ಅವರ ಮಾತನ್ನು ಕೇಳಲಿಲ್ಲ. ಇದರಿಂದ ಕೋಪಗೊಂಡ ಶಾಸಕರು ಖುದ್ದಾಗಿ ವೈದ್ಯರ ಬಳಿ ಬಂದಾಗ ವೈದ್ಯರು ಮತ್ತು ಶಾಸಕರ ನಡುವೆ ಘರ್ಷಣೆ ನಡೆದು ಸೊಲಂಕಿ ಅವರ ತಲೆಗೆ ಏಟು ಬಿದ್ದಿದೆ. ಈ ಹಿನ್ನೆಲೆಯಲ್ಲಿ ವೈದ್ಯರನ್ನು ಬಂಧಿಸಲಾಗಿದೆ. ಬಂಧಿಸಲಾದ ವೈದ್ಯರನ್ನು ಬಿಡುಗಡೆ ಮಾಡುವವರೆಗೂ ತಾವು ಮುಷ್ಕರ ಕೈಬಿಡುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೇ, ಮರಣ ಪ್ರಮಾಣ ಪತ್ರಕ್ಕೆ ಸಹಿ ಹಾಕಲೂ ಅವರು ನಿರಾಕರಿಸಿದ್ದಾರೆ.</span></p>.<p><strong>ರಾಹುಲ್ ಭೇಟಿ: ಪತ್ನಿ ದಹಿಸಿದ ಪತಿ</strong><br /> <strong>ಗುವಾಹಟಿ (ಐಎಎನ್ಎಸ್):</strong> ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಅವರನ್ನು ಭೇಟಿಯಾಗಲು ಬಂದ ಮಹಿಳೆಯೊಬ್ಬರನ್ನು ಆಕೆಯ ಪತಿ ಸುಟ್ಟು ಹಾಕಿ ಕೊಲೆ ಮಾಡಿದ್ದಾನೆ.<br /> <br /> ಅಸ್ಸಾಂ ಪ್ರಚಾರದಲ್ಲಿದ್ದಾಗ ರಾಹುಲ್ ಗಾಂಧಿ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ್ದರು. ಆದರೆ ಈ ಸಮಾವೇಶದಲ್ಲಿ ಪಾಲ್ಗೊಳ್ಳದ ಮಹಿಳೆಯನ್ನು ಆಕೆಯ ಪತಿ ಬೆಂಕಿ ಹಚ್ಚಿ, ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.<br /> <br /> ‘ಟಿವಿ ವಾಹಿನಿಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ರಾಹುಲ್ಗೆ ಮುತ್ತು ಕೊಟ್ಟ ಮಹಿಳೆ ಈಗ ಕೊಲೆಯಾದ ಮಹಿಳೆ ಅಲ್ಲ’ ಎಂದು ಜೊರ್ಹಾತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮನ್ಜೀತ್ ಕೌರ್ ಸ್ಪಷ್ಟಪಡಿಸಿದ್ದಾರೆ.<br /> <br /> ‘ಈ ಮಹಿಳೆ ಸಮಾವೇಶಕ್ಕೆ ಬಂದಿದ್ದಳು, ಆದರೆ ಬೇರೆ ಕಾರಣಗಳಿಂದ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಎಂದು ಆಕೆಯ ಜೊತೆ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದ ಜನರನ್ನು ವಿಚಾರಿಸಿದಾಗ ಹೇಳಿದರು‘ ಎಂದು ಅವರು ಸ್ಪಷ್ಟಪಡಿಸಿದರು. ‘ಬಾಂಟಿ ಚುತಿಯಾ ಎಂಬ ಮಹಿಳೆ ಮೃತಪಟ್ಟಿದ್ದಾಳೆ. ಆಕೆಯ ಗಂಡ ಸೊಮೇಶ್ವರ್ ಚುತಿಯಾ ದೇಹ ಕೂಡ 35 ಭಾಗ ಸುಟ್ಟ ಗಾಯಗಳಾಗಿವೆ. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ’ ಎಂದು ಕೌರ್ ಹೇಳಿದರು.<br /> <br /> <strong>‘ರಾ’ ಅಧಿಕಾರಿ ಕುಟುಂಬ ನಿಗೂಢ ಸಾವು</strong><br /> <strong>ನವದೆಹಲಿ (ಪಿಟಿಐ): </strong>ಬೇಹುಗಾರಿಕೆ ಸಂಸ್ಥೆ ‘ರಾ’ದ ಅಧಿಕಾರಿ ಮತ್ತು ಅವರ ಪತ್ನಿ, ಮಕ್ಕಳು ನಿಗೂಢವಾಗಿ ಸಾವನ್ನಪ್ಪಿದ ಘಟನೆ ದಕ್ಷಿಣ ದೆಹಲಿಯ ಸಾದಿಕ್ ನಗರದಲ್ಲಿ ನಡೆದಿದೆ.<br /> <br /> ಸಂಶೋಧನಾ ಮತ್ತು ವಿಶ್ಲೇಷಣಾ ಘಟಕದಲ್ಲಿ ತಾಂತ್ರಿಕ ಅಧಿಕಾರಿಯಾದ ಅನನ್ಯ ಚಕ್ರವರ್ತಿ (52) ದೇಹ ಫ್ಯಾನ್ನಲ್ಲಿ ನೇತಾಡುತ್ತಿದ್ದರೆ, ಅವರ ಹೆಂಡತಿ ಜೈಶ್ರೀ, ಪುತ್ರ ಅರ್ನಾಬ್ (17) ಹಾಗೂ ಪುತ್ರಿ ದಿಶಾ (12) ದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿತ್ತು. ಅವರ ದೇಹದ ಮೇಲೆ ಗಾಯಗಳ ಗುರುತುಗಳಿದ್ದವು. ಚಕ್ರವರ್ತಿ ಮೊದಲು ತಮ್ಮ್ನ ಕುಟುಂಬ ಸದಸ್ಯರನ್ನು ಕೊಂದು ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ‘ತನಿಖೆ ಕೈಗೊಂಡು ಸಾವಿಗೆ ನಿಖರವಾದ ಕಾರಣ ಕಂಡುಹಿಡಿಯುತ್ತೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> <strong>ಮುಜಪ್ಫರ್ನಗರ ಗಲಭೆ– 248 ಜನರ ಮೇಲೆ ಆರೋಪಪಟ್ಟಿ</strong><br /> <strong>ಮುಜಪ್ಫರ್ನಗರ (ಪಿಟಿಐ): </strong> ಇಲ್ಲಿನ ಗಲಭೆಗೆ ಸಂಬಂಧಿಸಿದಂತೆ ಈವರೆಗೆ 48 ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾದ 248 ಜನರ ವಿರುದ್ಧ ವಿಶೇಷ ತನಿಖಾ ದಳ (ಎಸ್ಐಟಿ) ಆರೋಪಪಟ್ಟಿ ಸಲ್ಲಿಸಿದೆ.<br /> <br /> ‘ಕೃತ್ಯದಲ್ಲಿ ಭಾಗಿಯಾದ ಒಟ್ಟು 1195 ಜನರಲ್ಲಿ 248 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಉಳಿದವರನ್ನು ಬಂಧಿಸಲು ಸಂಬಂಧಿಸಿದ ಪೊಲೀಸ್ ಠಾಣೆಗೆ ಸೂಚಿಸಲಾಗಿದೆ’ ಎಂದು ಎಸ್ಐಟಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಝಾ ತಿಳಿಸಿದ್ದಾರೆ.<br /> <br /> ‘ಇದುವರೆಗೆ 417 ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡ 410 ಆರೋಪಿಗಳ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ ಮತ್ತು 222 ಆರೋಪಿಗಳ ವಿರುದ್ಧ ಸಿಆರ್ಪಿಸಿ 82ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೈದ್ಯರ ಮುಷ್ಕರ: 5 ರೋಗಿಗಳ ಸಾವು<br /> ಲಖನೌ (ಐಎಎನ್ಎಸ್): </strong>ಇಲ್ಲಿನ ಐದು ಆಸ್ಪತ್ರೆಗಳ ವೈದ್ಯರು ಶನಿವಾರ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಐವರು ರೋಗಿಗಳು ಸೂಕ್ತ ಚಿಕಿತ್ಸೆ ಇಲ್ಲದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>35ಕ್ಕೂ ಹೆಚ್ಚು ವೈದ್ಯರನ್ನು ಬಂಧಿಸಿದ ಕ್ರಮದ ವಿರುದ್ಧ ಪ್ರತಿಭಟಿಸಿದ ವೈದ್ಯರು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.<br /> <br /> <span style="font-size: 26px;">ರೋಗಿಯೊಬ್ಬರಿಗೆ ಕೂಡಲೇ ಚಿಕಿತ್ಸೆ ನೀಡುವಂತೆ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಲಂಕಿ ವೈದ್ಯರಿಗೆ ಹೇಳುವಂತೆ ರೋಗಿಯ ಸಂಬಂಧಿಕರಿಗೆ ಹೇಳಿದ್ದರು. ಆದರೆ ಶುಕ್ರವಾರ ಈ ಶಿಫಾರಸನ್ನು ವೈದ್ಯರು ತಿರಸ್ಕರಿಸಿದ್ದರು.</span><br /> <br /> <span style="font-size: 26px;">ನಂತರ ಶಾಸಕರು ತಮ್ಮ ಅಂಗರಕ್ಷಕನನ್ನು ಕಳುಹಿಸಿದಾಗಲೂ ವೈದ್ಯರು ಅವರ ಮಾತನ್ನು ಕೇಳಲಿಲ್ಲ. ಇದರಿಂದ ಕೋಪಗೊಂಡ ಶಾಸಕರು ಖುದ್ದಾಗಿ ವೈದ್ಯರ ಬಳಿ ಬಂದಾಗ ವೈದ್ಯರು ಮತ್ತು ಶಾಸಕರ ನಡುವೆ ಘರ್ಷಣೆ ನಡೆದು ಸೊಲಂಕಿ ಅವರ ತಲೆಗೆ ಏಟು ಬಿದ್ದಿದೆ. ಈ ಹಿನ್ನೆಲೆಯಲ್ಲಿ ವೈದ್ಯರನ್ನು ಬಂಧಿಸಲಾಗಿದೆ. ಬಂಧಿಸಲಾದ ವೈದ್ಯರನ್ನು ಬಿಡುಗಡೆ ಮಾಡುವವರೆಗೂ ತಾವು ಮುಷ್ಕರ ಕೈಬಿಡುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೇ, ಮರಣ ಪ್ರಮಾಣ ಪತ್ರಕ್ಕೆ ಸಹಿ ಹಾಕಲೂ ಅವರು ನಿರಾಕರಿಸಿದ್ದಾರೆ.</span></p>.<p><strong>ರಾಹುಲ್ ಭೇಟಿ: ಪತ್ನಿ ದಹಿಸಿದ ಪತಿ</strong><br /> <strong>ಗುವಾಹಟಿ (ಐಎಎನ್ಎಸ್):</strong> ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಅವರನ್ನು ಭೇಟಿಯಾಗಲು ಬಂದ ಮಹಿಳೆಯೊಬ್ಬರನ್ನು ಆಕೆಯ ಪತಿ ಸುಟ್ಟು ಹಾಕಿ ಕೊಲೆ ಮಾಡಿದ್ದಾನೆ.<br /> <br /> ಅಸ್ಸಾಂ ಪ್ರಚಾರದಲ್ಲಿದ್ದಾಗ ರಾಹುಲ್ ಗಾಂಧಿ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ್ದರು. ಆದರೆ ಈ ಸಮಾವೇಶದಲ್ಲಿ ಪಾಲ್ಗೊಳ್ಳದ ಮಹಿಳೆಯನ್ನು ಆಕೆಯ ಪತಿ ಬೆಂಕಿ ಹಚ್ಚಿ, ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.<br /> <br /> ‘ಟಿವಿ ವಾಹಿನಿಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ರಾಹುಲ್ಗೆ ಮುತ್ತು ಕೊಟ್ಟ ಮಹಿಳೆ ಈಗ ಕೊಲೆಯಾದ ಮಹಿಳೆ ಅಲ್ಲ’ ಎಂದು ಜೊರ್ಹಾತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮನ್ಜೀತ್ ಕೌರ್ ಸ್ಪಷ್ಟಪಡಿಸಿದ್ದಾರೆ.<br /> <br /> ‘ಈ ಮಹಿಳೆ ಸಮಾವೇಶಕ್ಕೆ ಬಂದಿದ್ದಳು, ಆದರೆ ಬೇರೆ ಕಾರಣಗಳಿಂದ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಎಂದು ಆಕೆಯ ಜೊತೆ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದ ಜನರನ್ನು ವಿಚಾರಿಸಿದಾಗ ಹೇಳಿದರು‘ ಎಂದು ಅವರು ಸ್ಪಷ್ಟಪಡಿಸಿದರು. ‘ಬಾಂಟಿ ಚುತಿಯಾ ಎಂಬ ಮಹಿಳೆ ಮೃತಪಟ್ಟಿದ್ದಾಳೆ. ಆಕೆಯ ಗಂಡ ಸೊಮೇಶ್ವರ್ ಚುತಿಯಾ ದೇಹ ಕೂಡ 35 ಭಾಗ ಸುಟ್ಟ ಗಾಯಗಳಾಗಿವೆ. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ’ ಎಂದು ಕೌರ್ ಹೇಳಿದರು.<br /> <br /> <strong>‘ರಾ’ ಅಧಿಕಾರಿ ಕುಟುಂಬ ನಿಗೂಢ ಸಾವು</strong><br /> <strong>ನವದೆಹಲಿ (ಪಿಟಿಐ): </strong>ಬೇಹುಗಾರಿಕೆ ಸಂಸ್ಥೆ ‘ರಾ’ದ ಅಧಿಕಾರಿ ಮತ್ತು ಅವರ ಪತ್ನಿ, ಮಕ್ಕಳು ನಿಗೂಢವಾಗಿ ಸಾವನ್ನಪ್ಪಿದ ಘಟನೆ ದಕ್ಷಿಣ ದೆಹಲಿಯ ಸಾದಿಕ್ ನಗರದಲ್ಲಿ ನಡೆದಿದೆ.<br /> <br /> ಸಂಶೋಧನಾ ಮತ್ತು ವಿಶ್ಲೇಷಣಾ ಘಟಕದಲ್ಲಿ ತಾಂತ್ರಿಕ ಅಧಿಕಾರಿಯಾದ ಅನನ್ಯ ಚಕ್ರವರ್ತಿ (52) ದೇಹ ಫ್ಯಾನ್ನಲ್ಲಿ ನೇತಾಡುತ್ತಿದ್ದರೆ, ಅವರ ಹೆಂಡತಿ ಜೈಶ್ರೀ, ಪುತ್ರ ಅರ್ನಾಬ್ (17) ಹಾಗೂ ಪುತ್ರಿ ದಿಶಾ (12) ದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿತ್ತು. ಅವರ ದೇಹದ ಮೇಲೆ ಗಾಯಗಳ ಗುರುತುಗಳಿದ್ದವು. ಚಕ್ರವರ್ತಿ ಮೊದಲು ತಮ್ಮ್ನ ಕುಟುಂಬ ಸದಸ್ಯರನ್ನು ಕೊಂದು ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ‘ತನಿಖೆ ಕೈಗೊಂಡು ಸಾವಿಗೆ ನಿಖರವಾದ ಕಾರಣ ಕಂಡುಹಿಡಿಯುತ್ತೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> <strong>ಮುಜಪ್ಫರ್ನಗರ ಗಲಭೆ– 248 ಜನರ ಮೇಲೆ ಆರೋಪಪಟ್ಟಿ</strong><br /> <strong>ಮುಜಪ್ಫರ್ನಗರ (ಪಿಟಿಐ): </strong> ಇಲ್ಲಿನ ಗಲಭೆಗೆ ಸಂಬಂಧಿಸಿದಂತೆ ಈವರೆಗೆ 48 ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾದ 248 ಜನರ ವಿರುದ್ಧ ವಿಶೇಷ ತನಿಖಾ ದಳ (ಎಸ್ಐಟಿ) ಆರೋಪಪಟ್ಟಿ ಸಲ್ಲಿಸಿದೆ.<br /> <br /> ‘ಕೃತ್ಯದಲ್ಲಿ ಭಾಗಿಯಾದ ಒಟ್ಟು 1195 ಜನರಲ್ಲಿ 248 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಉಳಿದವರನ್ನು ಬಂಧಿಸಲು ಸಂಬಂಧಿಸಿದ ಪೊಲೀಸ್ ಠಾಣೆಗೆ ಸೂಚಿಸಲಾಗಿದೆ’ ಎಂದು ಎಸ್ಐಟಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಝಾ ತಿಳಿಸಿದ್ದಾರೆ.<br /> <br /> ‘ಇದುವರೆಗೆ 417 ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡ 410 ಆರೋಪಿಗಳ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ ಮತ್ತು 222 ಆರೋಪಿಗಳ ವಿರುದ್ಧ ಸಿಆರ್ಪಿಸಿ 82ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>