<p><span style="font-size: 26px;">ಯಾದಗಿರಿ: ಸಮಿಪದ ಖಾನಾಪುರ ಗ್ರಾಮದಲ್ಲಿ ಕಾರ ಹುಣ್ಣಿಮೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. </span><span style="font-size: 26px;">ಬೆಳಿಗ್ಗೆ ಎತ್ತುಗಳಿಗೆ ಸ್ನಾನ ಮಾಡಿಸಿ, ಕೊಂಬಿಗೆ ಬಣ್ಣ ಹಚ್ಚಿ ವಿವಿಧ ರೀತಿಯಿಂದ ಶೃಂಗರಿಸಿ, ಎತ್ತು ಹಾಗೂ ಹೋರಿಗಳನ್ನು ಸುರಪುರ ಕ್ರಾಸ್ ಹತ್ತಿರ ತಂದು ನಿಲ್ಲಿಸುತ್ತಾರೆ. ಅಲ್ಲಿದ ಎತ್ತುಗಳ ಮೆರವಣಿಗೆ ಮಂಗಲ ವಾದ್ಯಗಳೊಂದಿಗೆ ಆರಂಭವಾಗುತ್ತದೆ ಎಂದು ರೈತ ಸಣ್ಣಮಲ್ಲಪ್ಪ ತಿಳಿಸಿದರು.</span><br /> <br /> ದಾರಿಯುದ್ದಕ್ಕೂ ಮಹಿಳೆಯರು ಬಾಲಕರು ಮೆರವಣಿಗೆ ಹೊರಟ ಎತ್ತುಗಳ ಮೇಲೆ ಚುರುಮುರಿಯನ್ನು ಎಸೆಯುತ್ತ ಆನಂದಿಸಿದರು. ಯುವಕರು ಪಟೆ (ಬಡಿಗೆಯನ್ನು ಒಂದೇ ಕೈಯಿಂದ ತಿರುಗಿಸುವುದು) ತಿರುಗಿಸಿ ತಮ್ಮ ಪ್ರತಿಭೆ ತೋರಿಸಿದರು. ಯಾದಗಿರಿ ರಸ್ತೆಯ ಹನುಮಾನ ಗುಡಿಯ ಹತ್ತಿರ ಮೆರವಣಿಗೆ ಮುಕ್ತಾಯವಾಯಿತು.<br /> <br /> <strong>ಅರಕೇರಾ ಕೆ:</strong> ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಮಳೆಯು ಅನ್ನದಾತನ ಹಬ್ಬವಾದ ಕಾರಹುಣ್ಣಿಮೆಯ ಸಂಭ್ರಮವನ್ನು ಇಮ್ಮಡಿಸಿತು.<br /> ಹುಣ್ಣಿಮೆಯ ದಿನವಾದ ಭಾನುವಾರ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಉತ್ಸಾಹದಿಂದಲೇ ಎತ್ತುಗಳನ್ನು ಸಿಂಗರಿಸಿ ಸಂಭ್ರಮದಿಂದ ಹಬ್ಬ ಆಚರಿಸಿ ದರು.<br /> ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕೃತ ಎತ್ತುಗಳ ಮೆರವಣಿಗೆ ಮಾಡಿ ರೈತ ವರ್ಗ ಸಂಭ್ರಮ ಪಟ್ಟಿತು. <br /> <br /> ತಾಲ್ಲೂಕಿನ ಅರಕೇರಾ (ಕೆ) ಗ್ರಾಮದಲ್ಲಿ ರೈತರು ಸಿಂಗರಿಸಿದ ಎತ್ತುಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;">ಯಾದಗಿರಿ: ಸಮಿಪದ ಖಾನಾಪುರ ಗ್ರಾಮದಲ್ಲಿ ಕಾರ ಹುಣ್ಣಿಮೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. </span><span style="font-size: 26px;">ಬೆಳಿಗ್ಗೆ ಎತ್ತುಗಳಿಗೆ ಸ್ನಾನ ಮಾಡಿಸಿ, ಕೊಂಬಿಗೆ ಬಣ್ಣ ಹಚ್ಚಿ ವಿವಿಧ ರೀತಿಯಿಂದ ಶೃಂಗರಿಸಿ, ಎತ್ತು ಹಾಗೂ ಹೋರಿಗಳನ್ನು ಸುರಪುರ ಕ್ರಾಸ್ ಹತ್ತಿರ ತಂದು ನಿಲ್ಲಿಸುತ್ತಾರೆ. ಅಲ್ಲಿದ ಎತ್ತುಗಳ ಮೆರವಣಿಗೆ ಮಂಗಲ ವಾದ್ಯಗಳೊಂದಿಗೆ ಆರಂಭವಾಗುತ್ತದೆ ಎಂದು ರೈತ ಸಣ್ಣಮಲ್ಲಪ್ಪ ತಿಳಿಸಿದರು.</span><br /> <br /> ದಾರಿಯುದ್ದಕ್ಕೂ ಮಹಿಳೆಯರು ಬಾಲಕರು ಮೆರವಣಿಗೆ ಹೊರಟ ಎತ್ತುಗಳ ಮೇಲೆ ಚುರುಮುರಿಯನ್ನು ಎಸೆಯುತ್ತ ಆನಂದಿಸಿದರು. ಯುವಕರು ಪಟೆ (ಬಡಿಗೆಯನ್ನು ಒಂದೇ ಕೈಯಿಂದ ತಿರುಗಿಸುವುದು) ತಿರುಗಿಸಿ ತಮ್ಮ ಪ್ರತಿಭೆ ತೋರಿಸಿದರು. ಯಾದಗಿರಿ ರಸ್ತೆಯ ಹನುಮಾನ ಗುಡಿಯ ಹತ್ತಿರ ಮೆರವಣಿಗೆ ಮುಕ್ತಾಯವಾಯಿತು.<br /> <br /> <strong>ಅರಕೇರಾ ಕೆ:</strong> ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಮಳೆಯು ಅನ್ನದಾತನ ಹಬ್ಬವಾದ ಕಾರಹುಣ್ಣಿಮೆಯ ಸಂಭ್ರಮವನ್ನು ಇಮ್ಮಡಿಸಿತು.<br /> ಹುಣ್ಣಿಮೆಯ ದಿನವಾದ ಭಾನುವಾರ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಉತ್ಸಾಹದಿಂದಲೇ ಎತ್ತುಗಳನ್ನು ಸಿಂಗರಿಸಿ ಸಂಭ್ರಮದಿಂದ ಹಬ್ಬ ಆಚರಿಸಿ ದರು.<br /> ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕೃತ ಎತ್ತುಗಳ ಮೆರವಣಿಗೆ ಮಾಡಿ ರೈತ ವರ್ಗ ಸಂಭ್ರಮ ಪಟ್ಟಿತು. <br /> <br /> ತಾಲ್ಲೂಕಿನ ಅರಕೇರಾ (ಕೆ) ಗ್ರಾಮದಲ್ಲಿ ರೈತರು ಸಿಂಗರಿಸಿದ ಎತ್ತುಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>