<p><strong>ದಾವಣಗೆರೆ:</strong> ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆ ಅಡಿ ಐದು ವರ್ಷಗಳ ಅವಧಿಯಲ್ಲಿ ದೊರೆತ ₨ 20.9 ಕೋಟಿ ಅನುದಾನದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಹಿಂದುಳಿದ ಹರಪನಹಳ್ಳಿ ಕ್ಷೇತ್ರಕ್ಕೆ ಹೆಚ್ಚು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಅತ್ಯಂತ ಕಡಿಮೆ ಹಣ ಬಳಸಿದ್ದಾರೆ.<br /> <br /> ಎರಡು ಅವಧಿ ಸಂಸತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರಿಗೆ ಕ್ಷೇತ್ರದ ಅಭಿವೃದ್ಧಿಗಾಗಿ 2009–2014ರ ಅವಧಿಯಲ್ಲಿ ಸರ್ಕಾರ₨ 20.9 ಕೋಟಿ ಹಣ ಬಿಡುಗಡೆ ಮಾಡಿತ್ತು.ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಇರುವ ಹರಪನಹಳ್ಳಿಗೆ ₨ 4.54 ಕೋಟಿ ನೀಡಿದರೆ, ಜಿಲ್ಲೆಯ ಮತ್ತೊಂದು ಹಿಂದುಳಿದ ತಾಲ್ಲೂಕು ಜಗಳೂರಿಗೆ ₨ 2.68 ಕೋಟಿ ನೀಡಿದ್ದಾರೆ.<br /> <br /> ಚನ್ನಗಿರಿ ತಾಲ್ಲೂಕಿಗೆ ₨ 3.50 ಕೋಟಿ, ಹರಿಹರ ತಾಲ್ಲೂಕಿಗೆ ₨ 2.87 ಕೋಟಿ, ಹೊನ್ನಾಳಿ ತಾಲ್ಲೂಕಿಗೆ<br /> ₨ 2.59 ಕೋಟಿ, ಮಾಯಕೊಂಡ ಕ್ಷೇತ್ರಕ್ಕೆ ₨ 2.33 ಕೋಟಿ ನೀಡಿದ್ದಾರೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳಿಗೆ ಮಾಡಿದ ಅನುದಾನ ಹಂಚಿಕೆಯಲ್ಲಿ ಕೊನೆಯ ಸ್ಥಾನ ದಾವಣಗೆರೆ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಿಗೆ ದೊರೆತಿದೆ. ಉತ್ತರಕ್ಕೆ ₨ 1.68 ಕೋಟಿ ನೀಡಿದರೆ, ದಕ್ಷಿಣಕ್ಕೆ ಕೇವಲ ₨ 1.02 ಕೋಟಿ ನೀಡಲಾಗಿದೆ.<br /> <br /> <strong>ಸಮುದಾಯ ಭವನ, ಸಿಮೆಂಟ್ ರಸ್ತೆಗೆ ಆದ್ಯತೆ</strong><br /> ಸಂಸದ ಸಿದ್ದೇಶ್ವರ ಅವರು ಹಣ ವಿನಿಯೋಗದ ಮಾರ್ಗದರ್ಶಿ ಸೂತ್ರದ ಅನ್ವಯ ಹಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಅವಕಾಶವಿದ್ದರೂ, ಕ್ಷೇತ್ರದ ಹಳ್ಳಿಗಳಲ್ಲಿ ಸಿಮೆಂಟ್ ರಸ್ತೆ ಹಾಗೂ ಸಮುದಾಯ ಭವನಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.<br /> <br /> ಸಿಮೆಂಟ್ ರಸ್ತೆ ಅಭಿವೃದ್ಧಿಗಾಗಿಯೇ ₨ 6.42 ಕೋಟಿ, ಸಮುದಾಯ ಭವನಗಳಿಗೆ 6.15 ಕೋಟಿ, ಬಸ್ತಂಗುದಾಣಗಳಿಗೆ ₨ 2.02 ಕೋಟಿ ಹಂಚಿಕೆ ಮಾಡಿದ್ದಾರೆ.<br /> <br /> ಉಳಿದಂತೆ ರಂಗಮಂದಿರಗಳ ನಿರ್ಮಾಣಕ್ಕೆ ₨ 78 ಲಕ್ಷ, ವ್ಯಾಯಾಮ ಶಾಲೆಗಳಿಗೆ ₨ 57.50 ಲಕ್ಷ, ಭಜನಾ ಮಂದಿರಗಳಿಗೆ ₨ 42 ಲಕ್ಷ, ಅಂಗನವಾಡಿ ಕಟ್ಟಡಗಳಿಗೆ ₨ 35 ಲಕ್ಷ ಅನುದಾನ ನೀಡಲಾಗಿದೆ. ಗ್ರಂಥಾಲಯ, ಶಾಲಾ ಕೊಠಡಿಗಳಿಗೂ ಸ್ವಲ್ಪ ಪ್ರಮಾಣದ ಅನುದಾನ ವಿನಿಯೋಗಿಸಲಾಗಿದೆ.<br /> <br /> <strong>ಅನುದಾನ ಬಳಕೆ–ಉಳಿಕೆ</strong><br /> 2009–10ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಕ್ಷೇತ್ರಕ್ಕೆ ₨ 2 ಕೋಟಿ ಬಿಡುಗಡೆಮಾಡಿದ್ದು, ಅದರಲ್ಲಿ<br /> ₨ 1.89 ಕೋಟಿ ಖರ್ಚು ಮಾಡಲಾಗಿದೆ. 2010–11ನೇ ಸಾಲಿನಲ್ಲೂ ₨ 2 ಕೋಟಿ ಬಿಡುಗಡೆಯಾಗಿದ್ದು ಹಿಂದಿನ ವರ್ಷದ ಅನುದಾನವೂ ಸೇರಿದಂತೆ ಆ ವರ್ಷ ₨ 2.44 ಕೋಟಿ ಖರ್ಚು ಮಾಡಲಾಗಿದೆ. 2011–12 ಹಾಗೂ 12–13ನೇ ಸಾಲಿನಲ್ಲಿ ತಲಾ ₨ 5 ಕೋಟಿ ಬಿಡುಗಡೆಯಾಗಿದ್ದು, ಅಷ್ಟೂ ಹಣವನ್ನೂ ಖರ್ಚು ಮಾಡಲಾಗಿದೆ.<br /> <br /> 2013–14ನೇ ಸಾಲಿಗೂ ₨ 5 ಕೋಟಿ ಬಿಡುಗಡೆಯಾಗಿದ್ದು, ಎಲ್ಲ ಹಣ ಬಳಸಲೂ ಶಿಫಾರಸು ಮಾಡಿದ್ದಾರೆ.<br /> ಕೊನೆಯ ವರ್ಷವೂ ಸಿಮೆಂಟ್ ರಸ್ತೆ ಹಾಗೂ ಸಮುದಾಯ ಭವನಗಳಿಗೆ ಸಿಂಹಪಾಲು ವ್ಯಯಿಸಲಾಗಿದೆ. 2009–10,<br /> 11–12, 12–13 ಸಾಲಿನಲ್ಲೂ ಸಮುದಾಯ ಭವನ ಹಾಗೂ ಸಿಮೆಂಟ್ ರಸ್ತೆಗಳ ನಿರ್ಮಾಣಕ್ಕೆ<br /> ಹಣ ವಿನಿಯೋಗ ಮಾಡಲಾಗಿದೆ.<br /> <br /> 2010–11ನೇ ಸಾಲಿನಲ್ಲಿ ಮಾತ್ರ ಅನುದಾನದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ₨ 90 ಲಕ್ಷ ನೀಡಲಾಗಿದೆ.<br /> <br /> <strong>ಸಂಸದರ ನಿಧಿ ವಿಧಾನಸಭಾವಾರು ಹಂಚಿಕೆ</strong><br /> <strong>ಕ್ಷೇತ್ರ ಅನುದಾನ</strong><br /> ಹರಪನಹಳ್ಳಿ ₨ 4.54 ಕೋಟಿ <br /> ಜಗಳೂರು ₨ 2.68 ಕೋಟಿ<br /> ಚನ್ನಗಿರಿ ₨ 3.50 ಕೋಟಿ<br /> ಹರಿಹರ ₨ 2.87 ಕೋಟಿ<br /> ಹೊನ್ನಾಳಿ ₨ 2.59 ಕೋಟಿ<br /> ಮಾಯಕೊಂಡ ₨ 2.33 ಕೋಟಿ <br /> ದಾವಣಗೆರೆ ಉತ್ತರ ₨ 1.68 ಕೋಟಿ <br /> ದಾವಣಗೆರೆ ದಕ್ಷಿಣ ₨ 1.02 ಕೋಟಿ<br /> <br /> <strong>683 ಕಾಮಗಾರಿಗೆ ಶಿಫಾರಸು</strong><br /> 2009ರಿಂದ 2014ರ ಅವಧಿಯಲ್ಲಿ ದೊರೆತ ₨ 20.9 ಕೋಟಿ ಅನುದಾನವನ್ನು ಸಿದ್ದೇಶ್ವರ ಅವರು ಸಂಪೂರ್ಣ ಬಳಕೆ ಮಾಡಿಕೊಂಡಿದ್ದಾರೆ. ಒಟ್ಟು 683 ಕಾಮಗಾರಿಗಳಿಗೆ ಶಿಫಾರಸು ಮಾಡಲಾಗಿದ್ದು, ಅವುಗಳಲ್ಲಿ 461 ಕಾಮಗಾರಿ ಪೂರ್ಣಗೊಂಡಿವೆ. 163 ಕಾಮಗಾರಿ ಪ್ರಗತಿಯಲ್ಲಿವೆ. ಉಳಿದ 59 ಕಾಮಗಾರಿ ಆರಂಭ ಆಗಬೇಕಿದೆ.<br /> <br /> <strong>ಕನ್ನಡ ಭವನಕ್ಕೆ ₨ 10 ಲಕ್ಷ</strong><br /> ಹಿಂದಿನ ಚುನಾವಣೆಯ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಜಿ.ಎಂ. ಸಿದ್ದೇಶ್ವರ ಅವರು ಜಿಲ್ಲಾ ಕನ್ನಡ ಭವನ ನಿರ್ಮಾಣಕ್ಕೆ ₨ 10 ಲಕ್ಷ ನೀಡಿದ್ದಾರೆ. ಅಲ್ಲದೇ, ಚನ್ನಗಿರಿ ತಾಲ್ಲೂಕು ಕತ್ತಲಗೆರೆ, ಹರಪನಹಳ್ಳಿ ತಾಲ್ಲೂಕು<br /> ಅರಸಿಕೆರೆ, ಜಗಳೂರು ತಾಲ್ಲೂಕಿನ ಗುರುಸಿದ್ದಾಪುರ– ಮಡ್ರಳ್ಳಿ ಸಮುದಾಯ ಭವನಗಳಿಗೆ ತಲಾ ₨ 10 ಲಕ್ಷ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆ ಅಡಿ ಐದು ವರ್ಷಗಳ ಅವಧಿಯಲ್ಲಿ ದೊರೆತ ₨ 20.9 ಕೋಟಿ ಅನುದಾನದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಹಿಂದುಳಿದ ಹರಪನಹಳ್ಳಿ ಕ್ಷೇತ್ರಕ್ಕೆ ಹೆಚ್ಚು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಅತ್ಯಂತ ಕಡಿಮೆ ಹಣ ಬಳಸಿದ್ದಾರೆ.<br /> <br /> ಎರಡು ಅವಧಿ ಸಂಸತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರಿಗೆ ಕ್ಷೇತ್ರದ ಅಭಿವೃದ್ಧಿಗಾಗಿ 2009–2014ರ ಅವಧಿಯಲ್ಲಿ ಸರ್ಕಾರ₨ 20.9 ಕೋಟಿ ಹಣ ಬಿಡುಗಡೆ ಮಾಡಿತ್ತು.ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಇರುವ ಹರಪನಹಳ್ಳಿಗೆ ₨ 4.54 ಕೋಟಿ ನೀಡಿದರೆ, ಜಿಲ್ಲೆಯ ಮತ್ತೊಂದು ಹಿಂದುಳಿದ ತಾಲ್ಲೂಕು ಜಗಳೂರಿಗೆ ₨ 2.68 ಕೋಟಿ ನೀಡಿದ್ದಾರೆ.<br /> <br /> ಚನ್ನಗಿರಿ ತಾಲ್ಲೂಕಿಗೆ ₨ 3.50 ಕೋಟಿ, ಹರಿಹರ ತಾಲ್ಲೂಕಿಗೆ ₨ 2.87 ಕೋಟಿ, ಹೊನ್ನಾಳಿ ತಾಲ್ಲೂಕಿಗೆ<br /> ₨ 2.59 ಕೋಟಿ, ಮಾಯಕೊಂಡ ಕ್ಷೇತ್ರಕ್ಕೆ ₨ 2.33 ಕೋಟಿ ನೀಡಿದ್ದಾರೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳಿಗೆ ಮಾಡಿದ ಅನುದಾನ ಹಂಚಿಕೆಯಲ್ಲಿ ಕೊನೆಯ ಸ್ಥಾನ ದಾವಣಗೆರೆ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಿಗೆ ದೊರೆತಿದೆ. ಉತ್ತರಕ್ಕೆ ₨ 1.68 ಕೋಟಿ ನೀಡಿದರೆ, ದಕ್ಷಿಣಕ್ಕೆ ಕೇವಲ ₨ 1.02 ಕೋಟಿ ನೀಡಲಾಗಿದೆ.<br /> <br /> <strong>ಸಮುದಾಯ ಭವನ, ಸಿಮೆಂಟ್ ರಸ್ತೆಗೆ ಆದ್ಯತೆ</strong><br /> ಸಂಸದ ಸಿದ್ದೇಶ್ವರ ಅವರು ಹಣ ವಿನಿಯೋಗದ ಮಾರ್ಗದರ್ಶಿ ಸೂತ್ರದ ಅನ್ವಯ ಹಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಅವಕಾಶವಿದ್ದರೂ, ಕ್ಷೇತ್ರದ ಹಳ್ಳಿಗಳಲ್ಲಿ ಸಿಮೆಂಟ್ ರಸ್ತೆ ಹಾಗೂ ಸಮುದಾಯ ಭವನಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.<br /> <br /> ಸಿಮೆಂಟ್ ರಸ್ತೆ ಅಭಿವೃದ್ಧಿಗಾಗಿಯೇ ₨ 6.42 ಕೋಟಿ, ಸಮುದಾಯ ಭವನಗಳಿಗೆ 6.15 ಕೋಟಿ, ಬಸ್ತಂಗುದಾಣಗಳಿಗೆ ₨ 2.02 ಕೋಟಿ ಹಂಚಿಕೆ ಮಾಡಿದ್ದಾರೆ.<br /> <br /> ಉಳಿದಂತೆ ರಂಗಮಂದಿರಗಳ ನಿರ್ಮಾಣಕ್ಕೆ ₨ 78 ಲಕ್ಷ, ವ್ಯಾಯಾಮ ಶಾಲೆಗಳಿಗೆ ₨ 57.50 ಲಕ್ಷ, ಭಜನಾ ಮಂದಿರಗಳಿಗೆ ₨ 42 ಲಕ್ಷ, ಅಂಗನವಾಡಿ ಕಟ್ಟಡಗಳಿಗೆ ₨ 35 ಲಕ್ಷ ಅನುದಾನ ನೀಡಲಾಗಿದೆ. ಗ್ರಂಥಾಲಯ, ಶಾಲಾ ಕೊಠಡಿಗಳಿಗೂ ಸ್ವಲ್ಪ ಪ್ರಮಾಣದ ಅನುದಾನ ವಿನಿಯೋಗಿಸಲಾಗಿದೆ.<br /> <br /> <strong>ಅನುದಾನ ಬಳಕೆ–ಉಳಿಕೆ</strong><br /> 2009–10ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಕ್ಷೇತ್ರಕ್ಕೆ ₨ 2 ಕೋಟಿ ಬಿಡುಗಡೆಮಾಡಿದ್ದು, ಅದರಲ್ಲಿ<br /> ₨ 1.89 ಕೋಟಿ ಖರ್ಚು ಮಾಡಲಾಗಿದೆ. 2010–11ನೇ ಸಾಲಿನಲ್ಲೂ ₨ 2 ಕೋಟಿ ಬಿಡುಗಡೆಯಾಗಿದ್ದು ಹಿಂದಿನ ವರ್ಷದ ಅನುದಾನವೂ ಸೇರಿದಂತೆ ಆ ವರ್ಷ ₨ 2.44 ಕೋಟಿ ಖರ್ಚು ಮಾಡಲಾಗಿದೆ. 2011–12 ಹಾಗೂ 12–13ನೇ ಸಾಲಿನಲ್ಲಿ ತಲಾ ₨ 5 ಕೋಟಿ ಬಿಡುಗಡೆಯಾಗಿದ್ದು, ಅಷ್ಟೂ ಹಣವನ್ನೂ ಖರ್ಚು ಮಾಡಲಾಗಿದೆ.<br /> <br /> 2013–14ನೇ ಸಾಲಿಗೂ ₨ 5 ಕೋಟಿ ಬಿಡುಗಡೆಯಾಗಿದ್ದು, ಎಲ್ಲ ಹಣ ಬಳಸಲೂ ಶಿಫಾರಸು ಮಾಡಿದ್ದಾರೆ.<br /> ಕೊನೆಯ ವರ್ಷವೂ ಸಿಮೆಂಟ್ ರಸ್ತೆ ಹಾಗೂ ಸಮುದಾಯ ಭವನಗಳಿಗೆ ಸಿಂಹಪಾಲು ವ್ಯಯಿಸಲಾಗಿದೆ. 2009–10,<br /> 11–12, 12–13 ಸಾಲಿನಲ್ಲೂ ಸಮುದಾಯ ಭವನ ಹಾಗೂ ಸಿಮೆಂಟ್ ರಸ್ತೆಗಳ ನಿರ್ಮಾಣಕ್ಕೆ<br /> ಹಣ ವಿನಿಯೋಗ ಮಾಡಲಾಗಿದೆ.<br /> <br /> 2010–11ನೇ ಸಾಲಿನಲ್ಲಿ ಮಾತ್ರ ಅನುದಾನದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ₨ 90 ಲಕ್ಷ ನೀಡಲಾಗಿದೆ.<br /> <br /> <strong>ಸಂಸದರ ನಿಧಿ ವಿಧಾನಸಭಾವಾರು ಹಂಚಿಕೆ</strong><br /> <strong>ಕ್ಷೇತ್ರ ಅನುದಾನ</strong><br /> ಹರಪನಹಳ್ಳಿ ₨ 4.54 ಕೋಟಿ <br /> ಜಗಳೂರು ₨ 2.68 ಕೋಟಿ<br /> ಚನ್ನಗಿರಿ ₨ 3.50 ಕೋಟಿ<br /> ಹರಿಹರ ₨ 2.87 ಕೋಟಿ<br /> ಹೊನ್ನಾಳಿ ₨ 2.59 ಕೋಟಿ<br /> ಮಾಯಕೊಂಡ ₨ 2.33 ಕೋಟಿ <br /> ದಾವಣಗೆರೆ ಉತ್ತರ ₨ 1.68 ಕೋಟಿ <br /> ದಾವಣಗೆರೆ ದಕ್ಷಿಣ ₨ 1.02 ಕೋಟಿ<br /> <br /> <strong>683 ಕಾಮಗಾರಿಗೆ ಶಿಫಾರಸು</strong><br /> 2009ರಿಂದ 2014ರ ಅವಧಿಯಲ್ಲಿ ದೊರೆತ ₨ 20.9 ಕೋಟಿ ಅನುದಾನವನ್ನು ಸಿದ್ದೇಶ್ವರ ಅವರು ಸಂಪೂರ್ಣ ಬಳಕೆ ಮಾಡಿಕೊಂಡಿದ್ದಾರೆ. ಒಟ್ಟು 683 ಕಾಮಗಾರಿಗಳಿಗೆ ಶಿಫಾರಸು ಮಾಡಲಾಗಿದ್ದು, ಅವುಗಳಲ್ಲಿ 461 ಕಾಮಗಾರಿ ಪೂರ್ಣಗೊಂಡಿವೆ. 163 ಕಾಮಗಾರಿ ಪ್ರಗತಿಯಲ್ಲಿವೆ. ಉಳಿದ 59 ಕಾಮಗಾರಿ ಆರಂಭ ಆಗಬೇಕಿದೆ.<br /> <br /> <strong>ಕನ್ನಡ ಭವನಕ್ಕೆ ₨ 10 ಲಕ್ಷ</strong><br /> ಹಿಂದಿನ ಚುನಾವಣೆಯ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಜಿ.ಎಂ. ಸಿದ್ದೇಶ್ವರ ಅವರು ಜಿಲ್ಲಾ ಕನ್ನಡ ಭವನ ನಿರ್ಮಾಣಕ್ಕೆ ₨ 10 ಲಕ್ಷ ನೀಡಿದ್ದಾರೆ. ಅಲ್ಲದೇ, ಚನ್ನಗಿರಿ ತಾಲ್ಲೂಕು ಕತ್ತಲಗೆರೆ, ಹರಪನಹಳ್ಳಿ ತಾಲ್ಲೂಕು<br /> ಅರಸಿಕೆರೆ, ಜಗಳೂರು ತಾಲ್ಲೂಕಿನ ಗುರುಸಿದ್ದಾಪುರ– ಮಡ್ರಳ್ಳಿ ಸಮುದಾಯ ಭವನಗಳಿಗೆ ತಲಾ ₨ 10 ಲಕ್ಷ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>