<p>ಹಾಸನ:ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಿಲ್ಲೆಯ ಯೋಧ ಪೌಲ್ ಎಂಬುವವರು ಸೋಮವಾರ ರಾತ್ರಿ ನಿಧನಹೊಂದಿದ್ದು, ಮಂಗಳವಾರ ಸಕಲ ಮಿಲಿಟರಿ ಗೌರವಗಳೊಂದಿಗೆ ಅವರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.<br /> <br /> ಹಾಸನ ತಾಲ್ಲೂಕು ಗಾಡೇನಹಳ್ಳಿಯ ಪೌಲ್ 12ವರ್ಷಗಳ ಹಿಂದೆ ಮಿಲಿಟರಿ ಸೇರಿದ್ದರು. ಸಿಪಾಯಿ ರ್ಯಾಂಕ್ನಲ್ಲಿದ್ದ ಅವರು, ಕೆಲವು ತಿಂಗಳಿಂದ ಭಾರತ-ಚೀನಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.<br /> <br /> 20ದಿನಗಳ ಹಿಂದೆ ರಜೆಪಡೆದು ಊರಿಗೆ ಬಂದಿದ್ದ ಇವರಿಗೆ ತೀವ್ರ ಹೊಟ್ಟೆನೋವು ಕಾಡಿದ್ದರಿಂದ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಸೋಮವಾರ ರಾತ್ರಿ ನಿಧನಹೊಂದಿದರು.<br /> <br /> ಸೇನೆಯ ಸಿಬ್ಬಂದಿಯೇ ಮಂಗಳವಾರ ಬೆಳಿಗ್ಗೆ ಗಾಡೇನಹಳ್ಳಿಗೆ ಬಂದು ಮೃತ ಯೋಧನಿಗೆ ಸಕಲ ಗೌರವಗಳನ್ನು ಸಲ್ಲಿಸಿದರು. ಮೂರು ಸುತ್ತು ಗೌರವ ತೋಪುಗಳನ್ನು ಸಿಡಿಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಗ್ರಾಮಸ್ಥರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ:ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಿಲ್ಲೆಯ ಯೋಧ ಪೌಲ್ ಎಂಬುವವರು ಸೋಮವಾರ ರಾತ್ರಿ ನಿಧನಹೊಂದಿದ್ದು, ಮಂಗಳವಾರ ಸಕಲ ಮಿಲಿಟರಿ ಗೌರವಗಳೊಂದಿಗೆ ಅವರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.<br /> <br /> ಹಾಸನ ತಾಲ್ಲೂಕು ಗಾಡೇನಹಳ್ಳಿಯ ಪೌಲ್ 12ವರ್ಷಗಳ ಹಿಂದೆ ಮಿಲಿಟರಿ ಸೇರಿದ್ದರು. ಸಿಪಾಯಿ ರ್ಯಾಂಕ್ನಲ್ಲಿದ್ದ ಅವರು, ಕೆಲವು ತಿಂಗಳಿಂದ ಭಾರತ-ಚೀನಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.<br /> <br /> 20ದಿನಗಳ ಹಿಂದೆ ರಜೆಪಡೆದು ಊರಿಗೆ ಬಂದಿದ್ದ ಇವರಿಗೆ ತೀವ್ರ ಹೊಟ್ಟೆನೋವು ಕಾಡಿದ್ದರಿಂದ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಸೋಮವಾರ ರಾತ್ರಿ ನಿಧನಹೊಂದಿದರು.<br /> <br /> ಸೇನೆಯ ಸಿಬ್ಬಂದಿಯೇ ಮಂಗಳವಾರ ಬೆಳಿಗ್ಗೆ ಗಾಡೇನಹಳ್ಳಿಗೆ ಬಂದು ಮೃತ ಯೋಧನಿಗೆ ಸಕಲ ಗೌರವಗಳನ್ನು ಸಲ್ಲಿಸಿದರು. ಮೂರು ಸುತ್ತು ಗೌರವ ತೋಪುಗಳನ್ನು ಸಿಡಿಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಗ್ರಾಮಸ್ಥರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>