<p><strong>ಚೆನ್ನೈ:</strong> ಮೊದಲೆಲ್ಲ ರಾಜಕಾರಣಿಗಳು ತೆರೆದ ವಾಹನಗಳಲ್ಲಿ ಚುನಾವಣಾ ಪ್ರಚಾರ ಅಭಿಯಾನ ಕೈಗೊಳ್ಳುತ್ತಿದ್ದರು. ಇಂದಿನ ರಾಜಕಾರಣಿಗಳು ಈ ವಿಚಾರದಲ್ಲಿ ಸಂಪೂರ್ಣ ಭಿನ್ನವಾಗಿದ್ದಾರೆ.<br /> <br /> ತಂತ್ರಜ್ಞಾನ ಬದಲಾದಂತೆ ರಾಜಕಾರಣಿಗಳ ಪ್ರಚಾರ ವೈಖರಿಯೂ ಬದಲಾಗಿದೆ. ಇದಕ್ಕೆ ತಮಿಳುನಾಡಿನಲ್ಲಿ ಸಾಕಷ್ಟು ತಾಜಾ ಉದಾಹರಣೆ ಸಿಗುತ್ತವೆ. ಅತ್ಯಾಧುನಿಕ, ಸುಸಜ್ಜಿತ ವಾಹನಗಳಲ್ಲಿ ಇಲ್ಲಿನ ರಾಜಕಾರಣಿಗಳು ಪ್ರಚಾರ ಕೈಗೊಳ್ಳಲು ಉತ್ಸುಕರಾಗಿದ್ದಾರೆ. ಎಲ್ಲ ರೀತಿಯ ಗ್ಯಾಜೆಟ್, ಅಂತರ್ಜಾಲ ಸಂಪರ್ಕ ಇರುವ ಲ್ಯಾಪ್ಟಾಪ್, ಟೆಲಿವಿಷನ್ (ಡಿಟಿಎಚ್) ಮತ್ತಿತರ ಸೌಲಭ್ಯಗಳು ಇವರ ಪ್ರಚಾರ ವಾಹನದಲ್ಲಿರುತ್ತವೆ. ಈ ವಾಹನಗಳು ಸಂಚಾರಿ ಐಷಾರಾಮಿ ಹೋಟೆಲ್ನಂತೆ ಇರುತ್ತವೆ.<br /> <br /> ಚುನಾವಣಾ ಪ್ರಚಾರದ ಅಗತ್ಯಗಳಿಗೆ ತಕ್ಕಂತೆ ವಾಹನಗಳನ್ನು ಪರಿವರ್ತಿಸಲು ಹೆಸರಾದ ಚೆನ್ನೈ ಮತ್ತು ಕೊಯಿಮತ್ತೂರುಗಳಲ್ಲಿ ಈ ರೀತಿಯ ವಿಶೇಷ ವಾಹನಗಳ ನಿರ್ಮಾಣ ಜೋರಾಗಿ ಸಾಗಿದೆ. ವಿವಿಧ ರಾಜಕಿಯ ಪಕ್ಷಗಳಿಂದ ಸಾಕಷ್ಟು ಬೇಡಿಕೆಯೂ ಬರುತ್ತಿದೆ.<br /> ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಗಾಲಿ ಕುರ್ಚಿಯಲ್ಲಿ ಕುಳಿತೇ ಪ್ರಚಾರ ನಡೆಸಲು ಬಯಸಿದ್ದಾರೆ. ಅದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ವಿಶೇಷ ವಾಹನ ಜರ್ಮನಿಯಿಂದ ತರಿಸಿಕೊಳ್ಳಲಾಗಿದೆ.<br /> <br /> ಮುಖ್ಯಮಂತ್ರಿ ಜಯಲಲಿತಾ ಬಳಸುವ ವಾಹನದಲ್ಲಿ ಉಡುಪು ಬದಲಾಯಿಸಲು ಪ್ರತ್ಯೇಕ ಕೋಣೆ, ಚಿಕ್ಕ ಸೋಫಾ, ಆರಾಮ ಕುರ್ಚಿ, ಮಲಗುವ ಕೋಣೆ ಹಾಗೂ ಶೌಚಾಲಯಗಳೆಲ್ಲವೂ ಇರಲಿವೆ.<br /> <br /> ‘ಗ್ರಾಹಕರ ಅಭಿರುಚಿ, ಅವಶ್ಯಕತೆಗೆ ತಕ್ಕಂತೆ ಐಷಾರಾಮಿ ವಾಹನ ಪರಿವರ್ತಿಸಲಾಗುತ್ತದೆ. ಇದಕ್ಕೆ 20–30 ದಿನಗಳು ಬೇಕಾಗುತ್ತವೆ’ ಎಂದು ಕೊಯಿಮತ್ತೂರಿನ ಕೋಯಾಸ್ ಅಂಡ್ ಸನ್ಸ್ ಪರಿವರ್ತನಾ ಡಿಪೋದ ಪಿ.ವಿ.ಮಹಮ್ಮದ್ ಅವರು ಹೇಳುತ್ತಾರೆ.<br /> <br /> ‘ಈ ವಾಹನಗಳ ಪರಿವರ್ತನೆಗೆ ರೂ ಎರಡು ಲಕ್ಷದಿಂದ ರೂ 20 ಲಕ್ಷಗಳ ವರೆಗೂ ವೆಚ್ಚ ತಗುಲುತ್ತದೆ’ ಎಂದು ಪುದುಪೆಟ್ನಲ್ಲಿರುವ ಕೆ.ಎಸ್.ಪಿ.ಮೋಟಾರ್ಸ್ನ ಮೆಕ್ಯಾನಿಕ್ ಎಂ.ಶೇಖರ್ ಹೇಳುತ್ತಾರೆ.<br /> <br /> ಈ ರೀತಿ ಪರಿವರ್ತಿಸಿದ ವಾಹನಗಳಲ್ಲಿ ಪ್ರಚಾರಕರು ಆಹಾರ ಸೇವನೆ, ವಿಶ್ರಾಂತಿ ಹಾಗೂ ಮುಂದಿನ ಪ್ರಚಾರಕ್ಕೆ ಸಿದ್ಧತೆ ನಡೆಸಿಕೊಳ್ಳುವ ಎಲ್ಲ ಅವಕಾಶಗಳು ಇರುತ್ತವೆ.<br /> <br /> ಕರುಣಾನಿಧಿ ಅವರ ಪುತ್ರ ಸ್ಟಾಲಿನ್ ಕೂಡ ಐಷಾರಾಮಿ ವಾಹನದ ಮೋಹಕ್ಕೆ ಸಿಲುಕಿದ್ದಾರೆ. ಮಾರ್ಚ್ 14ರಿಂದ ಅವರು ಇಂತಹುದೇ ವಾಹನದಲ್ಲಿ ಕನ್ಯಾಕುಮಾರಿಯಿಂದ ಪ್ರಚಾರ ಆರಂಭಿಸಲಿದ್ದಾರೆ.<br /> <br /> ‘ಈ ವಾಹನಗಳು ಹವಾ ನಿಯಂತ್ರಿತವಾಗಿರಲಿದ್ದು, ಯಾಂತ್ರೀಕೃತ ಮೇಜು–ಕುರ್ಚಿಗಳೂ ಇರಲಿವೆ. ವಾಹನದ ಮೇಲ್ಛಾವಣಿಯನ್ನು ತೆರೆದು ಕುರ್ಚಿಯ ಸಹಾಯದಿಂದ ವಾಹನದ ಮೇಲ್ಭಾಗಕ್ಕೆ ಬಂದು ಪ್ರಚಾರ ಕೈಗೊಳ್ಳಲೂ ಸಾಧ್ಯ’ ಎಂದು ಪುದುಪೆಟ್ನಲ್ಲಿರುವ ಕೆ.ಎಸ್.ಪಿ.ಮೋಟಾರ್ಸ್ನ ಮೆಕ್ಯಾನಿಕ್ ಎಂ.ಶೇಖರ್ ವಿವರಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಮೊದಲೆಲ್ಲ ರಾಜಕಾರಣಿಗಳು ತೆರೆದ ವಾಹನಗಳಲ್ಲಿ ಚುನಾವಣಾ ಪ್ರಚಾರ ಅಭಿಯಾನ ಕೈಗೊಳ್ಳುತ್ತಿದ್ದರು. ಇಂದಿನ ರಾಜಕಾರಣಿಗಳು ಈ ವಿಚಾರದಲ್ಲಿ ಸಂಪೂರ್ಣ ಭಿನ್ನವಾಗಿದ್ದಾರೆ.<br /> <br /> ತಂತ್ರಜ್ಞಾನ ಬದಲಾದಂತೆ ರಾಜಕಾರಣಿಗಳ ಪ್ರಚಾರ ವೈಖರಿಯೂ ಬದಲಾಗಿದೆ. ಇದಕ್ಕೆ ತಮಿಳುನಾಡಿನಲ್ಲಿ ಸಾಕಷ್ಟು ತಾಜಾ ಉದಾಹರಣೆ ಸಿಗುತ್ತವೆ. ಅತ್ಯಾಧುನಿಕ, ಸುಸಜ್ಜಿತ ವಾಹನಗಳಲ್ಲಿ ಇಲ್ಲಿನ ರಾಜಕಾರಣಿಗಳು ಪ್ರಚಾರ ಕೈಗೊಳ್ಳಲು ಉತ್ಸುಕರಾಗಿದ್ದಾರೆ. ಎಲ್ಲ ರೀತಿಯ ಗ್ಯಾಜೆಟ್, ಅಂತರ್ಜಾಲ ಸಂಪರ್ಕ ಇರುವ ಲ್ಯಾಪ್ಟಾಪ್, ಟೆಲಿವಿಷನ್ (ಡಿಟಿಎಚ್) ಮತ್ತಿತರ ಸೌಲಭ್ಯಗಳು ಇವರ ಪ್ರಚಾರ ವಾಹನದಲ್ಲಿರುತ್ತವೆ. ಈ ವಾಹನಗಳು ಸಂಚಾರಿ ಐಷಾರಾಮಿ ಹೋಟೆಲ್ನಂತೆ ಇರುತ್ತವೆ.<br /> <br /> ಚುನಾವಣಾ ಪ್ರಚಾರದ ಅಗತ್ಯಗಳಿಗೆ ತಕ್ಕಂತೆ ವಾಹನಗಳನ್ನು ಪರಿವರ್ತಿಸಲು ಹೆಸರಾದ ಚೆನ್ನೈ ಮತ್ತು ಕೊಯಿಮತ್ತೂರುಗಳಲ್ಲಿ ಈ ರೀತಿಯ ವಿಶೇಷ ವಾಹನಗಳ ನಿರ್ಮಾಣ ಜೋರಾಗಿ ಸಾಗಿದೆ. ವಿವಿಧ ರಾಜಕಿಯ ಪಕ್ಷಗಳಿಂದ ಸಾಕಷ್ಟು ಬೇಡಿಕೆಯೂ ಬರುತ್ತಿದೆ.<br /> ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಗಾಲಿ ಕುರ್ಚಿಯಲ್ಲಿ ಕುಳಿತೇ ಪ್ರಚಾರ ನಡೆಸಲು ಬಯಸಿದ್ದಾರೆ. ಅದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ವಿಶೇಷ ವಾಹನ ಜರ್ಮನಿಯಿಂದ ತರಿಸಿಕೊಳ್ಳಲಾಗಿದೆ.<br /> <br /> ಮುಖ್ಯಮಂತ್ರಿ ಜಯಲಲಿತಾ ಬಳಸುವ ವಾಹನದಲ್ಲಿ ಉಡುಪು ಬದಲಾಯಿಸಲು ಪ್ರತ್ಯೇಕ ಕೋಣೆ, ಚಿಕ್ಕ ಸೋಫಾ, ಆರಾಮ ಕುರ್ಚಿ, ಮಲಗುವ ಕೋಣೆ ಹಾಗೂ ಶೌಚಾಲಯಗಳೆಲ್ಲವೂ ಇರಲಿವೆ.<br /> <br /> ‘ಗ್ರಾಹಕರ ಅಭಿರುಚಿ, ಅವಶ್ಯಕತೆಗೆ ತಕ್ಕಂತೆ ಐಷಾರಾಮಿ ವಾಹನ ಪರಿವರ್ತಿಸಲಾಗುತ್ತದೆ. ಇದಕ್ಕೆ 20–30 ದಿನಗಳು ಬೇಕಾಗುತ್ತವೆ’ ಎಂದು ಕೊಯಿಮತ್ತೂರಿನ ಕೋಯಾಸ್ ಅಂಡ್ ಸನ್ಸ್ ಪರಿವರ್ತನಾ ಡಿಪೋದ ಪಿ.ವಿ.ಮಹಮ್ಮದ್ ಅವರು ಹೇಳುತ್ತಾರೆ.<br /> <br /> ‘ಈ ವಾಹನಗಳ ಪರಿವರ್ತನೆಗೆ ರೂ ಎರಡು ಲಕ್ಷದಿಂದ ರೂ 20 ಲಕ್ಷಗಳ ವರೆಗೂ ವೆಚ್ಚ ತಗುಲುತ್ತದೆ’ ಎಂದು ಪುದುಪೆಟ್ನಲ್ಲಿರುವ ಕೆ.ಎಸ್.ಪಿ.ಮೋಟಾರ್ಸ್ನ ಮೆಕ್ಯಾನಿಕ್ ಎಂ.ಶೇಖರ್ ಹೇಳುತ್ತಾರೆ.<br /> <br /> ಈ ರೀತಿ ಪರಿವರ್ತಿಸಿದ ವಾಹನಗಳಲ್ಲಿ ಪ್ರಚಾರಕರು ಆಹಾರ ಸೇವನೆ, ವಿಶ್ರಾಂತಿ ಹಾಗೂ ಮುಂದಿನ ಪ್ರಚಾರಕ್ಕೆ ಸಿದ್ಧತೆ ನಡೆಸಿಕೊಳ್ಳುವ ಎಲ್ಲ ಅವಕಾಶಗಳು ಇರುತ್ತವೆ.<br /> <br /> ಕರುಣಾನಿಧಿ ಅವರ ಪುತ್ರ ಸ್ಟಾಲಿನ್ ಕೂಡ ಐಷಾರಾಮಿ ವಾಹನದ ಮೋಹಕ್ಕೆ ಸಿಲುಕಿದ್ದಾರೆ. ಮಾರ್ಚ್ 14ರಿಂದ ಅವರು ಇಂತಹುದೇ ವಾಹನದಲ್ಲಿ ಕನ್ಯಾಕುಮಾರಿಯಿಂದ ಪ್ರಚಾರ ಆರಂಭಿಸಲಿದ್ದಾರೆ.<br /> <br /> ‘ಈ ವಾಹನಗಳು ಹವಾ ನಿಯಂತ್ರಿತವಾಗಿರಲಿದ್ದು, ಯಾಂತ್ರೀಕೃತ ಮೇಜು–ಕುರ್ಚಿಗಳೂ ಇರಲಿವೆ. ವಾಹನದ ಮೇಲ್ಛಾವಣಿಯನ್ನು ತೆರೆದು ಕುರ್ಚಿಯ ಸಹಾಯದಿಂದ ವಾಹನದ ಮೇಲ್ಭಾಗಕ್ಕೆ ಬಂದು ಪ್ರಚಾರ ಕೈಗೊಳ್ಳಲೂ ಸಾಧ್ಯ’ ಎಂದು ಪುದುಪೆಟ್ನಲ್ಲಿರುವ ಕೆ.ಎಸ್.ಪಿ.ಮೋಟಾರ್ಸ್ನ ಮೆಕ್ಯಾನಿಕ್ ಎಂ.ಶೇಖರ್ ವಿವರಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>