<p><strong>ಕೆರೂರ: </strong>ಇಲ್ಲಿಗೆ ಸಮೀಪದ ಕಾಡರಕೊಪ್ಪ ಗುರು ಸದಾಶಿವನ ಮಹಾರಥೋತ್ಸವ ಸಹಸ್ರಾರು ಭಕ್ತಾದಿಗಳ ಹರ್ಷೋದ್ಘಾರದೊಂದಿಗೆ ಗುರುವಾರ ಗೋಧೂಳಿ ಮುಹೂರ್ತದಲ್ಲಿ ವಿಜೃಂಭಣೆಯಿಂದ ನೆರವೇರಿತು.<br /> <br /> ಸುಗ್ಗಿಯ ಭರಾಟೆಯಿಂದ ಬಿಡುವು ಪಡೆದಿದ್ದ ರೈತಾಪಿ ಕುಟುಂಬಗಳು ಹೊಸ ದಿರಿಸು ತೊಟ್ಟು ಆರಾಧ್ಯ ದೈವ ಸದಾಶಿವ ಜಾತ್ರೋತ್ಸವಕ್ಕೆ ಸಡಗರ ಮೂಡಿಸಿದರು.<br /> ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಲಿಕಟ್ಟಿ ಗೌಡರ ಮನೆಯ ಆರತಿ, ಬಾಜಾ ಬಜಂತ್ರಿಗಳ ವೈಭವದೊಂದಿಗೆ ರಥದ ಕಳಶದ ಮೆರವಣಿಗೆ ನಡೆಯಿತು. ಗ್ರಾಮದ ಪ್ರಮುಖರು ಇದರಲ್ಲಿ ಪಾಲ್ಗೊಂಡಿದ್ದರು.<br /> <br /> ಈರುಳ್ಳಿ ಬೆಳೆಯಲು ಪ್ರಸಿದ್ಧಿ ಪಡೆದ ಈ ಗ್ರಾಮದ ರಥೋತ್ಸವ ಕಾಲಕ್ಕೆ ಸಡಗರಕ್ಕೆ ಇಂಬು ಕೊಡಲೆಂಬಂತೆ ಕಿವಿಗಡಚಿಕ್ಕುವಂತೆ ಅಪಾರ ಪ್ರಮಾಣದ ಮದ್ದುಗಳನ್ನು ಸಿಡಿಸಲಾಯಿತು. ರಥಕ್ಕೆ ಭಕ್ತರು ಉತ್ತತ್ತಿ, ಬಾಳೆ ಹಣ್ಣು ಹಾಗೂ ಬೆಂಡು ಬೆತ್ತಾಸ ತೂರಿ ತಮ್ಮ ಇಷ್ಟಾರ್ಥ ಪೂರೈಸಿಕೊಂಡರು.<br /> <br /> ಜಾತ್ರೆಯಲ್ಲಿ ಮಕ್ಕಳ ಮನೋರಂಜನೆಗೆ ಹಾಕಿದ್ದ ತಿರುಗು ಕುರ್ಚಿ, ತೊಟ್ಟಿಲು ಮೇಲಾಟ ಹಾಗೂ ಬಲೂನ್, ಆಟಿಕೆ ವಸ್ತುಗಳ ವಹಿವಾಟು ಜೋರಾಗಿತ್ತು.ನಂತರ ಈ ಬಾರಿ ಅಜ್ಜನ ಭವಿಷ್ಯವಾಣಿಯಂತೆ ಅಧಿಕ ಮಳೆಯಾಗುವ ವಿಷಯ ಕೇಳಿ ನೇಗಿಲಯೋಗಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ದೇವಾಲಯ ಆವರಣದಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಕೆರೂರ ಹಾಗೂ ಲೋಕಾಪೂರ ಪೊಲೀಸರು ರಥೋತ್ಸವ ಕಾಲಕ್ಕೆ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆರೂರ: </strong>ಇಲ್ಲಿಗೆ ಸಮೀಪದ ಕಾಡರಕೊಪ್ಪ ಗುರು ಸದಾಶಿವನ ಮಹಾರಥೋತ್ಸವ ಸಹಸ್ರಾರು ಭಕ್ತಾದಿಗಳ ಹರ್ಷೋದ್ಘಾರದೊಂದಿಗೆ ಗುರುವಾರ ಗೋಧೂಳಿ ಮುಹೂರ್ತದಲ್ಲಿ ವಿಜೃಂಭಣೆಯಿಂದ ನೆರವೇರಿತು.<br /> <br /> ಸುಗ್ಗಿಯ ಭರಾಟೆಯಿಂದ ಬಿಡುವು ಪಡೆದಿದ್ದ ರೈತಾಪಿ ಕುಟುಂಬಗಳು ಹೊಸ ದಿರಿಸು ತೊಟ್ಟು ಆರಾಧ್ಯ ದೈವ ಸದಾಶಿವ ಜಾತ್ರೋತ್ಸವಕ್ಕೆ ಸಡಗರ ಮೂಡಿಸಿದರು.<br /> ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಲಿಕಟ್ಟಿ ಗೌಡರ ಮನೆಯ ಆರತಿ, ಬಾಜಾ ಬಜಂತ್ರಿಗಳ ವೈಭವದೊಂದಿಗೆ ರಥದ ಕಳಶದ ಮೆರವಣಿಗೆ ನಡೆಯಿತು. ಗ್ರಾಮದ ಪ್ರಮುಖರು ಇದರಲ್ಲಿ ಪಾಲ್ಗೊಂಡಿದ್ದರು.<br /> <br /> ಈರುಳ್ಳಿ ಬೆಳೆಯಲು ಪ್ರಸಿದ್ಧಿ ಪಡೆದ ಈ ಗ್ರಾಮದ ರಥೋತ್ಸವ ಕಾಲಕ್ಕೆ ಸಡಗರಕ್ಕೆ ಇಂಬು ಕೊಡಲೆಂಬಂತೆ ಕಿವಿಗಡಚಿಕ್ಕುವಂತೆ ಅಪಾರ ಪ್ರಮಾಣದ ಮದ್ದುಗಳನ್ನು ಸಿಡಿಸಲಾಯಿತು. ರಥಕ್ಕೆ ಭಕ್ತರು ಉತ್ತತ್ತಿ, ಬಾಳೆ ಹಣ್ಣು ಹಾಗೂ ಬೆಂಡು ಬೆತ್ತಾಸ ತೂರಿ ತಮ್ಮ ಇಷ್ಟಾರ್ಥ ಪೂರೈಸಿಕೊಂಡರು.<br /> <br /> ಜಾತ್ರೆಯಲ್ಲಿ ಮಕ್ಕಳ ಮನೋರಂಜನೆಗೆ ಹಾಕಿದ್ದ ತಿರುಗು ಕುರ್ಚಿ, ತೊಟ್ಟಿಲು ಮೇಲಾಟ ಹಾಗೂ ಬಲೂನ್, ಆಟಿಕೆ ವಸ್ತುಗಳ ವಹಿವಾಟು ಜೋರಾಗಿತ್ತು.ನಂತರ ಈ ಬಾರಿ ಅಜ್ಜನ ಭವಿಷ್ಯವಾಣಿಯಂತೆ ಅಧಿಕ ಮಳೆಯಾಗುವ ವಿಷಯ ಕೇಳಿ ನೇಗಿಲಯೋಗಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ದೇವಾಲಯ ಆವರಣದಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಕೆರೂರ ಹಾಗೂ ಲೋಕಾಪೂರ ಪೊಲೀಸರು ರಥೋತ್ಸವ ಕಾಲಕ್ಕೆ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>