<p>ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದ್ವಾನ್ ಆರ್.ಕೆ. ಪದ್ಮನಾಭ ಮೇರು ಕಲಾವಿದರು. ನಾಲ್ಕು ದಶಕಗಳಿಂದ ಶಾಸ್ತ್ರೀಯ ಸಂಗೀತ ಕಛೇರಿ ನೀಡುತ್ತಾ ಬಂದಿರುವ ಆರ್ಕೆಪಿ ಉತ್ತಮ ಗುರು, ಸಂಗೀತ ನಿರ್ದೇಶಕ, ರಾಗ ಸಂಯೋಜಕರಾಗಿ ಸಂಗೀತದ ವಿವಿಧ ಮಜಲುಗಳಲ್ಲಿ ಕೃಷಿ ನಡೆಸುತ್ತಾ ಬಂದವರು. <br /> <br /> ವಾದಿರಾಜರ ಆರಾಧಕರಾದ ಇವರು ವಾದಿರಾಜ ಕಲಾ ಭವನ ಕಟ್ಟಿಸಿ ಹಿರಿ-ಕಿರಿಯ ಕಲಾವಿದರ ನೂರಾರು ಸಂಗೀತ ಕಛೇರಿಗಳನ್ನೂ ಏರ್ಪಡಿಸುತ್ತಾ ಬಂದಿದ್ದಾರೆ. ತಮ್ಮ ಸಂಗೀತ ಜೀವನದಲ್ಲಿ ನಡೆದ ಮರೆಯಲಾರದ ಘಟನೆ, ಹಾಸ್ಯ ಸನ್ನಿವೇಶಗಳನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ.<br /> <br /> * ಅದು 1984ರ ಇಸವಿ. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಸಂಗೀತ ಪಾಠ ಹೇಳಿಕೊಡುತ್ತಿದ್ದೆ. ಸಂಜೆ 4.30ಕ್ಕೆ ಪಾಠ ಶುರು ಆಗುತ್ತಿತ್ತು. ಬ್ಯಾಂಕ್ನಲ್ಲಿ ಕೆಲಸ ಮುಗಿಸಿ ಸಂಜೆ ನಾಲ್ಕು ಗಂಟೆಗೆಲ್ಲ ಅಲ್ಲಿರುತ್ತಿದ್ದೆ. <br /> <br /> ಕ್ಲಾಸ್ ಶುರು ಮಾಡೋದಕ್ಕೆ ಮುಂಚೆ ಸುಮಾರು ಅರ್ಧ ಗಂಟೆ ನಿತ್ಯವೂ ಸಂಗೀತಾಭ್ಯಾಸ ಮಾಡುತ್ತಿದ್ದೆ. ಒಂದು ದಿನ ರೂಂನಲ್ಲಿ ಕುಳಿತು ಕಣ್ಣುಮುಚ್ಚಿಕೊಂಡು `ಷಣ್ಮುಖಪ್ರಿಯ~ ರಾಗ ಹಾಡುತ್ತಿದ್ದೆ. ಒಬ್ಬ ಶಿಷ್ಯೆ ಮುಂದೆ ಕುಳಿತಿದ್ದಳು. ಹಾಡು ಮುಗಿಸಿದಾಗ ಅವಳ ಕಣ್ಣಲ್ಲಿ ಧಾರಾಕಾರ ನೀರು. <br /> <br /> ನನ್ನ ಸಂಗೀತ ಈಕೆಗೆ ಇಷ್ಟೊಂದು ಖುಷಿಯಾಯ್ತಲ್ಲ ಅಂತ ಬಹಳ ಸಂತೋಷಪಟ್ಟೆ. ಒಬ್ಬ ಸಂಗೀತ ವಿದ್ಯಾರ್ಥಿನಿ ಸಂಗೀತ ಕೇಳಿ ಇಷ್ಟು ಭಾವುಕಳಾದದ್ದು ನನ್ನ ಜೀವನದಲ್ಲಿ ಇದೇ ಮೊದಲು ಎನ್ನುವಷ್ಟು ಆನಂದವಾಯಿತು.<br /> <br /> `ನಿನ್ನ ಸಂಗೀತ ಆಸಕ್ತಿ ಕಂಡು ತುಂಬ ಖುಷಿಯಾಗಿದೆ; ಐ ಬ್ಲೆಸ್ ಯು~ ಅಂದೆ. ಅದಕ್ಕವಳು, `ನಾನು ನಿಮ್ಮ ಸಂಗೀತ ಕೇಳಿ ಅತ್ತದ್ದಲ್ಲ ಸರ್, ನನ್ನ ಅಜ್ಜಿ ಹೋಗಿ ಬಿಟ್ರು. ಅವರ ನೆನಪಾಯ್ತು~ ಎಂದುಬಿಟ್ಟಳು. ಇದು ನನ್ನ ಸಂಗೀತ ಜೀವನದಲ್ಲಿ ಮರೆಯಲಾರದ ಘಟನೆ.</p>.<p>* ಹತ್ತು ವರ್ಷ ಹಿಂದೆ ನಡೆದ ಘಟನೆ. ಮಡಿಕೇರಿ ಸಮೀಪದ ಶನಿವಾರ ಸಂತೆಯಲ್ಲಿ ಸಂಗೀತ ಶಿಬಿರ ಏರ್ಪಡಿಸಿದ್ದೆ. ಸುಮಾರು 40 ಶಿಷ್ಯರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದೆ. ಕ್ಯಾಂಪ್ನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ `ಪಂತುವರಾಳಿ~ ರಾಗದ ಒಂದು ಥೀಮ್ ಕೊಟ್ಟು ಸಂಗೀತ ಹಾಡಲು ಹೇಳಿದ್ದೆ. <br /> <br /> ಇದೇ ರಾಗದಲ್ಲಿ ಸುಮಾರು 15 ಕೃತಿಗಳನ್ನು ಕಲಿಸಿದ್ದೆ. ಎಲ್ಲರೂ ಎಲ್ಲ ಕೃತಿಗಳನ್ನು ಕಲಿಯಬೇಕಾಗಿತ್ತು. ಚೀಟಿ ಎತ್ತಿ ಯಾರಿಗೆ ಯಾವ ಕೃತಿ ಬರುತ್ತೋ ಅದನ್ನು ಹಾಡಬೇಕಿತ್ತು. ಏಕತಾನತೆ ಮುರಿಯಲು ಆ ಕೃತಿಯ ಬಗ್ಗೆ ಸ್ವಲ್ಪ ಹೊತ್ತು ಮಾತಾಡಬೇಕಿತ್ತು. <br /> <br /> ಸಂಗೀತ ಕೃತಿಯ ಬಗ್ಗೆ ಮಾತನಾಡುವಾಗ ಒಬ್ಬ ಶಿಷ್ಯೆ- `ನನ್ನ ತಂದೆ ನನಗೆ ಷಡ್ಜ, ಪಂಚಮ ಕಲಿಸಿ ಸಂಗೀತದ ಬೀಜ ಬಿತ್ತನೆ ಮಾಡಿದ್ರು. ಈ ಸಂಗೀತ ಮೇಷ್ಟ್ರು ಅದಕ್ಕೆ ನಾಟಿ ಗೊಬ್ಬರ ಹಾಕಿ ಪೋಷಣೆ ಮಾಡ್ತಾ ಇದ್ದಾರೆ. ಇವರು ನಿಜವಾಗಿಯೂ `ಗೊಬ್ಬರದ ಮೇಷ್ಟ್ರು~ ಅಂದು ಬಿಟ್ಟಳು. ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದೇ ನಕ್ಕಿದ್ದು..!<br /> <br /> ಅದೇ ಶಿಬಿರದಲ್ಲಿ ಮತ್ತೊಬ್ಬ ಶಿಷ್ಯೆ- `ನಾನು 10 ವರ್ಷದಿಂದ ಸಂಗೀತ ಕಲೀತಾ ಇದ್ದೇನೆ. ಒಬ್ಬ ಸಂಗೀತ ಮೇಷ್ಟ್ರ ಹತ್ತಿರ ಮೂರು ವರ್ಷ ಕಲಿತೆ. ಅಷ್ಟರಲ್ಲಿ ಅವರು ಹೋಗಿಬಿಟ್ರು. ಮತ್ತೊಬ್ಬರ ಹತ್ರ ನಾಲ್ಕು ವರ್ಷ ಕಲಿತೆ. ಅವರು ಸಹ ಹೋದ್ರು. ಈಗ ಈ ಮೇಷ್ಟ್ರ ಹತ್ರ ಕಲಿಯೋದಕ್ಕೆ ಬಂದಿದ್ದೀನಿ. ಇವರು ಯಾವಾಗ ಹೋಗ್ತಾರೋ ಗೊತ್ತಿಲ್ಲ..~ ಎಂದು ಹಾಸ್ಯ ಚಟಾಕಿ ಹಾರಿಸಿದಳು.</p>.<p>* ಒಮ್ಮೆ ವಾದಿರಾಜ ಭವನದಲ್ಲಿ ಸಂಗೀತ ಕಾರ್ಯಕ್ರಮ. ನೂರಾರು ಕೇಳುಗರು ನೆರೆದಿದ್ದರು. ಒಬ್ಬ ಸ್ನೇಹಿತ ಬಂದು- `ಸರ್, ಇಲ್ಲಿ ಏನೇನು ಕಾರ್ಯಕ್ರಮ ಮಾಡ್ತೀರಿ?~ ಅಂದ. ನಾನು ಪುರಂದರದಾಸರ ಆರಾಧನೆ, ಮುತ್ತುಸ್ವಾಮಿ ದೀಕ್ಷಿತರ ಆರಾಧನೆ ಮಾಡ್ತೀವಿ ಅಂದೆ. ಅದಕ್ಕೆ ಅವನು, `ನಾನು ಕೋಲಾರದಲ್ಲಿ ತ್ಯಾಗರಾಜರ ಆರಾಧನೆಯನ್ನು ಅದ್ದೂರಿಯಾಗಿ ಮಾಡ್ತೀನಿ~ ಅಂದ.<br /> <br /> ಮತ್ತೆ, `ಈ ಭವನದಲ್ಲಿ ನಿಮ್ಮ ಆರಾಧನೆ ಯಾವಾಗ ಸರ್?~ ಅಂದ. ತ್ಯಾಗರಾಜರ ಆರಾಧನೆ ಯಾವಾಗ ಮಾಡ್ತೀರಿ ಎಂದು ಕೇಳೋದಕ್ಕೆ ಬದಲಾಗಿ ಆತ ಹೀಗೆ ಕೇಳಿದ್ದ. ನಾನು ಹೇಳಿದೆ- `ನನ್ನ ಆರಾಧನೆ ಮಾಡಲು ಇನ್ನೂ ಟೈಮಿದೆ; ಕಾಯ್ಬೇಕು~.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದ್ವಾನ್ ಆರ್.ಕೆ. ಪದ್ಮನಾಭ ಮೇರು ಕಲಾವಿದರು. ನಾಲ್ಕು ದಶಕಗಳಿಂದ ಶಾಸ್ತ್ರೀಯ ಸಂಗೀತ ಕಛೇರಿ ನೀಡುತ್ತಾ ಬಂದಿರುವ ಆರ್ಕೆಪಿ ಉತ್ತಮ ಗುರು, ಸಂಗೀತ ನಿರ್ದೇಶಕ, ರಾಗ ಸಂಯೋಜಕರಾಗಿ ಸಂಗೀತದ ವಿವಿಧ ಮಜಲುಗಳಲ್ಲಿ ಕೃಷಿ ನಡೆಸುತ್ತಾ ಬಂದವರು. <br /> <br /> ವಾದಿರಾಜರ ಆರಾಧಕರಾದ ಇವರು ವಾದಿರಾಜ ಕಲಾ ಭವನ ಕಟ್ಟಿಸಿ ಹಿರಿ-ಕಿರಿಯ ಕಲಾವಿದರ ನೂರಾರು ಸಂಗೀತ ಕಛೇರಿಗಳನ್ನೂ ಏರ್ಪಡಿಸುತ್ತಾ ಬಂದಿದ್ದಾರೆ. ತಮ್ಮ ಸಂಗೀತ ಜೀವನದಲ್ಲಿ ನಡೆದ ಮರೆಯಲಾರದ ಘಟನೆ, ಹಾಸ್ಯ ಸನ್ನಿವೇಶಗಳನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ.<br /> <br /> * ಅದು 1984ರ ಇಸವಿ. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಸಂಗೀತ ಪಾಠ ಹೇಳಿಕೊಡುತ್ತಿದ್ದೆ. ಸಂಜೆ 4.30ಕ್ಕೆ ಪಾಠ ಶುರು ಆಗುತ್ತಿತ್ತು. ಬ್ಯಾಂಕ್ನಲ್ಲಿ ಕೆಲಸ ಮುಗಿಸಿ ಸಂಜೆ ನಾಲ್ಕು ಗಂಟೆಗೆಲ್ಲ ಅಲ್ಲಿರುತ್ತಿದ್ದೆ. <br /> <br /> ಕ್ಲಾಸ್ ಶುರು ಮಾಡೋದಕ್ಕೆ ಮುಂಚೆ ಸುಮಾರು ಅರ್ಧ ಗಂಟೆ ನಿತ್ಯವೂ ಸಂಗೀತಾಭ್ಯಾಸ ಮಾಡುತ್ತಿದ್ದೆ. ಒಂದು ದಿನ ರೂಂನಲ್ಲಿ ಕುಳಿತು ಕಣ್ಣುಮುಚ್ಚಿಕೊಂಡು `ಷಣ್ಮುಖಪ್ರಿಯ~ ರಾಗ ಹಾಡುತ್ತಿದ್ದೆ. ಒಬ್ಬ ಶಿಷ್ಯೆ ಮುಂದೆ ಕುಳಿತಿದ್ದಳು. ಹಾಡು ಮುಗಿಸಿದಾಗ ಅವಳ ಕಣ್ಣಲ್ಲಿ ಧಾರಾಕಾರ ನೀರು. <br /> <br /> ನನ್ನ ಸಂಗೀತ ಈಕೆಗೆ ಇಷ್ಟೊಂದು ಖುಷಿಯಾಯ್ತಲ್ಲ ಅಂತ ಬಹಳ ಸಂತೋಷಪಟ್ಟೆ. ಒಬ್ಬ ಸಂಗೀತ ವಿದ್ಯಾರ್ಥಿನಿ ಸಂಗೀತ ಕೇಳಿ ಇಷ್ಟು ಭಾವುಕಳಾದದ್ದು ನನ್ನ ಜೀವನದಲ್ಲಿ ಇದೇ ಮೊದಲು ಎನ್ನುವಷ್ಟು ಆನಂದವಾಯಿತು.<br /> <br /> `ನಿನ್ನ ಸಂಗೀತ ಆಸಕ್ತಿ ಕಂಡು ತುಂಬ ಖುಷಿಯಾಗಿದೆ; ಐ ಬ್ಲೆಸ್ ಯು~ ಅಂದೆ. ಅದಕ್ಕವಳು, `ನಾನು ನಿಮ್ಮ ಸಂಗೀತ ಕೇಳಿ ಅತ್ತದ್ದಲ್ಲ ಸರ್, ನನ್ನ ಅಜ್ಜಿ ಹೋಗಿ ಬಿಟ್ರು. ಅವರ ನೆನಪಾಯ್ತು~ ಎಂದುಬಿಟ್ಟಳು. ಇದು ನನ್ನ ಸಂಗೀತ ಜೀವನದಲ್ಲಿ ಮರೆಯಲಾರದ ಘಟನೆ.</p>.<p>* ಹತ್ತು ವರ್ಷ ಹಿಂದೆ ನಡೆದ ಘಟನೆ. ಮಡಿಕೇರಿ ಸಮೀಪದ ಶನಿವಾರ ಸಂತೆಯಲ್ಲಿ ಸಂಗೀತ ಶಿಬಿರ ಏರ್ಪಡಿಸಿದ್ದೆ. ಸುಮಾರು 40 ಶಿಷ್ಯರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದೆ. ಕ್ಯಾಂಪ್ನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ `ಪಂತುವರಾಳಿ~ ರಾಗದ ಒಂದು ಥೀಮ್ ಕೊಟ್ಟು ಸಂಗೀತ ಹಾಡಲು ಹೇಳಿದ್ದೆ. <br /> <br /> ಇದೇ ರಾಗದಲ್ಲಿ ಸುಮಾರು 15 ಕೃತಿಗಳನ್ನು ಕಲಿಸಿದ್ದೆ. ಎಲ್ಲರೂ ಎಲ್ಲ ಕೃತಿಗಳನ್ನು ಕಲಿಯಬೇಕಾಗಿತ್ತು. ಚೀಟಿ ಎತ್ತಿ ಯಾರಿಗೆ ಯಾವ ಕೃತಿ ಬರುತ್ತೋ ಅದನ್ನು ಹಾಡಬೇಕಿತ್ತು. ಏಕತಾನತೆ ಮುರಿಯಲು ಆ ಕೃತಿಯ ಬಗ್ಗೆ ಸ್ವಲ್ಪ ಹೊತ್ತು ಮಾತಾಡಬೇಕಿತ್ತು. <br /> <br /> ಸಂಗೀತ ಕೃತಿಯ ಬಗ್ಗೆ ಮಾತನಾಡುವಾಗ ಒಬ್ಬ ಶಿಷ್ಯೆ- `ನನ್ನ ತಂದೆ ನನಗೆ ಷಡ್ಜ, ಪಂಚಮ ಕಲಿಸಿ ಸಂಗೀತದ ಬೀಜ ಬಿತ್ತನೆ ಮಾಡಿದ್ರು. ಈ ಸಂಗೀತ ಮೇಷ್ಟ್ರು ಅದಕ್ಕೆ ನಾಟಿ ಗೊಬ್ಬರ ಹಾಕಿ ಪೋಷಣೆ ಮಾಡ್ತಾ ಇದ್ದಾರೆ. ಇವರು ನಿಜವಾಗಿಯೂ `ಗೊಬ್ಬರದ ಮೇಷ್ಟ್ರು~ ಅಂದು ಬಿಟ್ಟಳು. ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದೇ ನಕ್ಕಿದ್ದು..!<br /> <br /> ಅದೇ ಶಿಬಿರದಲ್ಲಿ ಮತ್ತೊಬ್ಬ ಶಿಷ್ಯೆ- `ನಾನು 10 ವರ್ಷದಿಂದ ಸಂಗೀತ ಕಲೀತಾ ಇದ್ದೇನೆ. ಒಬ್ಬ ಸಂಗೀತ ಮೇಷ್ಟ್ರ ಹತ್ತಿರ ಮೂರು ವರ್ಷ ಕಲಿತೆ. ಅಷ್ಟರಲ್ಲಿ ಅವರು ಹೋಗಿಬಿಟ್ರು. ಮತ್ತೊಬ್ಬರ ಹತ್ರ ನಾಲ್ಕು ವರ್ಷ ಕಲಿತೆ. ಅವರು ಸಹ ಹೋದ್ರು. ಈಗ ಈ ಮೇಷ್ಟ್ರ ಹತ್ರ ಕಲಿಯೋದಕ್ಕೆ ಬಂದಿದ್ದೀನಿ. ಇವರು ಯಾವಾಗ ಹೋಗ್ತಾರೋ ಗೊತ್ತಿಲ್ಲ..~ ಎಂದು ಹಾಸ್ಯ ಚಟಾಕಿ ಹಾರಿಸಿದಳು.</p>.<p>* ಒಮ್ಮೆ ವಾದಿರಾಜ ಭವನದಲ್ಲಿ ಸಂಗೀತ ಕಾರ್ಯಕ್ರಮ. ನೂರಾರು ಕೇಳುಗರು ನೆರೆದಿದ್ದರು. ಒಬ್ಬ ಸ್ನೇಹಿತ ಬಂದು- `ಸರ್, ಇಲ್ಲಿ ಏನೇನು ಕಾರ್ಯಕ್ರಮ ಮಾಡ್ತೀರಿ?~ ಅಂದ. ನಾನು ಪುರಂದರದಾಸರ ಆರಾಧನೆ, ಮುತ್ತುಸ್ವಾಮಿ ದೀಕ್ಷಿತರ ಆರಾಧನೆ ಮಾಡ್ತೀವಿ ಅಂದೆ. ಅದಕ್ಕೆ ಅವನು, `ನಾನು ಕೋಲಾರದಲ್ಲಿ ತ್ಯಾಗರಾಜರ ಆರಾಧನೆಯನ್ನು ಅದ್ದೂರಿಯಾಗಿ ಮಾಡ್ತೀನಿ~ ಅಂದ.<br /> <br /> ಮತ್ತೆ, `ಈ ಭವನದಲ್ಲಿ ನಿಮ್ಮ ಆರಾಧನೆ ಯಾವಾಗ ಸರ್?~ ಅಂದ. ತ್ಯಾಗರಾಜರ ಆರಾಧನೆ ಯಾವಾಗ ಮಾಡ್ತೀರಿ ಎಂದು ಕೇಳೋದಕ್ಕೆ ಬದಲಾಗಿ ಆತ ಹೀಗೆ ಕೇಳಿದ್ದ. ನಾನು ಹೇಳಿದೆ- `ನನ್ನ ಆರಾಧನೆ ಮಾಡಲು ಇನ್ನೂ ಟೈಮಿದೆ; ಕಾಯ್ಬೇಕು~.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>