<p><strong>ಕಾನ್ಪುರ:</strong> ತಂಡ ಸಂಕಷ್ಟದಲ್ಲಿದ್ದಾಗ ಗಟ್ಟಿಯಾಗಿ ನಿಂತು ಎದುರಿಸುವುದು 24ರ ಹರೆಯದ ಈ ಹುಡುಗನಿಗೆ ರೂಢಿಯಾಗಿಬಿಟ್ಟಿದೆ. ಇಡೀ ಋತುವಿನಲ್ಲಿ ತಂಡದ ಬ್ಯಾಟಿಂಗ್ ಕ್ರಮಾಂಕ ಕುಸಿದಾಗಲೆಲ್ಲ ಸಿ.ಎಂ. ಗೌತಮ್ ಬ್ಯಾಟ್ ಮೂಲಕ ತಮ್ಮ ಆಟ ತೋರಿಸಿದ್ದಾರೆ. ಕಾನ್ಪುರದಲ್ಲಿ ಬುಧವಾರ ಆರಂಭವಾದ ರಣಜಿ ಟ್ರೋಫಿ ಸೂಪರ್ ಲೀಗ್ ಪಂದ್ಯದಲ್ಲಿ 135ಕ್ಕೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಬಂದ ಮುರಳೀಧರನ್ ಗೌತಮ್ ಶತಕ ಬಾರಿಸಿದರು. ಜೊತೆಗೆ ತಂಡದ ಮೊತ್ತ 400ರ ಗಡಿ ದಾಟುವಂತೆ ಮಾಡಿದರು. <br /> <br /> 2008ರಲ್ಲಿ ಉತ್ತರ ಪ್ರದೇಶದ ವಿರುದ್ಧವೇ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಗೌತಮ್ಗಿದು ಐದನೇ ಶತಕ. ಇದೇ ಋತುವಿನಲ್ಲಿ ಒಡಿಶಾ ವಿರುದ್ಧ ಬೆಂಗಳೂರಿನಲ್ಲಿ ಗಳಿಸಿದ್ದ 158 ರನ್ನುಗಳು ಅವರ ಶ್ರೇಷ್ಠ ಮೊತ್ತ. ಈ ಪಂದ್ಯದಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದ ಗೌತಮ್ ಧರ್ಮಶಾಲೆಯಲ್ಲಿ ಹಿಮಾಚಲ ಪ್ರದೇಶದ ವಿರುದ್ಧದ ಪಂದ್ಯ ಆಡಿರಲಿಲ್ಲ. ಆದರೆ ಮೈಸೂರಿನಲಿ ಬರೋಡಾ ಎದುರು ಮೊದಲ ಇನಿಂಗ್ಸ್ನಲ್ಲಿ ತಂಡವನ್ನು ಅಲ್ಪ ಮೊತ್ತದ ಅಪಾಯದಿಂದ ಪಾರು ಮಾಡಿದ್ದರು. <br /> <br /> ಗುರುವಾರ ವಿಕೆಟ್ ಕೀಪಿಂಗ್ನಲ್ಲಿಯೂ ಎರಡು ಕ್ಯಾಚ್ಗಳನ್ನು ಪಡೆದು ಮಿಂಚಿದ ಗೌತಮ್ ದಿನದಾಟದ ನಂತರ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದರು. <br /> “ಸವಾಲುಗಳನ್ನು ಅವಕಾಶಗಳಂತೆ ಸ್ವೀಕರಿಸುತ್ತೇನೆ. ಆದ್ದರಿಂ ದಲೇ ಕೆಳ ಕ್ರಮಾಂಕದಲ್ಲಿಯೂ ಆಡಲು ಸಾಧ್ಯವಾಗುತ್ತಿದೆ. ತಂಡ ಸಂಕಷ್ಟದಲ್ಲಿದ್ದಾಗ ಉತ್ತಮ ಆಡಿದಾಗ ಅದರಿಂದ ಸಿಗುವ ಖುಷಿಯೇ ಅದ್ಭುತ” ಎಂದು ಹೇಳುತ್ತಾರೆ ಗೌತಮ್.<br /> <br /> ಬೌಲರ್ಗಳ ನಿದ್ದೆಗೆಡಿಸಿದ ಉದಿತ್: ಪ್ರಸಕ್ತ ಋತುವಿನಲ್ಲಿ ತಮ್ಮ ಬೌಲಿಂಗ್ ಮೂಲಕ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿರುವ ಅಭಿಮನ್ಯು ಮಿಥುನ್ ಬೆನ್ನುನೋವಿನಿಂದ ಹೊರಗುಳಿದಾಗ ತಂಡದಲ್ಲಿ ಸ್ವಲ್ಪ ಮಟ್ಟಿನ ಆತಂಕವಿತ್ತು. ಆದರೆ ಆ ಕೊರತೆಯನ್ನು ಅವರ ಬದಲಿಗೆ ಬಂದ ಉದಿತ್ ಬ್ರಿಜೇಶ್ ಪಟೇಲ್ ಸಮರ್ಥವಾಗಿ ತುಂಬಿದರು! ಗುರುವಾರ 290 ರನ್ ಗಳಿಸಿದ್ದ ತಂಡದ ಮೊತ್ತ ನಾಲ್ಕನೂರು ದಾಟಲು ಗೌತಮ್ ಜೊತೆಗೆ ಉದಿತ್ ಕಾರಣರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾನ್ಪುರ:</strong> ತಂಡ ಸಂಕಷ್ಟದಲ್ಲಿದ್ದಾಗ ಗಟ್ಟಿಯಾಗಿ ನಿಂತು ಎದುರಿಸುವುದು 24ರ ಹರೆಯದ ಈ ಹುಡುಗನಿಗೆ ರೂಢಿಯಾಗಿಬಿಟ್ಟಿದೆ. ಇಡೀ ಋತುವಿನಲ್ಲಿ ತಂಡದ ಬ್ಯಾಟಿಂಗ್ ಕ್ರಮಾಂಕ ಕುಸಿದಾಗಲೆಲ್ಲ ಸಿ.ಎಂ. ಗೌತಮ್ ಬ್ಯಾಟ್ ಮೂಲಕ ತಮ್ಮ ಆಟ ತೋರಿಸಿದ್ದಾರೆ. ಕಾನ್ಪುರದಲ್ಲಿ ಬುಧವಾರ ಆರಂಭವಾದ ರಣಜಿ ಟ್ರೋಫಿ ಸೂಪರ್ ಲೀಗ್ ಪಂದ್ಯದಲ್ಲಿ 135ಕ್ಕೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಬಂದ ಮುರಳೀಧರನ್ ಗೌತಮ್ ಶತಕ ಬಾರಿಸಿದರು. ಜೊತೆಗೆ ತಂಡದ ಮೊತ್ತ 400ರ ಗಡಿ ದಾಟುವಂತೆ ಮಾಡಿದರು. <br /> <br /> 2008ರಲ್ಲಿ ಉತ್ತರ ಪ್ರದೇಶದ ವಿರುದ್ಧವೇ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಗೌತಮ್ಗಿದು ಐದನೇ ಶತಕ. ಇದೇ ಋತುವಿನಲ್ಲಿ ಒಡಿಶಾ ವಿರುದ್ಧ ಬೆಂಗಳೂರಿನಲ್ಲಿ ಗಳಿಸಿದ್ದ 158 ರನ್ನುಗಳು ಅವರ ಶ್ರೇಷ್ಠ ಮೊತ್ತ. ಈ ಪಂದ್ಯದಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದ ಗೌತಮ್ ಧರ್ಮಶಾಲೆಯಲ್ಲಿ ಹಿಮಾಚಲ ಪ್ರದೇಶದ ವಿರುದ್ಧದ ಪಂದ್ಯ ಆಡಿರಲಿಲ್ಲ. ಆದರೆ ಮೈಸೂರಿನಲಿ ಬರೋಡಾ ಎದುರು ಮೊದಲ ಇನಿಂಗ್ಸ್ನಲ್ಲಿ ತಂಡವನ್ನು ಅಲ್ಪ ಮೊತ್ತದ ಅಪಾಯದಿಂದ ಪಾರು ಮಾಡಿದ್ದರು. <br /> <br /> ಗುರುವಾರ ವಿಕೆಟ್ ಕೀಪಿಂಗ್ನಲ್ಲಿಯೂ ಎರಡು ಕ್ಯಾಚ್ಗಳನ್ನು ಪಡೆದು ಮಿಂಚಿದ ಗೌತಮ್ ದಿನದಾಟದ ನಂತರ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದರು. <br /> “ಸವಾಲುಗಳನ್ನು ಅವಕಾಶಗಳಂತೆ ಸ್ವೀಕರಿಸುತ್ತೇನೆ. ಆದ್ದರಿಂ ದಲೇ ಕೆಳ ಕ್ರಮಾಂಕದಲ್ಲಿಯೂ ಆಡಲು ಸಾಧ್ಯವಾಗುತ್ತಿದೆ. ತಂಡ ಸಂಕಷ್ಟದಲ್ಲಿದ್ದಾಗ ಉತ್ತಮ ಆಡಿದಾಗ ಅದರಿಂದ ಸಿಗುವ ಖುಷಿಯೇ ಅದ್ಭುತ” ಎಂದು ಹೇಳುತ್ತಾರೆ ಗೌತಮ್.<br /> <br /> ಬೌಲರ್ಗಳ ನಿದ್ದೆಗೆಡಿಸಿದ ಉದಿತ್: ಪ್ರಸಕ್ತ ಋತುವಿನಲ್ಲಿ ತಮ್ಮ ಬೌಲಿಂಗ್ ಮೂಲಕ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿರುವ ಅಭಿಮನ್ಯು ಮಿಥುನ್ ಬೆನ್ನುನೋವಿನಿಂದ ಹೊರಗುಳಿದಾಗ ತಂಡದಲ್ಲಿ ಸ್ವಲ್ಪ ಮಟ್ಟಿನ ಆತಂಕವಿತ್ತು. ಆದರೆ ಆ ಕೊರತೆಯನ್ನು ಅವರ ಬದಲಿಗೆ ಬಂದ ಉದಿತ್ ಬ್ರಿಜೇಶ್ ಪಟೇಲ್ ಸಮರ್ಥವಾಗಿ ತುಂಬಿದರು! ಗುರುವಾರ 290 ರನ್ ಗಳಿಸಿದ್ದ ತಂಡದ ಮೊತ್ತ ನಾಲ್ಕನೂರು ದಾಟಲು ಗೌತಮ್ ಜೊತೆಗೆ ಉದಿತ್ ಕಾರಣರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>