<p><strong>ಮದ್ದೂರು: </strong>ಹೋಟೆಲ್ ವ್ಯಾಪಾರದಲ್ಲಿ ನಷ್ಟ, ಸಾಲ ಬಾಧೆಯಿಂದ ಬೇಸತ್ತು ದಂಪತಿ ಹಾಗೂ ಮಗ ಸೇರಿದಂತೆ ಮೂವರು ನೇಣಿಗೆ ಶರಣಾಗಿರುವ ಘಟನೆ ಪಟ್ಟಣದ ಎಚ್.ಕೆ.ವೀರಣ್ಣಗೌಡ ನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. <br /> <br /> ಪಟ್ಟಣದ ಎಳೆನೀರು ಮಾರುಕಟ್ಟೆ ಬಳಿಯ ನಿವೃತ್ತ ಶಿಕ್ಷಕ ವಿ.ಸಿ.ರಾಮಣ್ಣ ಅವರ ಮನೆಯ ಮೇಲಂತಸ್ತಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಲಕ್ಷ್ಮಣ್ (60), ಲಲಿತಮ್ಮ (55), ಶರತ್ (40) ಮೃತಪಟ್ಟವರು. ಮೂರು ದಿನಗಳ ಹಿಂದೆ ಇವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.<br /> <br /> ಲಕ್ಷ್ಮಣ್ ಹಾಗೂ ಲಲಿತಮ್ಮ ಬೆಡ್ರೂಂನ ಫ್ಯಾನಿಗೆ, ಶರತ್ ಮನೆಯ ಹಾಲ್ನ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ, ಸ್ಥಳೀಯರು ಪರಿಶೀಲಿಸಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. <br /> <br /> ಬೆಂಗಳೂರು ಮೂಲದ ಇವರು ಆರು ವರ್ಷಗಳಿಂದ ಪಟ್ಟಣದಲ್ಲಿ ಹೋಟೆಲ್ ಹಾಗೂ ಬೇಕರಿ ನಡೆಸುತ್ತಿದ್ದರು. ವ್ಯಾಪಾರದಲ್ಲಿ ನಷ್ಟಗೊಂಡು 5 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಇತ್ತು ಎನ್ನಲಾಗಿದೆ.ಉಪವಿಭಾಗಾಧಿಕಾರಿ ಕೆ.ರಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಲಕ್ಷ್ಮಣ್-ಲಲಿತಮ್ಮ ದಂಪತಿ ಕೊನೆ ಪುತ್ರ ಸೀತರಾಮುಗೆ ಸಾಂತ್ವನ ಹೇಳಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು: </strong>ಹೋಟೆಲ್ ವ್ಯಾಪಾರದಲ್ಲಿ ನಷ್ಟ, ಸಾಲ ಬಾಧೆಯಿಂದ ಬೇಸತ್ತು ದಂಪತಿ ಹಾಗೂ ಮಗ ಸೇರಿದಂತೆ ಮೂವರು ನೇಣಿಗೆ ಶರಣಾಗಿರುವ ಘಟನೆ ಪಟ್ಟಣದ ಎಚ್.ಕೆ.ವೀರಣ್ಣಗೌಡ ನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. <br /> <br /> ಪಟ್ಟಣದ ಎಳೆನೀರು ಮಾರುಕಟ್ಟೆ ಬಳಿಯ ನಿವೃತ್ತ ಶಿಕ್ಷಕ ವಿ.ಸಿ.ರಾಮಣ್ಣ ಅವರ ಮನೆಯ ಮೇಲಂತಸ್ತಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಲಕ್ಷ್ಮಣ್ (60), ಲಲಿತಮ್ಮ (55), ಶರತ್ (40) ಮೃತಪಟ್ಟವರು. ಮೂರು ದಿನಗಳ ಹಿಂದೆ ಇವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.<br /> <br /> ಲಕ್ಷ್ಮಣ್ ಹಾಗೂ ಲಲಿತಮ್ಮ ಬೆಡ್ರೂಂನ ಫ್ಯಾನಿಗೆ, ಶರತ್ ಮನೆಯ ಹಾಲ್ನ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ, ಸ್ಥಳೀಯರು ಪರಿಶೀಲಿಸಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. <br /> <br /> ಬೆಂಗಳೂರು ಮೂಲದ ಇವರು ಆರು ವರ್ಷಗಳಿಂದ ಪಟ್ಟಣದಲ್ಲಿ ಹೋಟೆಲ್ ಹಾಗೂ ಬೇಕರಿ ನಡೆಸುತ್ತಿದ್ದರು. ವ್ಯಾಪಾರದಲ್ಲಿ ನಷ್ಟಗೊಂಡು 5 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಇತ್ತು ಎನ್ನಲಾಗಿದೆ.ಉಪವಿಭಾಗಾಧಿಕಾರಿ ಕೆ.ರಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಲಕ್ಷ್ಮಣ್-ಲಲಿತಮ್ಮ ದಂಪತಿ ಕೊನೆ ಪುತ್ರ ಸೀತರಾಮುಗೆ ಸಾಂತ್ವನ ಹೇಳಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>