<p><strong>ಹನುಮಸಾಗರ (ಕೊಪ್ಪಳ ಜಿಲ್ಲೆ): </strong>ಬಾಲ್ಯ ಸ್ನೇಹಿತರಾಗಿದ್ದ ಇಬ್ಬರು ಸಾವಿನಲ್ಲಿಯೂ ಒಂದಾದ ಘಟನೆ ಸಮೀಪದ ಹೂಲಗೇರಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಮರಿಯಪ್ಪ ಕಟ್ಟಿಮನಿ (65)ಮತ್ತು ಬಸಪ್ಪ ಉಂಡಿ (65) ಸಾವಿನಲ್ಲೂ ಒಂದಾದ ಸ್ನೇಹಿತರು.<br /> <br /> ಅನಾರೋಗ್ಯದಿಂದ ಬಳುಲುತ್ತಿದ್ದ ಮರಿಯಪ್ಪ ಅವರನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಅವರ ಪಾರ್ಥಿವ ಶರೀರವನ್ನು ಗ್ರಾಮಕ್ಕೆ ತರಲಾಗಿತ್ತು. ಗೆಳೆಯನ ಶವಕ್ಕೆ ಹಾರ ಹಾಕುವ ಸಂದರ್ಭದಲ್ಲಿ ಬಸಪ್ಪ ಅವರಿಗೆ ಹೃದಯಾಘಾತವಾಗಿ, ಅಲ್ಲಿಯೇ ಕುಸಿದು ಬಿದ್ದರು. ಆಸ್ಪತ್ರೆಗೆ ಸಾಗಿಸುವಾಗ ಅವರು ಮೃತಪಟ್ಟರು.<br /> <br /> ‘ಇಬ್ಬರೂ ಬಾಲ್ಯದಿಂದ ಅಪರೂಪದ ಸ್ನೇಹರಾಗಿದ್ದರು. ತಮ್ಮ ಅಲ್ಪಸ್ವಲ್ಪ ಜಮೀನಿನಲ್ಲಿ ಇಬ್ಬರೂ ಕೃಷಿ ಮಾಡುತ್ತಿದ್ದರು. ಉಳಿದಂತೆ ಇಬ್ಬರೂ ಒಂದೇ ಕಡೆ ಕೂಲಿಗೆ ಹೋಗುತ್ತಿದ್ದರು. ನಾವಿಬ್ಬರೂ ಸ್ಮಶಾನಕ್ಕೂ ಒಟ್ಟಿಗೆ ಹೋಗಬೇಕು ಎಂದು ಅವರು ಮಾತನಾಡಿಕೊಳ್ಳುತ್ತಿದ್ದರು’ ಎಂದು ಸ್ಥಳೀಯರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನುಮಸಾಗರ (ಕೊಪ್ಪಳ ಜಿಲ್ಲೆ): </strong>ಬಾಲ್ಯ ಸ್ನೇಹಿತರಾಗಿದ್ದ ಇಬ್ಬರು ಸಾವಿನಲ್ಲಿಯೂ ಒಂದಾದ ಘಟನೆ ಸಮೀಪದ ಹೂಲಗೇರಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಮರಿಯಪ್ಪ ಕಟ್ಟಿಮನಿ (65)ಮತ್ತು ಬಸಪ್ಪ ಉಂಡಿ (65) ಸಾವಿನಲ್ಲೂ ಒಂದಾದ ಸ್ನೇಹಿತರು.<br /> <br /> ಅನಾರೋಗ್ಯದಿಂದ ಬಳುಲುತ್ತಿದ್ದ ಮರಿಯಪ್ಪ ಅವರನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಅವರ ಪಾರ್ಥಿವ ಶರೀರವನ್ನು ಗ್ರಾಮಕ್ಕೆ ತರಲಾಗಿತ್ತು. ಗೆಳೆಯನ ಶವಕ್ಕೆ ಹಾರ ಹಾಕುವ ಸಂದರ್ಭದಲ್ಲಿ ಬಸಪ್ಪ ಅವರಿಗೆ ಹೃದಯಾಘಾತವಾಗಿ, ಅಲ್ಲಿಯೇ ಕುಸಿದು ಬಿದ್ದರು. ಆಸ್ಪತ್ರೆಗೆ ಸಾಗಿಸುವಾಗ ಅವರು ಮೃತಪಟ್ಟರು.<br /> <br /> ‘ಇಬ್ಬರೂ ಬಾಲ್ಯದಿಂದ ಅಪರೂಪದ ಸ್ನೇಹರಾಗಿದ್ದರು. ತಮ್ಮ ಅಲ್ಪಸ್ವಲ್ಪ ಜಮೀನಿನಲ್ಲಿ ಇಬ್ಬರೂ ಕೃಷಿ ಮಾಡುತ್ತಿದ್ದರು. ಉಳಿದಂತೆ ಇಬ್ಬರೂ ಒಂದೇ ಕಡೆ ಕೂಲಿಗೆ ಹೋಗುತ್ತಿದ್ದರು. ನಾವಿಬ್ಬರೂ ಸ್ಮಶಾನಕ್ಕೂ ಒಟ್ಟಿಗೆ ಹೋಗಬೇಕು ಎಂದು ಅವರು ಮಾತನಾಡಿಕೊಳ್ಳುತ್ತಿದ್ದರು’ ಎಂದು ಸ್ಥಳೀಯರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>