<p><strong>ತುಮಕೂರು</strong>: ಬಾಂಬ್ ಸ್ಫೋಟದಿಂದ ಚೆಲ್ಲಾಪಿಲ್ಲಿಯಾದ ವಿದ್ಯಾರ್ಥಿಗಳು, ಎಲ್ಲೆಂದರಲ್ಲಿ ಬಿದ್ದ ಮೃತದೇಹಗಳು, ಆಂಬುಲೆನ್ಸ್ ವಾಹನಗಳ ಶಬ್ದ, ಅಗ್ನಿ ಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ...<br /> ಹೀಗೊಂದು ಭೀಕರ ಅವಘಡದ ಅಣಕು ಪ್ರದರ್ಶನ ಸಿದ್ದಗಂಗಾ ಮಠದಲ್ಲಿ ಮಂಗಳವಾರ ನಡೆಯಿತು.<br /> <br /> ಜಿಲ್ಲಾ ಗೃಹ ರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಆಯೋಜಿಸಿದ್ದ ‘ರಾಷ್ಟ್ರೀಯ ವಿಪತ್ತು ಕಡಿತಗೊಳಿಸುವ ದಿನಾಚರಣೆ ಮತ್ತು ರ್್ಯಾಲಿ’ ಕಾರ್ಯ-ಕ್ರಮದಲ್ಲಿ ಅವಘಡ ನಿಭಾಯಿಸುವ ಕುರಿತು ವಿದ್ಯಾರ್ಥಿಗಳಿಗೆ ಅಣುಕು ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಯಿತು.<br /> <br /> ಕಟ್ಟಡ ಕುಸಿತದ ವೇಳೆ ಹಗ್ಗದ ಸಹಾಯದಿಂದ ಗಾಯಾಳುಗಳನ್ನು ಕೆಳಗಿಳಿಸುವ ಕುರಿತು ಗೃಹ ರಕ್ಷಕದಳದ ಸಿಬ್ಬಂದಿ ಪ್ರಾತಕ್ಷಿಕೆ ನೀಡಿದರು.<br /> <br /> ಬಾಂಬ್ ಸ್ಫೋಟ ಸಂದರ್ಭದಲ್ಲಿ ಗಾಯಾಳುಗಳ ರಕ್ಷಣೆ, ಪ್ರಥಮ ಚಿಕಿತ್ಸೆ, ಆಸ್ಪತ್ರೆಗೆ ಸಾಗಿಸುವ ಅಣುಕು ಪ್ರದರ್ಶನ ನೀಡಲಾಯಿತು. ಹುಲ್ಲಿನ ಬಣವೆ, ಗೋದಾಮು, ಕಟ್ಟಡಗಳಲ್ಲಿ ರಿವಾಲ್ವಿಂಗ್ ಗೇಟ್, ಜೆಟ್, ಸ್ಪ್ರೇ ಮೂಲಕ ಬೆಂಕಿ ನಂದಿಸುವುದನ್ನು ಪ್ರದರ್ಶಿಸಲಾಯಿತು.<br /> ಸಣ್ಣ ಪ್ರಮಾಣದ ಬೆಂಕಿ ನಂದಿಸಲು ವಿಶೇಷವಾಗಿ ವಿನ್ಯಾಸಗೊಳಿಸಿರುವ ಅಗ್ನಿಶಾಮಕ ಬೈಕ್ ಕಾರ್ಯವೈಖರಿಯನ್ನು ಪ್ರಾತಕ್ಷಿಕೆ ಮೂಲಕ ತೋರಿಸಲಾಯಿತು.<br /> <br /> ಡಾ.ಶಿವಕುಮಾರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಮುಖಂಡರಾದ ಎನ್.ಆರ್.ಜಗದೀಶ್, ಎಂ.ಬಿ.ಕುಮಾರ್, ಕವಿತಾಕೃಷ್ಣ, ಗೃಹರಕ್ಷಕ ದಳದ ಕಮಾಂಡೆಂಟ್ ಕೆ.ರವಿಕುಮಾರ್, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಎಂ.ಶಂಕರ್ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಬಾಂಬ್ ಸ್ಫೋಟದಿಂದ ಚೆಲ್ಲಾಪಿಲ್ಲಿಯಾದ ವಿದ್ಯಾರ್ಥಿಗಳು, ಎಲ್ಲೆಂದರಲ್ಲಿ ಬಿದ್ದ ಮೃತದೇಹಗಳು, ಆಂಬುಲೆನ್ಸ್ ವಾಹನಗಳ ಶಬ್ದ, ಅಗ್ನಿ ಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ...<br /> ಹೀಗೊಂದು ಭೀಕರ ಅವಘಡದ ಅಣಕು ಪ್ರದರ್ಶನ ಸಿದ್ದಗಂಗಾ ಮಠದಲ್ಲಿ ಮಂಗಳವಾರ ನಡೆಯಿತು.<br /> <br /> ಜಿಲ್ಲಾ ಗೃಹ ರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಆಯೋಜಿಸಿದ್ದ ‘ರಾಷ್ಟ್ರೀಯ ವಿಪತ್ತು ಕಡಿತಗೊಳಿಸುವ ದಿನಾಚರಣೆ ಮತ್ತು ರ್್ಯಾಲಿ’ ಕಾರ್ಯ-ಕ್ರಮದಲ್ಲಿ ಅವಘಡ ನಿಭಾಯಿಸುವ ಕುರಿತು ವಿದ್ಯಾರ್ಥಿಗಳಿಗೆ ಅಣುಕು ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಯಿತು.<br /> <br /> ಕಟ್ಟಡ ಕುಸಿತದ ವೇಳೆ ಹಗ್ಗದ ಸಹಾಯದಿಂದ ಗಾಯಾಳುಗಳನ್ನು ಕೆಳಗಿಳಿಸುವ ಕುರಿತು ಗೃಹ ರಕ್ಷಕದಳದ ಸಿಬ್ಬಂದಿ ಪ್ರಾತಕ್ಷಿಕೆ ನೀಡಿದರು.<br /> <br /> ಬಾಂಬ್ ಸ್ಫೋಟ ಸಂದರ್ಭದಲ್ಲಿ ಗಾಯಾಳುಗಳ ರಕ್ಷಣೆ, ಪ್ರಥಮ ಚಿಕಿತ್ಸೆ, ಆಸ್ಪತ್ರೆಗೆ ಸಾಗಿಸುವ ಅಣುಕು ಪ್ರದರ್ಶನ ನೀಡಲಾಯಿತು. ಹುಲ್ಲಿನ ಬಣವೆ, ಗೋದಾಮು, ಕಟ್ಟಡಗಳಲ್ಲಿ ರಿವಾಲ್ವಿಂಗ್ ಗೇಟ್, ಜೆಟ್, ಸ್ಪ್ರೇ ಮೂಲಕ ಬೆಂಕಿ ನಂದಿಸುವುದನ್ನು ಪ್ರದರ್ಶಿಸಲಾಯಿತು.<br /> ಸಣ್ಣ ಪ್ರಮಾಣದ ಬೆಂಕಿ ನಂದಿಸಲು ವಿಶೇಷವಾಗಿ ವಿನ್ಯಾಸಗೊಳಿಸಿರುವ ಅಗ್ನಿಶಾಮಕ ಬೈಕ್ ಕಾರ್ಯವೈಖರಿಯನ್ನು ಪ್ರಾತಕ್ಷಿಕೆ ಮೂಲಕ ತೋರಿಸಲಾಯಿತು.<br /> <br /> ಡಾ.ಶಿವಕುಮಾರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಮುಖಂಡರಾದ ಎನ್.ಆರ್.ಜಗದೀಶ್, ಎಂ.ಬಿ.ಕುಮಾರ್, ಕವಿತಾಕೃಷ್ಣ, ಗೃಹರಕ್ಷಕ ದಳದ ಕಮಾಂಡೆಂಟ್ ಕೆ.ರವಿಕುಮಾರ್, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಎಂ.ಶಂಕರ್ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>