<p>ಮಂಡ್ಯ: ನಗರದ ಅಭಿವೃದ್ಧಿ, ಹೊಸ ಬಡಾವಣೆಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುವ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದವು (ಮುಡಾ) ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಶೇ 50ಕ್ಕೂ ಹೆಚ್ಚು ಮಂಜೂರಾದ ಸಿಬ್ಬಂದಿ ಇಲ್ಲ.<br /> <br /> ಮುಡಾಕ್ಕೆ ಒಟ್ಟು 25 ಮಂದಿ ವಿವಿಧ ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 12 ಹುದ್ದೆಗಳು ಭರ್ತಿಯಾಗಿದ್ದರೆ, 13 ಹುದ್ದೆಗಳು ಖಾಲಿ ಇವೆ.<br /> ಅರ್ಧಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಕೆಲಸದ ಪ್ರಗತಿ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ.<br /> <br /> ಆಯುಕ್ತ, ನಗರ ಯೋಜನಾ ಸದಸ್ಯ, ಸಹಾಯಕ ಎಂಜಿನಿಯರ್್, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ (ಮೂವರು), ವಾಹನ ಚಾಲಕ (ಒಬ್ಬರು), ಅಟೆಂಡರ್್ (ಒಬ್ಬರು) ಹಾಗೂ ಜವಾನ/ ರಾತ್ರಿ ಕಾವಲುಗಾರರಾಗಿ ನಾಲ್ವರು ಇದ್ದಾರೆ.<br /> <br /> ಸಹಾಯಕ ಕಾರ್ಯಪಾಲಕ ಎಂಜಿನಿಯರ್್, ನಗರ ಯೋಜಕ, ಕಾರ್ಯದರ್ಶಿ, ಸಹಾಯಕ ನಗರ ಯೋಜಕರು, ಡ್ರಾಫ್ಟ್ ಮನ್್, ಪ್ರಥಮ ದರ್ಜೆ ಭೂ ಮಾಪಕರು, ರಾಜಸ್ವ ನಿರೀಕ್ಷಕರು, ಶೀಘ್ರಲಿಪಿಗಾರ, ವರ್ಕ್ ಇನ್ಸ್ಪೆಕ್ಟರ್್, ಬೆರಳಚ್ಚುಗಾರ, ವಾಹನ ಚಾಲಕ ಹುದ್ದೆಗಳು ಖಾಲಿ ಇವೆ.<br /> <br /> 1989 ರಲ್ಲಿ ಸಾಹುಕಾರ ಚನ್ನಯ್ಯ ಬಡಾವಣೆ, 1990ರಲ್ಲಿ ಸಾತನೂರು ಬಡಾವಣೆ ಹಾಗೂ 1997ರಲ್ಲಿ ವಿವೇಕಾನಂದನಗರ ಬಡಾವಣೆಗಳನ್ನು ಮುಡಾ ವತಿಯಿಂದ ರಚಿಸಲಾಗಿದೆ. ಸಾಹುಕಾರ ಚನ್ನಯ್ಯ ಬಡಾವಣೆ ಪೂರ್ಣ ಪ್ರಮಾಣದಲ್ಲಿ ಮನೆಗಳಾಗಿವೆ.<br /> <br /> ಸಾತನೂರು ಬಡಾವಣೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಮನೆಗಳಾಗಿವೆ. ವಿವೇಕಾನಂದ ನಗರದಲ್ಲಿಯೂ ಸಾಕಷ್ಟು ನಿವೇಶನಗಳು ಖಾಲಿ ಉಳಿದಿವೆ. ಮೂಲೆ ಹಾಗೂ ಮಧ್ಯಂತರ ನಿವೇಶನಗಳನ್ನೂ ಮುಡಾ ಮಾರಾಟ ಮಾಡಬೇಕಾಗಿದೆ.<br /> <br /> ನಿರ್ವಹಣೆಯ ಕೊರತೆಯಿಂದಾಗಿ ಸಾತನೂರು ಹಾಗೂ ವಿವೇಕಾನಂದನಗರ ಬಡಾವಣೆಗಳಲ್ಲಿ ಜಾಲಿ ಗಿಡಗಳು ಬೆಳೆದು ನಿಂತಿವೆ. ಜಂಗಲ್ ಕಟಿಂಗ್ಗಾಗಿ ಟೆಂಡರ್ ಆಹ್ವಾನಿಸಲಾಗಿತ್ತು. ಈಗಷ್ಟೇ ಕಾಮಗಾರಿ ಆರಂಭವಾಗಿದೆ. ಈ ಹಿಂದೆಯೂ ಒಮ್ಮೆ ಜಂಗಲ್ ಕಟಿಂಗ್ ಮಾಡಿಸಲಾಗಿದೆ.<br /> ಕಳೆದ 17 ವರ್ಷಗಳಿಂದ ಹೊಸ ಬಡಾವಣೆ ಅಸ್ತಿತ್ವಕ್ಕೆ ಬಂದಿಲ್ಲ. ನಿವೇಶನಗಳಿಗಾಗಿ 25 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ಸಾರ್ವಜನಿಕರ ನಿವೇಶನ ಬೇಡಿಕೆ ಈಡೇರುವುದು ಯಾವಾಗ ಎಂಬುದು ಪ್ರಶ್ನೆಯಾಗಿ ಉಳಿದಿದೆ.<br /> <br /> ಲೆಕ್ಕಪತ್ರ ನಿರ್ವಹಣ ಮಾಡುತ್ತಿದ್ದ ನೌಕರ ಇತ್ತೀಚೆಗೆ ಮುಡಾದಲ್ಲಿ ನಡೆದ ಹಣಕಾಸಿನ ಅವ್ಯವಹಾರದಲ್ಲಿ ಅಮಾನತುಗೊಂಡು ಮನೆ ಸೇರಿದ್ದಾರೆ. ಮುಡಾದ ಬಜೆಟ್್ ತಯಾರಿಸಬೇಕಿದ್ದು, ಸೂಕ್ತ ಸಿಬ್ಬಂದಿ ಕೊರತೆಯಿಂದ ಬಜೆಟ್ ತಯಾರಿಕೆ ಸವಾಲಾಗಿ ಕುಳಿತಿದೆ.<br /> <br /> ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎನ್ನುತ್ತಾರೆ ಮುಡಾ ಆಯುಕ್ತ ಕೆ. ಮಥಾಯ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: ನಗರದ ಅಭಿವೃದ್ಧಿ, ಹೊಸ ಬಡಾವಣೆಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುವ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದವು (ಮುಡಾ) ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಶೇ 50ಕ್ಕೂ ಹೆಚ್ಚು ಮಂಜೂರಾದ ಸಿಬ್ಬಂದಿ ಇಲ್ಲ.<br /> <br /> ಮುಡಾಕ್ಕೆ ಒಟ್ಟು 25 ಮಂದಿ ವಿವಿಧ ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 12 ಹುದ್ದೆಗಳು ಭರ್ತಿಯಾಗಿದ್ದರೆ, 13 ಹುದ್ದೆಗಳು ಖಾಲಿ ಇವೆ.<br /> ಅರ್ಧಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಕೆಲಸದ ಪ್ರಗತಿ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ.<br /> <br /> ಆಯುಕ್ತ, ನಗರ ಯೋಜನಾ ಸದಸ್ಯ, ಸಹಾಯಕ ಎಂಜಿನಿಯರ್್, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ (ಮೂವರು), ವಾಹನ ಚಾಲಕ (ಒಬ್ಬರು), ಅಟೆಂಡರ್್ (ಒಬ್ಬರು) ಹಾಗೂ ಜವಾನ/ ರಾತ್ರಿ ಕಾವಲುಗಾರರಾಗಿ ನಾಲ್ವರು ಇದ್ದಾರೆ.<br /> <br /> ಸಹಾಯಕ ಕಾರ್ಯಪಾಲಕ ಎಂಜಿನಿಯರ್್, ನಗರ ಯೋಜಕ, ಕಾರ್ಯದರ್ಶಿ, ಸಹಾಯಕ ನಗರ ಯೋಜಕರು, ಡ್ರಾಫ್ಟ್ ಮನ್್, ಪ್ರಥಮ ದರ್ಜೆ ಭೂ ಮಾಪಕರು, ರಾಜಸ್ವ ನಿರೀಕ್ಷಕರು, ಶೀಘ್ರಲಿಪಿಗಾರ, ವರ್ಕ್ ಇನ್ಸ್ಪೆಕ್ಟರ್್, ಬೆರಳಚ್ಚುಗಾರ, ವಾಹನ ಚಾಲಕ ಹುದ್ದೆಗಳು ಖಾಲಿ ಇವೆ.<br /> <br /> 1989 ರಲ್ಲಿ ಸಾಹುಕಾರ ಚನ್ನಯ್ಯ ಬಡಾವಣೆ, 1990ರಲ್ಲಿ ಸಾತನೂರು ಬಡಾವಣೆ ಹಾಗೂ 1997ರಲ್ಲಿ ವಿವೇಕಾನಂದನಗರ ಬಡಾವಣೆಗಳನ್ನು ಮುಡಾ ವತಿಯಿಂದ ರಚಿಸಲಾಗಿದೆ. ಸಾಹುಕಾರ ಚನ್ನಯ್ಯ ಬಡಾವಣೆ ಪೂರ್ಣ ಪ್ರಮಾಣದಲ್ಲಿ ಮನೆಗಳಾಗಿವೆ.<br /> <br /> ಸಾತನೂರು ಬಡಾವಣೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಮನೆಗಳಾಗಿವೆ. ವಿವೇಕಾನಂದ ನಗರದಲ್ಲಿಯೂ ಸಾಕಷ್ಟು ನಿವೇಶನಗಳು ಖಾಲಿ ಉಳಿದಿವೆ. ಮೂಲೆ ಹಾಗೂ ಮಧ್ಯಂತರ ನಿವೇಶನಗಳನ್ನೂ ಮುಡಾ ಮಾರಾಟ ಮಾಡಬೇಕಾಗಿದೆ.<br /> <br /> ನಿರ್ವಹಣೆಯ ಕೊರತೆಯಿಂದಾಗಿ ಸಾತನೂರು ಹಾಗೂ ವಿವೇಕಾನಂದನಗರ ಬಡಾವಣೆಗಳಲ್ಲಿ ಜಾಲಿ ಗಿಡಗಳು ಬೆಳೆದು ನಿಂತಿವೆ. ಜಂಗಲ್ ಕಟಿಂಗ್ಗಾಗಿ ಟೆಂಡರ್ ಆಹ್ವಾನಿಸಲಾಗಿತ್ತು. ಈಗಷ್ಟೇ ಕಾಮಗಾರಿ ಆರಂಭವಾಗಿದೆ. ಈ ಹಿಂದೆಯೂ ಒಮ್ಮೆ ಜಂಗಲ್ ಕಟಿಂಗ್ ಮಾಡಿಸಲಾಗಿದೆ.<br /> ಕಳೆದ 17 ವರ್ಷಗಳಿಂದ ಹೊಸ ಬಡಾವಣೆ ಅಸ್ತಿತ್ವಕ್ಕೆ ಬಂದಿಲ್ಲ. ನಿವೇಶನಗಳಿಗಾಗಿ 25 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ಸಾರ್ವಜನಿಕರ ನಿವೇಶನ ಬೇಡಿಕೆ ಈಡೇರುವುದು ಯಾವಾಗ ಎಂಬುದು ಪ್ರಶ್ನೆಯಾಗಿ ಉಳಿದಿದೆ.<br /> <br /> ಲೆಕ್ಕಪತ್ರ ನಿರ್ವಹಣ ಮಾಡುತ್ತಿದ್ದ ನೌಕರ ಇತ್ತೀಚೆಗೆ ಮುಡಾದಲ್ಲಿ ನಡೆದ ಹಣಕಾಸಿನ ಅವ್ಯವಹಾರದಲ್ಲಿ ಅಮಾನತುಗೊಂಡು ಮನೆ ಸೇರಿದ್ದಾರೆ. ಮುಡಾದ ಬಜೆಟ್್ ತಯಾರಿಸಬೇಕಿದ್ದು, ಸೂಕ್ತ ಸಿಬ್ಬಂದಿ ಕೊರತೆಯಿಂದ ಬಜೆಟ್ ತಯಾರಿಕೆ ಸವಾಲಾಗಿ ಕುಳಿತಿದೆ.<br /> <br /> ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎನ್ನುತ್ತಾರೆ ಮುಡಾ ಆಯುಕ್ತ ಕೆ. ಮಥಾಯ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>