<p>ಅಕ್ಷಯ ತೃತೀಯದ ಶುಭದಿನದಂದು ರಜಿನಿಕಾಂತ್ ಅವರ ‘ಲಿಂಗ’ ಚಿತ್ರ ಸೆಟ್ಟೇರಿದೆ. ಮೈಸೂರಿನಲ್ಲಿ ನಡೆದ ಚಿತ್ರದ ಮುಹೂರ್ತದಲ್ಲಿ ರಜಿನಿ ಜತೆ ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಪಾಲ್ಗೊಂಡಿದ್ದರು.<br /> <br /> ಐಐಎಫ್–2014 ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಫ್ಲಾರಿಡಾಗೆ ಹೋಗಿದ್ದ ಸೋನಾಕ್ಷಿ ತಮ್ಮ ಮೊದಲ ತಮಿಳು ಚಿತ್ರ ‘ಲಿಂಗ’ ಚಿತ್ರದ ಮುಹೂರ್ತಕ್ಕಾಗಿ ‘ಜೆಟ್ಲ್ಯಾಗ್’ ಅನ್ನು ಬದಿಗೊತ್ತಿ, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ದೌಡಾಯಿಸಿದ ಸುದ್ದಿ ವರದಿಯಾಗಿದೆ. ಇದನ್ನು ಅವರೇ ಟ್ವೀಟ್ ಮಾಡಿದ್ದಾರೆ.<br /> <br /> ‘ಸಿನಿಮಾ ರಂಗದ ಕೆಲವೇ ಮಂದಿಗೆ ರಜಿನಿ ಅವರೊಂದಿಗೆ ನಟಿಸುವ ಅವಕಾಶ ಸಿಗುತ್ತದೆ. ನಾನು ದಕ್ಷಿಣಕ್ಕೆ ಕಾಲಿಡುವುದಾದರೆ ರಜನಿ ಜೊತೆಗೇ ಎಂದು ಕನಸು ಕಂಡಿದ್ದೆ. ಅದು ಈಗ ನೆರವೇರಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.<br /> <br /> ರಾಕ್ಲೈನ್ ಸಿನಿಮಾಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಜಿನಿ ಅವರ ಮೊಮ್ಮಗ ನ(ಧನುಶ್ ಪುತ್ರ) ಹೆಸರನ್ನೇ ಇಡಲಾಗಿದೆಯಂತೆ. ‘ಮುತ್ತು’ ಹಾಗೂ ‘ಪಡಿಯಪ್ಪ’ ದಂಥ ಹಿಟ್ ಚಿತ್ರಗಳನ್ನು ನೀಡಿದ ರವಿಕುಮಾರ್ ಅವರು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಲಿದ್ದಾರೆ. z</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಕ್ಷಯ ತೃತೀಯದ ಶುಭದಿನದಂದು ರಜಿನಿಕಾಂತ್ ಅವರ ‘ಲಿಂಗ’ ಚಿತ್ರ ಸೆಟ್ಟೇರಿದೆ. ಮೈಸೂರಿನಲ್ಲಿ ನಡೆದ ಚಿತ್ರದ ಮುಹೂರ್ತದಲ್ಲಿ ರಜಿನಿ ಜತೆ ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಪಾಲ್ಗೊಂಡಿದ್ದರು.<br /> <br /> ಐಐಎಫ್–2014 ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಫ್ಲಾರಿಡಾಗೆ ಹೋಗಿದ್ದ ಸೋನಾಕ್ಷಿ ತಮ್ಮ ಮೊದಲ ತಮಿಳು ಚಿತ್ರ ‘ಲಿಂಗ’ ಚಿತ್ರದ ಮುಹೂರ್ತಕ್ಕಾಗಿ ‘ಜೆಟ್ಲ್ಯಾಗ್’ ಅನ್ನು ಬದಿಗೊತ್ತಿ, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ದೌಡಾಯಿಸಿದ ಸುದ್ದಿ ವರದಿಯಾಗಿದೆ. ಇದನ್ನು ಅವರೇ ಟ್ವೀಟ್ ಮಾಡಿದ್ದಾರೆ.<br /> <br /> ‘ಸಿನಿಮಾ ರಂಗದ ಕೆಲವೇ ಮಂದಿಗೆ ರಜಿನಿ ಅವರೊಂದಿಗೆ ನಟಿಸುವ ಅವಕಾಶ ಸಿಗುತ್ತದೆ. ನಾನು ದಕ್ಷಿಣಕ್ಕೆ ಕಾಲಿಡುವುದಾದರೆ ರಜನಿ ಜೊತೆಗೇ ಎಂದು ಕನಸು ಕಂಡಿದ್ದೆ. ಅದು ಈಗ ನೆರವೇರಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.<br /> <br /> ರಾಕ್ಲೈನ್ ಸಿನಿಮಾಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಜಿನಿ ಅವರ ಮೊಮ್ಮಗ ನ(ಧನುಶ್ ಪುತ್ರ) ಹೆಸರನ್ನೇ ಇಡಲಾಗಿದೆಯಂತೆ. ‘ಮುತ್ತು’ ಹಾಗೂ ‘ಪಡಿಯಪ್ಪ’ ದಂಥ ಹಿಟ್ ಚಿತ್ರಗಳನ್ನು ನೀಡಿದ ರವಿಕುಮಾರ್ ಅವರು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಲಿದ್ದಾರೆ. z</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>