<p><strong>ಸಾಲಿಗ್ರಾಮ: </strong>ಭೋರ್ಗರೆಯುವ ನೀರಿನ ಅಬ್ಬರವಿಲ್ಲ, ಧುಮ್ಮಿಕುವ ಜಲಧಾರೆಯೂ ಇಲ್ಲ. ನವದಂಪತಿಗಳ ದಂಡು ಇತ್ತ ತಲೆ ಹಾಕುತ್ತಿಲ್ಲ. ಆಷಾಢ ಮಾಸದಲ್ಲಿ ಜನಸಾಗರವೂ ಕಾಣಲಿಲ್ಲ. <br /> <br /> ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ಧನುಷ್ಕೋಟಿ ಮತ್ತು ಸೀತಾಮಡುವಿನಲ್ಲಿ ಈಗ ಕಾಣುತ್ತಿರುವ ಚಿತ್ರಣ. ವರುಣನ ಅವಕೃಪೆಯಿಂದಾಗಿ ಇಲ್ಲಿಯ ಜಲಪಾತದಲ್ಲೆಗ ಸೊಗಸೇ ಇಲ್ಲದಂತಾಗಿದೆ.<br /> ಮುಂಗಾರು ಕೈಕೊಟ್ಟಿರುವುದರಿಂದ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿಲ್ಲ. ಇದರಿಂದ ಚುಂಚನಕಟ್ಟೆ ಗ್ರಾಮದ ಕೋದಂಡ ರಾಮನ ದೇವಾಲಯದ ಪಕ್ಕದಲ್ಲಿ ಇರುವ ಇತಿಹಾಸ ಪ್ರಸಿದ್ಧ ಧನುಷ್ಕೋಟಿ ಮತ್ತು ಸೀತಾಮಡುವಿನಲ್ಲಿ ಧುಮ್ಮಿಕ್ಕುವ ಜಲಪಾತ ಕಾಣುತ್ತಿಲ್ಲ.<br /> <br /> ಕೊಡಗಿನಲ್ಲಿ ಹೆಚ್ಚು ಮಳೆಯಾಗುತ್ತಿದ್ದಂತೆ ಆರ್ಭಟಿಸುತ್ತ ಹರಿದು ಬರುವ ಕಾವೇರಿ ಚುಂಚನಕಟ್ಟೆಯಲ್ಲಿ ಇರುವ ಧನುಷ್ಕೋಟಿ ಮತ್ತು ಸೀತಾಮಡುವಿನಲ್ಲಿ ಥಳುಕು ಬಳುಕಿ ನಿಂದ ಪ್ರತಿದಿನ ಸಾವಿರಾರು ಜನರನ್ನು ಮತ್ತು ಪ್ರವಾಸಿಗರನ್ನು ಸೆಳೆಯುತ್ತಿತ್ತು. ಆದರೆ, ಈ ವರ್ಷ ವರುಣನ ಅವಕೃಪೆಯಿಂದ ಧನುಷ್ಕೋಟಿ ಮತ್ತು ಸೀತಾಮಡು ಹಿಂದಿನ ವೈಭವ ಕಳೆದುಕೊಂಡಿದೆ. ಹಿಂಗಾರಿನಲ್ಲಾದರೂ ವರುಣ ಕೃಪೆ ತೋರಿದರೆ ಮತ್ತೆ ಜಲಪಾತದ ವೈಭವ ಮರುಕಳಿಸಬಹುದು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಲಿಗ್ರಾಮ: </strong>ಭೋರ್ಗರೆಯುವ ನೀರಿನ ಅಬ್ಬರವಿಲ್ಲ, ಧುಮ್ಮಿಕುವ ಜಲಧಾರೆಯೂ ಇಲ್ಲ. ನವದಂಪತಿಗಳ ದಂಡು ಇತ್ತ ತಲೆ ಹಾಕುತ್ತಿಲ್ಲ. ಆಷಾಢ ಮಾಸದಲ್ಲಿ ಜನಸಾಗರವೂ ಕಾಣಲಿಲ್ಲ. <br /> <br /> ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ಧನುಷ್ಕೋಟಿ ಮತ್ತು ಸೀತಾಮಡುವಿನಲ್ಲಿ ಈಗ ಕಾಣುತ್ತಿರುವ ಚಿತ್ರಣ. ವರುಣನ ಅವಕೃಪೆಯಿಂದಾಗಿ ಇಲ್ಲಿಯ ಜಲಪಾತದಲ್ಲೆಗ ಸೊಗಸೇ ಇಲ್ಲದಂತಾಗಿದೆ.<br /> ಮುಂಗಾರು ಕೈಕೊಟ್ಟಿರುವುದರಿಂದ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿಲ್ಲ. ಇದರಿಂದ ಚುಂಚನಕಟ್ಟೆ ಗ್ರಾಮದ ಕೋದಂಡ ರಾಮನ ದೇವಾಲಯದ ಪಕ್ಕದಲ್ಲಿ ಇರುವ ಇತಿಹಾಸ ಪ್ರಸಿದ್ಧ ಧನುಷ್ಕೋಟಿ ಮತ್ತು ಸೀತಾಮಡುವಿನಲ್ಲಿ ಧುಮ್ಮಿಕ್ಕುವ ಜಲಪಾತ ಕಾಣುತ್ತಿಲ್ಲ.<br /> <br /> ಕೊಡಗಿನಲ್ಲಿ ಹೆಚ್ಚು ಮಳೆಯಾಗುತ್ತಿದ್ದಂತೆ ಆರ್ಭಟಿಸುತ್ತ ಹರಿದು ಬರುವ ಕಾವೇರಿ ಚುಂಚನಕಟ್ಟೆಯಲ್ಲಿ ಇರುವ ಧನುಷ್ಕೋಟಿ ಮತ್ತು ಸೀತಾಮಡುವಿನಲ್ಲಿ ಥಳುಕು ಬಳುಕಿ ನಿಂದ ಪ್ರತಿದಿನ ಸಾವಿರಾರು ಜನರನ್ನು ಮತ್ತು ಪ್ರವಾಸಿಗರನ್ನು ಸೆಳೆಯುತ್ತಿತ್ತು. ಆದರೆ, ಈ ವರ್ಷ ವರುಣನ ಅವಕೃಪೆಯಿಂದ ಧನುಷ್ಕೋಟಿ ಮತ್ತು ಸೀತಾಮಡು ಹಿಂದಿನ ವೈಭವ ಕಳೆದುಕೊಂಡಿದೆ. ಹಿಂಗಾರಿನಲ್ಲಾದರೂ ವರುಣ ಕೃಪೆ ತೋರಿದರೆ ಮತ್ತೆ ಜಲಪಾತದ ವೈಭವ ಮರುಕಳಿಸಬಹುದು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>