<p><strong>ಸಿಆರ್ಪಿಎಫ್ ವಸತಿ ಗೃಹ:ಕೇಂದ್ರದ ನೆರವು<br /> ನವದೆಹಲಿ (ಪಿಟಿಐ): </strong>ಅರೆ ಸೇನಾ ಪಡೆಯ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ ಹಾಗೂ ಗಡಿಯಲ್ಲಿರುವ ಕಾವಲು ಚೌಕಿಗಳನ್ನು ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರ ಹತ್ತು ಸಾವಿರ ಕೋಟಿ ರೂಪಾಯಿ ನೀಡಿದೆ ಎಂದು ಕೇಂದ್ರ ಗೃಹ ರಾಜ್ಯ ಸಚಿವ ಜೀತೆಂದ್ರ ಸಿಂಗ್ ಹೇಳಿದ್ದಾರೆ.<br /> <br /> ಸೋಮವಾರ ಸಿಆರ್ಪಿಎಫ್ ಆಯೋಜಿಸಿದ್ದ ಶೌರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಅವರು ಈ ವಿಷಯ ಪ್ರಕಟಿಸಿದ್ದಾರೆ. ವಸತಿ ಗೃಹಗಳ ನಿರ್ಮಾಣ ಹಾಗೂ ಗಡಿ ಕಾವಲು ಚೌಕಿಗಳ ಪುನರ್ನವೀಕರಣಕ್ಕೆ ಈ ಹಣವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. <br /> <br /> ನಕ್ಸಲ್ ನಿಗ್ರಹ ಪಡೆ, ಜಮ್ಮು-ಕಾಶ್ಮೀರ ಹಾಗೂ ಈಶಾನ್ಯ ಭಾಗಗಳಲ್ಲಿ ಬಂಡುಕೋರರ ವಿರುದ್ಧ ಹೋರಾಡಿದ ಸಿಆರ್ಪಿಎಫ್ನ 84 ಯೋಧರಿಗೆ (13 ಮರಣೋತ್ತರ) ಶೌರ್ಯ ಪ್ರಶಸ್ತಿಯನ್ನು ಸಚಿವರು ಪ್ರದಾನ ಮಾಡಿದರು.<br /> ಮುಂದಿನ ದಿನಗಳಲ್ಲಿ ಸಿಆರ್ಪಿಎಫ್ ಮತ್ತಷ್ಟು ಬಲಗೊಳ್ಳಬೇಕು ಎಂದು ಸಿಆರ್ಪಿಎಫ್ ಮುಖ್ಯಸ್ಥ ಕೆ.ವಿಜಯ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.<br /> <br /> <strong>ಕಳಪೆ ಆಹಾರ ಧಾನ್ಯ<br /> ಶಿಮ್ಲಾ (ಐಎಎನ್ಎಸ್): </strong> ಹಿಮಾಚಲ ಪ್ರದೇಶದಲ್ಲಿ 2006ರಿಂದ 2011ರ ಅವಧಿಯಲ್ಲಿ 2,066 ಟನ್ಗಳಷ್ಟು ಕಳಪೆ ಗುಣಮಟ್ಟದ ಬೆಳೆಕಾಳುಗಳು ಮತ್ತು 1,167 ಟನ್ ಆಹಾರಧಾನ್ಯಗಳನ್ನು ಪಡಿತರ ವ್ಯವಸ್ಥೆ ಮೂಲಕ ವಿತರಿಸಲಾಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.<br /> <br /> <strong>ದುಂದು ವೆಚ್ಚ<br /> ಪಟ್ನಾ(ಪಿಟಿಐ): </strong>ಬಿಹಾರದ ಪಶು ಸಂಗೋಪನ ಮತ್ತು ಮೀನುಗಾರಿಕೆ ಸಂಪನ್ಮೂಲ ಇಲಾಖೆಯು 19.1 ಕೋಟಿ ರೂಪಾಯಿಯಷ್ಟು ದುಂದುವೆಚ್ಚ ಮಾಡಿದೆ ಎಂದು ಮಹಾಲೇಖಾಪಾಲರು (ಸಿಎಜಿ) ವರದಿ ತಿಳಿಸಿದೆ. <br /> ಇಲಾಖೆಯ ಅಧೀನದಲ್ಲಿರುವ ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಂಸ್ಥೆಗಳ ಸಿಬ್ಬಂದಿಗೆ ವೇತನ, ಭತ್ಯೆ ಇತ್ಯಾದಿ ನೀಡಲು ಈ ಹಣ ವ್ಯಯಿಸಲಾಗಿದೆ ಎಂದು ವರದಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಆರ್ಪಿಎಫ್ ವಸತಿ ಗೃಹ:ಕೇಂದ್ರದ ನೆರವು<br /> ನವದೆಹಲಿ (ಪಿಟಿಐ): </strong>ಅರೆ ಸೇನಾ ಪಡೆಯ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ ಹಾಗೂ ಗಡಿಯಲ್ಲಿರುವ ಕಾವಲು ಚೌಕಿಗಳನ್ನು ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರ ಹತ್ತು ಸಾವಿರ ಕೋಟಿ ರೂಪಾಯಿ ನೀಡಿದೆ ಎಂದು ಕೇಂದ್ರ ಗೃಹ ರಾಜ್ಯ ಸಚಿವ ಜೀತೆಂದ್ರ ಸಿಂಗ್ ಹೇಳಿದ್ದಾರೆ.<br /> <br /> ಸೋಮವಾರ ಸಿಆರ್ಪಿಎಫ್ ಆಯೋಜಿಸಿದ್ದ ಶೌರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಅವರು ಈ ವಿಷಯ ಪ್ರಕಟಿಸಿದ್ದಾರೆ. ವಸತಿ ಗೃಹಗಳ ನಿರ್ಮಾಣ ಹಾಗೂ ಗಡಿ ಕಾವಲು ಚೌಕಿಗಳ ಪುನರ್ನವೀಕರಣಕ್ಕೆ ಈ ಹಣವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. <br /> <br /> ನಕ್ಸಲ್ ನಿಗ್ರಹ ಪಡೆ, ಜಮ್ಮು-ಕಾಶ್ಮೀರ ಹಾಗೂ ಈಶಾನ್ಯ ಭಾಗಗಳಲ್ಲಿ ಬಂಡುಕೋರರ ವಿರುದ್ಧ ಹೋರಾಡಿದ ಸಿಆರ್ಪಿಎಫ್ನ 84 ಯೋಧರಿಗೆ (13 ಮರಣೋತ್ತರ) ಶೌರ್ಯ ಪ್ರಶಸ್ತಿಯನ್ನು ಸಚಿವರು ಪ್ರದಾನ ಮಾಡಿದರು.<br /> ಮುಂದಿನ ದಿನಗಳಲ್ಲಿ ಸಿಆರ್ಪಿಎಫ್ ಮತ್ತಷ್ಟು ಬಲಗೊಳ್ಳಬೇಕು ಎಂದು ಸಿಆರ್ಪಿಎಫ್ ಮುಖ್ಯಸ್ಥ ಕೆ.ವಿಜಯ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.<br /> <br /> <strong>ಕಳಪೆ ಆಹಾರ ಧಾನ್ಯ<br /> ಶಿಮ್ಲಾ (ಐಎಎನ್ಎಸ್): </strong> ಹಿಮಾಚಲ ಪ್ರದೇಶದಲ್ಲಿ 2006ರಿಂದ 2011ರ ಅವಧಿಯಲ್ಲಿ 2,066 ಟನ್ಗಳಷ್ಟು ಕಳಪೆ ಗುಣಮಟ್ಟದ ಬೆಳೆಕಾಳುಗಳು ಮತ್ತು 1,167 ಟನ್ ಆಹಾರಧಾನ್ಯಗಳನ್ನು ಪಡಿತರ ವ್ಯವಸ್ಥೆ ಮೂಲಕ ವಿತರಿಸಲಾಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.<br /> <br /> <strong>ದುಂದು ವೆಚ್ಚ<br /> ಪಟ್ನಾ(ಪಿಟಿಐ): </strong>ಬಿಹಾರದ ಪಶು ಸಂಗೋಪನ ಮತ್ತು ಮೀನುಗಾರಿಕೆ ಸಂಪನ್ಮೂಲ ಇಲಾಖೆಯು 19.1 ಕೋಟಿ ರೂಪಾಯಿಯಷ್ಟು ದುಂದುವೆಚ್ಚ ಮಾಡಿದೆ ಎಂದು ಮಹಾಲೇಖಾಪಾಲರು (ಸಿಎಜಿ) ವರದಿ ತಿಳಿಸಿದೆ. <br /> ಇಲಾಖೆಯ ಅಧೀನದಲ್ಲಿರುವ ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಂಸ್ಥೆಗಳ ಸಿಬ್ಬಂದಿಗೆ ವೇತನ, ಭತ್ಯೆ ಇತ್ಯಾದಿ ನೀಡಲು ಈ ಹಣ ವ್ಯಯಿಸಲಾಗಿದೆ ಎಂದು ವರದಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>