<p>ಸ್ವಾನಂದಾಶ್ರಮ: ಭಾನುವಾರ ಗಣೇಶನ ವೈಶಿಷ್ಟ್ಯಗಳ ಪ್ರದರ್ಶನ, ವಿವಿಧ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಚಟುವಟಿಕೆಗಳ `ಸ್ವಾನಂದ ಕಲಾ ಮಹೋತ್ಸವ~. ನೃತ್ಯಪಟು ಮೀನಲ್ ಪ್ರಭು ಅವರಿಗೆ `ಸ್ವಾನಂದ ಕಲಾಶ್ರೀ ಪ್ರಶಸ್ತಿ~ ಮತ್ತು ಚಿತ್ರ, ನೃತ್ಯ, ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ಪ್ರದಾನ.<br /> <br /> ಉದ್ಯಮಿ ಶ್ರೀಹರಿ ಖೋಡೆ ಅವರಿಂದ ಉದ್ಘಾಟನೆ. ಎಂಬೆಸಿ ಗ್ರೂಪ್ ಅಧ್ಯಕ್ಷ ಜೀತು ವಿರ್ವಾನಿ ಅವರಿಂದ ಗುರುರಾಜ ಪೋಶೆಟ್ಟಿಹಳ್ಳಿ ಸಂಪಾದಕತ್ವದ `ಸ್ವಾನಂದ~ ವಿಶೇಷಾಂಕ ಹಾಗೂ `ಗಣೇಶ ಮಾನಸ ಪೂಜಾ~ ಕೃತಿ ಲೋಕಾರ್ಪಣೆ. ಅತಿಥಿಗಳು: ಎ.ಟಿ.ಗೋಪಿನಾಥ್, ಕೆ. ಪ್ರವೀಣ್ರೆಡ್ಡಿ, ರತನ್.ಬಿ ಲತ್ ಮತ್ತು ತೇಜ್ರಾಜ್ ಗುಲೇಚ. ಅಧ್ಯಕ್ಷತೆ: ಎಸ್. ಷಡಕ್ಷರಿ.<br /> <br /> ಕನಕಪುರ ರಸ್ತೆಯ ತಾತಗುಣಿ ಅಗರದಲ್ಲಿನ ಸ್ವಾನಂದಾಶ್ರಮ ಗಣೇಶೋಪಾಸನೆಯ ಕೇಂದ್ರ. ಶಿರಸಿ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಹಲವಾರು ಆಧ್ಯಾತ್ಮಿಕ, ಸಾಮಾಜಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ. <br /> <br /> ಇಲ್ಲಿ ಪಾರಂಪರಿಕ ಹೊಯ್ಸಳ ಶೈಲಿಯ ಮಹಾಗಣಪತಿ ಪಂಚಾಯತನ ದೇಗುಲವಿದೆ. ಹೊಯ್ಸಳ ಶಿಲ್ಪಕಲೆಯ ಪುನರುತ್ಥಾನ, ಶತಮಾನಗಳ ಹಿಂದೆ ಮೂಡಿದ ಕರ್ನಾಟಕದ ಅದ್ಭುತ ಕಲಾ ವೈಭವದ ಮಾದರಿಯನ್ನು ಭಕ್ತರ ಸಹಕಾರದೊಡನೆ ಪುನರುಜ್ಜೀವನಗೊಳಿಸುವುದು ಆಶ್ರಮದ ಉದ್ದೇಶ.<br /> <br /> ಭಕ್ತಾದಿಗಳು ತಮ್ಮ ಮನೆಯಲ್ಲಿ ಪೂಜಿಸಿದ ಗಣೇಶ ವಿಗ್ರಹಗಳನ್ನು ಆಶ್ರಮದ ಆವರಣದಲ್ಲಿರುವ ಜಲಾಗಾರದಲ್ಲಿ ವಿಸರ್ಜನೆ ಮಾಡುವ ವ್ಯವಸ್ಥೆಯೂ ಇದೆ.<br /> ಸ್ಥಳ:12, ಅಗರ, ತಾತಗುಣಿ, ಕನಕಪುರ ರಸ್ತೆ. ಬೆಳಿಗ್ಗೆ 10 (ಕಲಾಸಿಪಾಳ್ಯದಿಂದ ಬಿಎಂಟಿಸಿ ಬಸ್ ಸಂಖ್ಯೆ 212). ಮಾಹಿತಿಗೆ: 2843 5853, 99800 21006.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸ್ವಾನಂದಾಶ್ರಮ: ಭಾನುವಾರ ಗಣೇಶನ ವೈಶಿಷ್ಟ್ಯಗಳ ಪ್ರದರ್ಶನ, ವಿವಿಧ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಚಟುವಟಿಕೆಗಳ `ಸ್ವಾನಂದ ಕಲಾ ಮಹೋತ್ಸವ~. ನೃತ್ಯಪಟು ಮೀನಲ್ ಪ್ರಭು ಅವರಿಗೆ `ಸ್ವಾನಂದ ಕಲಾಶ್ರೀ ಪ್ರಶಸ್ತಿ~ ಮತ್ತು ಚಿತ್ರ, ನೃತ್ಯ, ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ಪ್ರದಾನ.<br /> <br /> ಉದ್ಯಮಿ ಶ್ರೀಹರಿ ಖೋಡೆ ಅವರಿಂದ ಉದ್ಘಾಟನೆ. ಎಂಬೆಸಿ ಗ್ರೂಪ್ ಅಧ್ಯಕ್ಷ ಜೀತು ವಿರ್ವಾನಿ ಅವರಿಂದ ಗುರುರಾಜ ಪೋಶೆಟ್ಟಿಹಳ್ಳಿ ಸಂಪಾದಕತ್ವದ `ಸ್ವಾನಂದ~ ವಿಶೇಷಾಂಕ ಹಾಗೂ `ಗಣೇಶ ಮಾನಸ ಪೂಜಾ~ ಕೃತಿ ಲೋಕಾರ್ಪಣೆ. ಅತಿಥಿಗಳು: ಎ.ಟಿ.ಗೋಪಿನಾಥ್, ಕೆ. ಪ್ರವೀಣ್ರೆಡ್ಡಿ, ರತನ್.ಬಿ ಲತ್ ಮತ್ತು ತೇಜ್ರಾಜ್ ಗುಲೇಚ. ಅಧ್ಯಕ್ಷತೆ: ಎಸ್. ಷಡಕ್ಷರಿ.<br /> <br /> ಕನಕಪುರ ರಸ್ತೆಯ ತಾತಗುಣಿ ಅಗರದಲ್ಲಿನ ಸ್ವಾನಂದಾಶ್ರಮ ಗಣೇಶೋಪಾಸನೆಯ ಕೇಂದ್ರ. ಶಿರಸಿ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಹಲವಾರು ಆಧ್ಯಾತ್ಮಿಕ, ಸಾಮಾಜಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ. <br /> <br /> ಇಲ್ಲಿ ಪಾರಂಪರಿಕ ಹೊಯ್ಸಳ ಶೈಲಿಯ ಮಹಾಗಣಪತಿ ಪಂಚಾಯತನ ದೇಗುಲವಿದೆ. ಹೊಯ್ಸಳ ಶಿಲ್ಪಕಲೆಯ ಪುನರುತ್ಥಾನ, ಶತಮಾನಗಳ ಹಿಂದೆ ಮೂಡಿದ ಕರ್ನಾಟಕದ ಅದ್ಭುತ ಕಲಾ ವೈಭವದ ಮಾದರಿಯನ್ನು ಭಕ್ತರ ಸಹಕಾರದೊಡನೆ ಪುನರುಜ್ಜೀವನಗೊಳಿಸುವುದು ಆಶ್ರಮದ ಉದ್ದೇಶ.<br /> <br /> ಭಕ್ತಾದಿಗಳು ತಮ್ಮ ಮನೆಯಲ್ಲಿ ಪೂಜಿಸಿದ ಗಣೇಶ ವಿಗ್ರಹಗಳನ್ನು ಆಶ್ರಮದ ಆವರಣದಲ್ಲಿರುವ ಜಲಾಗಾರದಲ್ಲಿ ವಿಸರ್ಜನೆ ಮಾಡುವ ವ್ಯವಸ್ಥೆಯೂ ಇದೆ.<br /> ಸ್ಥಳ:12, ಅಗರ, ತಾತಗುಣಿ, ಕನಕಪುರ ರಸ್ತೆ. ಬೆಳಿಗ್ಗೆ 10 (ಕಲಾಸಿಪಾಳ್ಯದಿಂದ ಬಿಎಂಟಿಸಿ ಬಸ್ ಸಂಖ್ಯೆ 212). ಮಾಹಿತಿಗೆ: 2843 5853, 99800 21006.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>