<p>ಹಂಪಿಯ ವಿರೂಪಾಕ್ಷ ದೇವಾಲಯದ ಮುಂಭಾಗದಿಂದ ಮಾತಂಗ ಪರ್ವತದ ಬುಡದ ಎದುರು ಬಸವನ ವಿಗ್ರಹದವರೆಗಿನ ರಥಬೀದಿಯ ಅಕ್ಕಪಕ್ಕದ ಮಂಟಪಗಳಲ್ಲಿ ಅಕ್ರಮ ಕಟ್ಟಡಗಳನ್ನು ಕಟ್ಟಿಕೊಂಡು ವಾಸವಾಗಿರುವವರನ್ನು ತೆರವುಗೊಳಿಸುವ ಕೆಲಸ ಆರಂಭವಾಗಿರುವುದು ಬಹು ಶ್ಲಾಘನೀಯವಾದುದು. <br /> <br /> ಆ ಕಟ್ಟಡಗಳಲ್ಲಿ ಮತ್ತು ಹಿಂಭಾಗದ ಮನೆಗಳಲ್ಲಿ ಅನೇಕ ಬಗೆಯ ಅಕ್ರಮಗಳು ನಡೆಯುತ್ತಿದ್ದುವು-ಅಲ್ಲಿ ಕಾಫಿ ಟೀ ದೋಸೆ ಸಿಗರೇಟು ಮಾತ್ರವಲ್ಲದೆ ಮಾದಕ ದ್ರವ್ಯಗಳ ಜೊತೆ ಮಾಂಸಾಹಾರ ಲಭ್ಯವಿತ್ತು. ಅಶ್ಲೀಲ ಕೃತ್ಯಗಳೂ ಅಲ್ಲಿ ನಡೆಯುತ್ತಿದ್ದುವು. <br /> <br /> ಹಂಪಿ ಬರೀ ಪ್ರವಾಸಿ ಕೇಂದ್ರವಲ್ಲ ಅದು ಇಡೀ ಭಾರತೀಯರ ಪವಿತ್ರ ಯಾತ್ರಾ ಕ್ಷೇತ್ರ. ಈಗ ಹಂಪಿ ಅಭಿವೃದ್ಧಿ ಪ್ರಾಧಿಕಾರವು ಅದನ್ನು ಗಮನದಲ್ಲಿಟ್ಟುಕೊಂಡು ಇರುವ ಮಂಟಪಗಳನ್ನು ಹಾಗೇ ಉಳಿಸಿ ಅವುಗಳ ಒಳಗೆ ಅಥವಾ ಪಕ್ಕಗಳಲ್ಲಿ ಕಟ್ಟಿಕೊಂಡಿದ್ದ ಮನೆಗಳನ್ನು ಧ್ವಂಸಗೊಳಿಸುತ್ತಿದೆ.<br /> <br /> ಈ ಕಾರ್ಯ ಮುಂದುವರಿದು ಕ್ರಮೇಣ ಹಂಪಿಯಲ್ಲಿನ ಪವಿತ್ರ ವಾತಾವರಣವನ್ನು ಉಳಿಸುವ ಕೆಲಸ ಸಾಗಬೇಕು. ಮಹಾರಾಷ್ಟ್ರ ಸರ್ಕಾರವು ಪ್ರಸಿದ್ಧ ಪ್ರವಾಸಿ ಕೇಂದ್ರಗಳಾದ ಎಲ್ಲೋರ ಅಜಂತಗಳನ್ನು ಸಂರಕ್ಷಿಸಿರುವ ರೀತಿ ನಮಗೆ ಮಾದರಿಯಾಗಬೇಕು.<br /> <br /> ಅಷ್ಟೇ ಮುಖ್ಯವಾದುದು ರಥ ಬೀದಿಯಿಂದ ಒಕ್ಕಲೆಬ್ಬಿಸುತ್ತಿರುವ ನಿವಾಸಿಗಳಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರವು ಸೂಕ್ತ ಕಡೆ ಜಾಗ ನೀಡಿ, ಮನೆ ಕಟ್ಟಿಸಿಕೊಟ್ಟು ಅವರ ಜೀವನ ಹಾಳಾಗದಂತೆ ಏನು ಸಹಾಯ ಮಾಡಬೇಕೋ ಅದನ್ನು ಮಾಡಬೇಕು. <br /> <br /> ಅವರು ನಿರಾಶ್ರಿತರಾಗಿ ಕಷ್ಟದಿಂದ ಜೀವನ ಸಾಗಿಸುವಂತಾದರೆ ಅದು ಒಂದು ಅಕ್ಷಮ್ಯ ಅಪರಾಧವಾಗುತ್ತದೆ. ಈ ಕಡೆಗೂ ಸರ್ಕಾರ, ಹಂಪಿ ಅಭಿವೃದ್ಧಿ ಪ್ರಾಧಿಕಾರವು ತೀವ್ರ ಗಮನಹರಿಸುತ್ತಿದೆಯೆಂದು ನಾನು ಕೇಳಿದ್ದೇನೆ. ಅದು ನಿಜವಾಗಿರಲಿ ಎಂದು ಹಾರೈಸುತ್ತೇನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಂಪಿಯ ವಿರೂಪಾಕ್ಷ ದೇವಾಲಯದ ಮುಂಭಾಗದಿಂದ ಮಾತಂಗ ಪರ್ವತದ ಬುಡದ ಎದುರು ಬಸವನ ವಿಗ್ರಹದವರೆಗಿನ ರಥಬೀದಿಯ ಅಕ್ಕಪಕ್ಕದ ಮಂಟಪಗಳಲ್ಲಿ ಅಕ್ರಮ ಕಟ್ಟಡಗಳನ್ನು ಕಟ್ಟಿಕೊಂಡು ವಾಸವಾಗಿರುವವರನ್ನು ತೆರವುಗೊಳಿಸುವ ಕೆಲಸ ಆರಂಭವಾಗಿರುವುದು ಬಹು ಶ್ಲಾಘನೀಯವಾದುದು. <br /> <br /> ಆ ಕಟ್ಟಡಗಳಲ್ಲಿ ಮತ್ತು ಹಿಂಭಾಗದ ಮನೆಗಳಲ್ಲಿ ಅನೇಕ ಬಗೆಯ ಅಕ್ರಮಗಳು ನಡೆಯುತ್ತಿದ್ದುವು-ಅಲ್ಲಿ ಕಾಫಿ ಟೀ ದೋಸೆ ಸಿಗರೇಟು ಮಾತ್ರವಲ್ಲದೆ ಮಾದಕ ದ್ರವ್ಯಗಳ ಜೊತೆ ಮಾಂಸಾಹಾರ ಲಭ್ಯವಿತ್ತು. ಅಶ್ಲೀಲ ಕೃತ್ಯಗಳೂ ಅಲ್ಲಿ ನಡೆಯುತ್ತಿದ್ದುವು. <br /> <br /> ಹಂಪಿ ಬರೀ ಪ್ರವಾಸಿ ಕೇಂದ್ರವಲ್ಲ ಅದು ಇಡೀ ಭಾರತೀಯರ ಪವಿತ್ರ ಯಾತ್ರಾ ಕ್ಷೇತ್ರ. ಈಗ ಹಂಪಿ ಅಭಿವೃದ್ಧಿ ಪ್ರಾಧಿಕಾರವು ಅದನ್ನು ಗಮನದಲ್ಲಿಟ್ಟುಕೊಂಡು ಇರುವ ಮಂಟಪಗಳನ್ನು ಹಾಗೇ ಉಳಿಸಿ ಅವುಗಳ ಒಳಗೆ ಅಥವಾ ಪಕ್ಕಗಳಲ್ಲಿ ಕಟ್ಟಿಕೊಂಡಿದ್ದ ಮನೆಗಳನ್ನು ಧ್ವಂಸಗೊಳಿಸುತ್ತಿದೆ.<br /> <br /> ಈ ಕಾರ್ಯ ಮುಂದುವರಿದು ಕ್ರಮೇಣ ಹಂಪಿಯಲ್ಲಿನ ಪವಿತ್ರ ವಾತಾವರಣವನ್ನು ಉಳಿಸುವ ಕೆಲಸ ಸಾಗಬೇಕು. ಮಹಾರಾಷ್ಟ್ರ ಸರ್ಕಾರವು ಪ್ರಸಿದ್ಧ ಪ್ರವಾಸಿ ಕೇಂದ್ರಗಳಾದ ಎಲ್ಲೋರ ಅಜಂತಗಳನ್ನು ಸಂರಕ್ಷಿಸಿರುವ ರೀತಿ ನಮಗೆ ಮಾದರಿಯಾಗಬೇಕು.<br /> <br /> ಅಷ್ಟೇ ಮುಖ್ಯವಾದುದು ರಥ ಬೀದಿಯಿಂದ ಒಕ್ಕಲೆಬ್ಬಿಸುತ್ತಿರುವ ನಿವಾಸಿಗಳಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರವು ಸೂಕ್ತ ಕಡೆ ಜಾಗ ನೀಡಿ, ಮನೆ ಕಟ್ಟಿಸಿಕೊಟ್ಟು ಅವರ ಜೀವನ ಹಾಳಾಗದಂತೆ ಏನು ಸಹಾಯ ಮಾಡಬೇಕೋ ಅದನ್ನು ಮಾಡಬೇಕು. <br /> <br /> ಅವರು ನಿರಾಶ್ರಿತರಾಗಿ ಕಷ್ಟದಿಂದ ಜೀವನ ಸಾಗಿಸುವಂತಾದರೆ ಅದು ಒಂದು ಅಕ್ಷಮ್ಯ ಅಪರಾಧವಾಗುತ್ತದೆ. ಈ ಕಡೆಗೂ ಸರ್ಕಾರ, ಹಂಪಿ ಅಭಿವೃದ್ಧಿ ಪ್ರಾಧಿಕಾರವು ತೀವ್ರ ಗಮನಹರಿಸುತ್ತಿದೆಯೆಂದು ನಾನು ಕೇಳಿದ್ದೇನೆ. ಅದು ನಿಜವಾಗಿರಲಿ ಎಂದು ಹಾರೈಸುತ್ತೇನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>