<p>ರೋಮ್ (ಐಎಎನ್ಎಸ್): ಇಲ್ಲಿನ ಗಿಗ್ಲಿಯೊ ದ್ವೀಪದ ಬಳಿ `ಕೋಸ್ಟಾ ಕಾನ್ಕಾರ್ಡಿಯಾ~ ಹಡಗು ದುರಂತಕ್ಕೀಡಾದ ಸಂದರ್ಭದಲ್ಲಿ ಪ್ರಯಾಣಿಕರ ಜೀವ ಉಳಿಸಬೇಕಾಗಿದ್ದ ಕ್ಯಾಪ್ಟನ್, ಎಲ್ಲರಿಗಿಂತ ಮೊದಲು ಜೀವರಕ್ಷಕ ದೋಣಿಯಲ್ಲಿ ತೆರಳಿದ್ದರು ಎಂಬ ವಿಷಯ ಇದೀಗ ದೃಢಪಟ್ಟಿದೆ.<br /> <br /> ಬಂದರು ಅಧಿಕಾರಿಗಳು ಮತ್ತು ಕ್ಯಾಪ್ಟನ್ ನಡುವೆ ನಡೆದ ಸಂಭಾಷಣೆಯಲ್ಲಿ ಈ ವಿಷಯ ಸ್ಪಷ್ಟವಾಗಿದ್ದು, ದುರಂತ ಸಂಭವಿಸಿದ ಬಳಿಕ ನಡೆದ ಈ ಸಂಭಾಷಣೆಯ ವಿವರವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಲಾಗಿದೆ. <br /> ಕ್ಯಾಪ್ಟನ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.<br /> <br /> `ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸುವಂತೆ ಸ್ಥಳೀಯ ಅಧಿಕಾರಿಗಳು ಮಾಡಿದ ಕೋರಿಕೆಯನ್ನು ಕ್ಯಾಪ್ಟನ್ ಫ್ರಾನ್ಸೆಸ್ಕೊ ಶೆಟ್ಟಿನೊ ನಿರ್ಲಕ್ಷಿಸಿದ್ದರು. ನೀವು ಹಡಗಿಗೆ ಹಿಂತಿರುಗಿ ಎಷ್ಟು ಮಂದಿ ಪ್ರಯಾಣಿಕರು ಇದ್ದಾರೆ ಎಂಬ ಮಾಹಿತಿಯನ್ನು ಕೂಡಲೇ ನೀಡಲೇಬೇಕು. ಇದು ನಮ್ಮ ಆದೇಶ ಎಂದು ಹೇಳಿದ್ದರೂ ಅದಕ್ಕೆ ಅವರು ಕಿವಿಗೊಡಲಿಲ್ಲ~ ಎಂದು ಬಂದರು ಅಧಿಕಾರಿ ಡಿ ಫಾಲ್ಕೊ ದೂರಿದ್ದಾರೆ.<br /> </p>.<p>`ಪ್ರಯಾಣಿಕರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರಿದ್ದಾರೆ, ನನಗೆ ಜೀವರಕ್ಷಕ ದೋಣಿಯಲ್ಲಿ ಸಾಗದೇ ಬೇರೆ ಮಾರ್ಗವಿಲ್ಲ. ಜತೆಗೆ ಈಗಾಗಲೇ ಕತ್ತಲೆ ಆವರಿಸಿದೆ~ ಎಂದು ಕ್ಯಾಪ್ಟನ್ ಉತ್ತರಿಸಿದರು ಎಂದು ಫಾಲ್ಕೊ ತಿಳಿಸಿದ್ದಾರೆ.<br /> <br /> ಗೃಹ ಬಂಧನ: ಶೆಟ್ಟಿನೊ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಹತ್ಯೆ ಮತ್ತು ಜವಾಬ್ದಾರಿಯಿಂದ ನುಣುಚಿಕೊಂಡ ಆರೋಪದ ಮೇರೆಗೆ ಅವರು ಹಲವು ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬರಬಹುದು ಎಂದು ಹೇಳಲಾಗಿದೆ.<br /> <br /> ಈ ಮಧ್ಯೆ, ರಕ್ಷಣಾ ಕಾರ್ಯಕರ್ತರು ಮಂಗಳವಾರ ಇನ್ನೂ ಐದು ಶವಗಳನ್ನು ಪತ್ತೆಹಚ್ಚುವುದರೊಂದಿಗೆ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 11ಕ್ಕೆ ಏರಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರೋಮ್ (ಐಎಎನ್ಎಸ್): ಇಲ್ಲಿನ ಗಿಗ್ಲಿಯೊ ದ್ವೀಪದ ಬಳಿ `ಕೋಸ್ಟಾ ಕಾನ್ಕಾರ್ಡಿಯಾ~ ಹಡಗು ದುರಂತಕ್ಕೀಡಾದ ಸಂದರ್ಭದಲ್ಲಿ ಪ್ರಯಾಣಿಕರ ಜೀವ ಉಳಿಸಬೇಕಾಗಿದ್ದ ಕ್ಯಾಪ್ಟನ್, ಎಲ್ಲರಿಗಿಂತ ಮೊದಲು ಜೀವರಕ್ಷಕ ದೋಣಿಯಲ್ಲಿ ತೆರಳಿದ್ದರು ಎಂಬ ವಿಷಯ ಇದೀಗ ದೃಢಪಟ್ಟಿದೆ.<br /> <br /> ಬಂದರು ಅಧಿಕಾರಿಗಳು ಮತ್ತು ಕ್ಯಾಪ್ಟನ್ ನಡುವೆ ನಡೆದ ಸಂಭಾಷಣೆಯಲ್ಲಿ ಈ ವಿಷಯ ಸ್ಪಷ್ಟವಾಗಿದ್ದು, ದುರಂತ ಸಂಭವಿಸಿದ ಬಳಿಕ ನಡೆದ ಈ ಸಂಭಾಷಣೆಯ ವಿವರವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಲಾಗಿದೆ. <br /> ಕ್ಯಾಪ್ಟನ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.<br /> <br /> `ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸುವಂತೆ ಸ್ಥಳೀಯ ಅಧಿಕಾರಿಗಳು ಮಾಡಿದ ಕೋರಿಕೆಯನ್ನು ಕ್ಯಾಪ್ಟನ್ ಫ್ರಾನ್ಸೆಸ್ಕೊ ಶೆಟ್ಟಿನೊ ನಿರ್ಲಕ್ಷಿಸಿದ್ದರು. ನೀವು ಹಡಗಿಗೆ ಹಿಂತಿರುಗಿ ಎಷ್ಟು ಮಂದಿ ಪ್ರಯಾಣಿಕರು ಇದ್ದಾರೆ ಎಂಬ ಮಾಹಿತಿಯನ್ನು ಕೂಡಲೇ ನೀಡಲೇಬೇಕು. ಇದು ನಮ್ಮ ಆದೇಶ ಎಂದು ಹೇಳಿದ್ದರೂ ಅದಕ್ಕೆ ಅವರು ಕಿವಿಗೊಡಲಿಲ್ಲ~ ಎಂದು ಬಂದರು ಅಧಿಕಾರಿ ಡಿ ಫಾಲ್ಕೊ ದೂರಿದ್ದಾರೆ.<br /> </p>.<p>`ಪ್ರಯಾಣಿಕರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರಿದ್ದಾರೆ, ನನಗೆ ಜೀವರಕ್ಷಕ ದೋಣಿಯಲ್ಲಿ ಸಾಗದೇ ಬೇರೆ ಮಾರ್ಗವಿಲ್ಲ. ಜತೆಗೆ ಈಗಾಗಲೇ ಕತ್ತಲೆ ಆವರಿಸಿದೆ~ ಎಂದು ಕ್ಯಾಪ್ಟನ್ ಉತ್ತರಿಸಿದರು ಎಂದು ಫಾಲ್ಕೊ ತಿಳಿಸಿದ್ದಾರೆ.<br /> <br /> ಗೃಹ ಬಂಧನ: ಶೆಟ್ಟಿನೊ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಹತ್ಯೆ ಮತ್ತು ಜವಾಬ್ದಾರಿಯಿಂದ ನುಣುಚಿಕೊಂಡ ಆರೋಪದ ಮೇರೆಗೆ ಅವರು ಹಲವು ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬರಬಹುದು ಎಂದು ಹೇಳಲಾಗಿದೆ.<br /> <br /> ಈ ಮಧ್ಯೆ, ರಕ್ಷಣಾ ಕಾರ್ಯಕರ್ತರು ಮಂಗಳವಾರ ಇನ್ನೂ ಐದು ಶವಗಳನ್ನು ಪತ್ತೆಹಚ್ಚುವುದರೊಂದಿಗೆ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 11ಕ್ಕೆ ಏರಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>