<p><strong>ನವದೆಹಲಿ (ಪಿಟಿಐ):</strong> ಎಸ್.ವಿ.ಸುನಿಲ್ ಹಾಗೂ ವಿ.ಆರ್.ರಘುನಾಥ್ ಸೇರಿದಂತೆ ಕರ್ನಾಟಕದ ಒಂಬತ್ತು ಆಟಗಾರರು `ಹಾಕಿ ಇಂಡಿಯಾ~ ಪ್ರಕಟಿಸಿರುವ ಕೇಂದ್ರೀಯ ಗುತ್ತಿಗೆ ಒಪ್ಪಂದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.</p>.<p>2012-2013ರ ಅವಧಿಗೆ ಈ ಒಪ್ಪಂದ ರೂಪಿಸಲಾಗಿದ್ದು, ಒಟ್ಟು 32 ಮಂದಿ ಆಟಗಾರರು ಪಟ್ಟಿಯಲ್ಲಿದ್ದಾರೆ. ಪುಣೆಯ ಬಾಳೇವಾಡಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಎರಡು ದಿನಗಳ ಆಯ್ಕೆ ಟ್ರಯಲ್ಸ್ ಬಳಿಕ `ಹಾಕಿ ಇಂಡಿಯಾ~ ಆಟಗಾರರ ಹೆಸರನ್ನು ಅಂತಿಮಗೊಳಿಸಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಆಯ್ಕೆಗಾರರಾದ ಬಲ್ಬೀರ್ ಸಿಂಗ್, ಬಿ.ಪಿ.ಗೋವಿಂದ, ಸರ್ಕಾರಿ ವೀಕ್ಷಕ ಹರ್ವೀಂದರ್ ಸಿಂಗ್, ಮುಖ್ಯ ಕೋಚ್ ಮೈಕಲ್ ನಾಬ್ಸ್ ಹಾಗೂ ಫಿಜಿಯೋ ಡೇವಿಡ್ ಜಾನ್ ಇದ್ದರು.</p>.<p>ನಾಯಕ ಭರತ್ ಚೆಟ್ರಿ, ಇಗ್ನೇಸ್ ಟರ್ಕಿ, ಎಂ.ಬಿ.ಅಯ್ಯಪ್ಪ, ಎಸ್.ಕೆ.ಉತ್ತಪ್ಪ, ಪ್ರಧಾನ್ ಸೋಮಣ್ಣ, ನಿತಿನ್ ತಿಮ್ಮಯ್ಯ ಹಾಗೂ ಎಂ.ಜಿ.ಪೂಣಚ್ಚ ಗುತ್ತಿಗೆ ಒಪ್ಪಂದದಲ್ಲಿ ಸ್ಥಾನ ಪಡೆದ ಕರ್ನಾಟಕದ ಇತರ ಆಟಗಾರರಾಗಿದ್ದಾರೆ.</p>.<p>32 ಆಟಗಾರರ ಪಟ್ಟಿ ಇಂತಿದೆ: <br /> ಗೋಲ್ ಕೀಪರ್ಸ್: ಭರತ್ ಚೆಟ್ರಿ, ಪಿ.ಆರ್.ಶ್ರೀಜೇಶ್, ಪಿ.ಟಿ.ರಾವ್. ಡಿಫೆಂಡರ್ಸ್: ವಿ.ಆರ್.ರಘುನಾಥ್, ಇಗ್ನೇಸ್ ಟರ್ಕಿ, ಸಂದೀಪ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಹರ್ಬಿರ್ ಸಿಂಗ್. ಮಿಡ್ಫೀಲ್ಡರ್ಸ್: ಸರ್ದಾರ್ ಸಿಂಗ್, ಕೊತಾಜಿತ್ ಸಿಂಗ್, ಗುರ್ಬಜ್ ಸಿಂಗ್, ಬೀರೇಂದ್ರ ಲಾಕ್ರಾ, ಮನ್ಪ್ರೀತ್ ಸಿಂಗ್, ಎಂ.ಬಿ.ಅಯ್ಯಪ್ಪ, ಬಿಪಿನ್ ಕರ್ಕೆಟ್ಟಾ, ಪ್ರದೀಪ್ ಮೋರ್, ಗುರ್ಮೇಲ್ ಸಿಂಗ್. ಫಾರ್ವರ್ಡ್ಸ್: ಎಸ್.ವಿ.ಸುನಿಲ್, ಗುರ್ವೀಂದ್ ಸಿಂಗ್ ಚಾಂದಿ, ಸರ್ವಂಜಿತ್ ಸಿಂಗ್, ಚಿಂಗ್ಲೆನ್ಸನ ಸಿಂಗ್, ಶಿವೇಂದ್ರ ಸಿಂಗ್, ದನೀಶ್ ಮುಸ್ತಾಬ, ತುಷಾರ್ ಖಾಂಡ್ಕರ್, ಎಸ್.ಕೆ.ಉತ್ತಪ್ಪ, ಪ್ರಧಾನ್ ಸೋಮಣ್ಣ, ನಿತಿನ್ ತಿಮ್ಮಯ್ಯ, ಯುವರಾಜ್ ವಾಲ್ಮಿಕಿ, ಧರ್ಮವೀರ್ ಸಿಂಗ್, ಆಕಾಶ್ದೀಪ್ ಸಿಂಗ್, ಎಂ.ಜಿ. ಪೂಣಚ್ಚ ಹಾಗೂ ಪ್ರಭ್ದೀಪ್ ಸಿಂಗ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಎಸ್.ವಿ.ಸುನಿಲ್ ಹಾಗೂ ವಿ.ಆರ್.ರಘುನಾಥ್ ಸೇರಿದಂತೆ ಕರ್ನಾಟಕದ ಒಂಬತ್ತು ಆಟಗಾರರು `ಹಾಕಿ ಇಂಡಿಯಾ~ ಪ್ರಕಟಿಸಿರುವ ಕೇಂದ್ರೀಯ ಗುತ್ತಿಗೆ ಒಪ್ಪಂದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.</p>.<p>2012-2013ರ ಅವಧಿಗೆ ಈ ಒಪ್ಪಂದ ರೂಪಿಸಲಾಗಿದ್ದು, ಒಟ್ಟು 32 ಮಂದಿ ಆಟಗಾರರು ಪಟ್ಟಿಯಲ್ಲಿದ್ದಾರೆ. ಪುಣೆಯ ಬಾಳೇವಾಡಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಎರಡು ದಿನಗಳ ಆಯ್ಕೆ ಟ್ರಯಲ್ಸ್ ಬಳಿಕ `ಹಾಕಿ ಇಂಡಿಯಾ~ ಆಟಗಾರರ ಹೆಸರನ್ನು ಅಂತಿಮಗೊಳಿಸಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಆಯ್ಕೆಗಾರರಾದ ಬಲ್ಬೀರ್ ಸಿಂಗ್, ಬಿ.ಪಿ.ಗೋವಿಂದ, ಸರ್ಕಾರಿ ವೀಕ್ಷಕ ಹರ್ವೀಂದರ್ ಸಿಂಗ್, ಮುಖ್ಯ ಕೋಚ್ ಮೈಕಲ್ ನಾಬ್ಸ್ ಹಾಗೂ ಫಿಜಿಯೋ ಡೇವಿಡ್ ಜಾನ್ ಇದ್ದರು.</p>.<p>ನಾಯಕ ಭರತ್ ಚೆಟ್ರಿ, ಇಗ್ನೇಸ್ ಟರ್ಕಿ, ಎಂ.ಬಿ.ಅಯ್ಯಪ್ಪ, ಎಸ್.ಕೆ.ಉತ್ತಪ್ಪ, ಪ್ರಧಾನ್ ಸೋಮಣ್ಣ, ನಿತಿನ್ ತಿಮ್ಮಯ್ಯ ಹಾಗೂ ಎಂ.ಜಿ.ಪೂಣಚ್ಚ ಗುತ್ತಿಗೆ ಒಪ್ಪಂದದಲ್ಲಿ ಸ್ಥಾನ ಪಡೆದ ಕರ್ನಾಟಕದ ಇತರ ಆಟಗಾರರಾಗಿದ್ದಾರೆ.</p>.<p>32 ಆಟಗಾರರ ಪಟ್ಟಿ ಇಂತಿದೆ: <br /> ಗೋಲ್ ಕೀಪರ್ಸ್: ಭರತ್ ಚೆಟ್ರಿ, ಪಿ.ಆರ್.ಶ್ರೀಜೇಶ್, ಪಿ.ಟಿ.ರಾವ್. ಡಿಫೆಂಡರ್ಸ್: ವಿ.ಆರ್.ರಘುನಾಥ್, ಇಗ್ನೇಸ್ ಟರ್ಕಿ, ಸಂದೀಪ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಹರ್ಬಿರ್ ಸಿಂಗ್. ಮಿಡ್ಫೀಲ್ಡರ್ಸ್: ಸರ್ದಾರ್ ಸಿಂಗ್, ಕೊತಾಜಿತ್ ಸಿಂಗ್, ಗುರ್ಬಜ್ ಸಿಂಗ್, ಬೀರೇಂದ್ರ ಲಾಕ್ರಾ, ಮನ್ಪ್ರೀತ್ ಸಿಂಗ್, ಎಂ.ಬಿ.ಅಯ್ಯಪ್ಪ, ಬಿಪಿನ್ ಕರ್ಕೆಟ್ಟಾ, ಪ್ರದೀಪ್ ಮೋರ್, ಗುರ್ಮೇಲ್ ಸಿಂಗ್. ಫಾರ್ವರ್ಡ್ಸ್: ಎಸ್.ವಿ.ಸುನಿಲ್, ಗುರ್ವೀಂದ್ ಸಿಂಗ್ ಚಾಂದಿ, ಸರ್ವಂಜಿತ್ ಸಿಂಗ್, ಚಿಂಗ್ಲೆನ್ಸನ ಸಿಂಗ್, ಶಿವೇಂದ್ರ ಸಿಂಗ್, ದನೀಶ್ ಮುಸ್ತಾಬ, ತುಷಾರ್ ಖಾಂಡ್ಕರ್, ಎಸ್.ಕೆ.ಉತ್ತಪ್ಪ, ಪ್ರಧಾನ್ ಸೋಮಣ್ಣ, ನಿತಿನ್ ತಿಮ್ಮಯ್ಯ, ಯುವರಾಜ್ ವಾಲ್ಮಿಕಿ, ಧರ್ಮವೀರ್ ಸಿಂಗ್, ಆಕಾಶ್ದೀಪ್ ಸಿಂಗ್, ಎಂ.ಜಿ. ಪೂಣಚ್ಚ ಹಾಗೂ ಪ್ರಭ್ದೀಪ್ ಸಿಂಗ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>