<p><br /> <strong>ಬೆಂಗಳೂರು:</strong> ರಾಜ್ಯದ ಅನುಭವಿ ತಂಡಗಳಲ್ಲಿ ಒಂದಾದ ಬೆಂಗಳೂರಿನ ಎಚ್.ಎ.ಎಲ್. ತಂಡದವರು ಇಲ್ಲಿ ನಡೆಯುತ್ತಿರುವ ಬೆಂಗಳೂರು ಕೊಡವ ಸಮಾಜ ಆಶ್ರಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿ ಮೂರನೇ ಸುತ್ತು ತಲುಪಿದ್ದಾರೆ.<br /> <br /> ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಚ್.ಎ.ಎಲ್. ತಂಡ 8-1 ಗೋಲುಗಳಿಂದ ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ಮೇಲೆ ಸುಲಭ ವಿಜಯ ಸಾಧಿಸಿತು. ಈ ಪಂದ್ಯದಲ್ಲಿ ಸೋಲು ಅನುಭವಿಸಿದ ಹುಬ್ಬಳ್ಳಿ ತಂಡದವರು ಟೂರ್ನಿಯಿಂದ ಹೊರಬಿದ್ದರು.<br /> <br /> ಪೂರ್ಣ ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಎಚ್.ಎ.ಎಲ್. ತಂಡದವರು ತಮ್ಮ ಖ್ಯಾತಿಗೆ ತಕ್ಕಂತೆ ಆಟವಾಡಿ ಪ್ರೇಕ್ಷಕರ ಮನಗೆದ್ದರು. ವಿರಾ ಮದ ವೇಳೆಗೆ 6-1 ಗೋಲುಗಳಿಂದ ಮುಂದಿದ್ದ ವಿಜಯಿ ತಂಡದ ನಾಗಸೇನಿ, ಲೋಕರಾಜ್, ಅಭಿನವ್ ಗಣಪತಿ, ನಾಣಯ್ಯ, ರಮೇಶ್, ಮಹಮದ್ ನಯೀಮ್, ವಿನೀತ್ ಮೈಕೆಲ್ (2) ಹಾಗೂ ಎದುರಾಳಿ ತಂಡದ ಮಂಜುನಾಥ್ ಚೆಂಡನ್ನು ಗುರಿಮುಟ್ಟಿಸಿದರು.<br /> <br /> ನಾಳೆ (ಶುಕ್ರವಾರ) ಮಧ್ಯಾಹ್ನ 2-45ಕ್ಕೆ ಪೋಸ್ಟಲ್-ಆರ್.ಡಬ್ಲ್ಯು.ಎಫ್. ಆನಂತರ ಮಧ್ಯಾಹ್ನ 4-00ಕ್ಕೆ ಪಿ.ಸಿ.ಟಿ.ಸಿ-ಆತಿಥೇಯ ಬೆಂಗಳೂರು ಕೊಡವ ಸಮಾಜ ನಡುವೆ ಪಂದ್ಯ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> <strong>ಬೆಂಗಳೂರು:</strong> ರಾಜ್ಯದ ಅನುಭವಿ ತಂಡಗಳಲ್ಲಿ ಒಂದಾದ ಬೆಂಗಳೂರಿನ ಎಚ್.ಎ.ಎಲ್. ತಂಡದವರು ಇಲ್ಲಿ ನಡೆಯುತ್ತಿರುವ ಬೆಂಗಳೂರು ಕೊಡವ ಸಮಾಜ ಆಶ್ರಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿ ಮೂರನೇ ಸುತ್ತು ತಲುಪಿದ್ದಾರೆ.<br /> <br /> ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಚ್.ಎ.ಎಲ್. ತಂಡ 8-1 ಗೋಲುಗಳಿಂದ ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ಮೇಲೆ ಸುಲಭ ವಿಜಯ ಸಾಧಿಸಿತು. ಈ ಪಂದ್ಯದಲ್ಲಿ ಸೋಲು ಅನುಭವಿಸಿದ ಹುಬ್ಬಳ್ಳಿ ತಂಡದವರು ಟೂರ್ನಿಯಿಂದ ಹೊರಬಿದ್ದರು.<br /> <br /> ಪೂರ್ಣ ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಎಚ್.ಎ.ಎಲ್. ತಂಡದವರು ತಮ್ಮ ಖ್ಯಾತಿಗೆ ತಕ್ಕಂತೆ ಆಟವಾಡಿ ಪ್ರೇಕ್ಷಕರ ಮನಗೆದ್ದರು. ವಿರಾ ಮದ ವೇಳೆಗೆ 6-1 ಗೋಲುಗಳಿಂದ ಮುಂದಿದ್ದ ವಿಜಯಿ ತಂಡದ ನಾಗಸೇನಿ, ಲೋಕರಾಜ್, ಅಭಿನವ್ ಗಣಪತಿ, ನಾಣಯ್ಯ, ರಮೇಶ್, ಮಹಮದ್ ನಯೀಮ್, ವಿನೀತ್ ಮೈಕೆಲ್ (2) ಹಾಗೂ ಎದುರಾಳಿ ತಂಡದ ಮಂಜುನಾಥ್ ಚೆಂಡನ್ನು ಗುರಿಮುಟ್ಟಿಸಿದರು.<br /> <br /> ನಾಳೆ (ಶುಕ್ರವಾರ) ಮಧ್ಯಾಹ್ನ 2-45ಕ್ಕೆ ಪೋಸ್ಟಲ್-ಆರ್.ಡಬ್ಲ್ಯು.ಎಫ್. ಆನಂತರ ಮಧ್ಯಾಹ್ನ 4-00ಕ್ಕೆ ಪಿ.ಸಿ.ಟಿ.ಸಿ-ಆತಿಥೇಯ ಬೆಂಗಳೂರು ಕೊಡವ ಸಮಾಜ ನಡುವೆ ಪಂದ್ಯ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>