<p><strong>ಬೆಂಗಳೂರು:</strong> ನಗರ ಸಂಚಾರ ಪೊಲೀಸ್, ಮಾರುತಿ ಕಾರುಗಳ ಮಾರಾಟ ಸಂಸ್ಥೆಯಾದ `ಪ್ರಥಮ್ ಮೋಟಾರ್ಸ್~-ಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದಲ್ಲಿ ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲು ಇನ್ನು ಮುಂದೆ ಪ್ರತಿ ಸೋಮವಾರವನ್ನು `ಹಾರ್ನ್ ರಹಿತ ದಿನ~ವನ್ನು ಆಚರಿಸಲು ನಿರ್ಧರಿಸಿದೆ.<br /> <br /> ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಂಡಳಿಯ ಅಧ್ಯಕ್ಷ ಡಾ.ವಾಮನಾಚಾರ್ಯ, `ಕೋರಮಂಗಲದಲ್ಲಿ ಅಲ್ಲಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಈಗಾಗಲೇ ಜಾರಿಗೆ ತಂದಿರುವ ಹಾರ್ನ್ ರಹಿತ ಸೋಮವಾರ ಆಂದೋಲನವು ಯಶಸ್ವಿಯಾಗಿದೆ. ಇದೀಗ ನಗರದ ಎಲ್ಲೆಡೆ ವಿಸ್ತರಿಸಲಾಗುತ್ತಿದೆ~ ಎಂದರು.<br /> <br /> `ಮಂಡಳಿ ನಡೆಸಿದ ಅಧ್ಯಯನದ ಪ್ರಕಾರ ನಗರದ ಜನವಸತಿ ಪ್ರದೇಶಗಳಲ್ಲಿ ಶಬ್ದದ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿ ಅಂದರೆ 70ರಿಂದ 75 ಡೆಸಿಬಲ್ಗಳಷ್ಟು ಇದೆ. ಆರೋಗ್ಯಕರ ಶಬ್ದದ ಮಟ್ಟವೆಂದರೆ 55 ಡೆಸಿಬಲ್ಗಿಂತ ಕಡಿಮೆ ಇರಬೇಕು. <br /> <br /> ವಾಣಿಜ್ಯ ಪ್ರದೇಶಗಳಲ್ಲಿ ಸರಾಸರಿ 90ರಿಂದ 95 ಡೆಸಿಬಲ್ಗಳಷ್ಟು ಶಬ್ದ ಹೊರಹೊಮ್ಮುತ್ತಿದೆ. ಇದು 65 ಡೆಸಿಬಲ್ಗಿಂತ ಕಡಿಮೆ ಇರಬೇಕಿತ್ತು~ ಎಂದು ಅವರು ತಿಳಿಸಿದರು.ನಗರದಲ್ಲೇ ಹೆಚ್ಚು ಶಬ್ದ ಮಾಲಿನ್ಯ ಇರುವ ಕೋರಮಂಗಲದಲ್ಲಿ ಹಾರ್ನ್ ರಹಿತ ಸೋಮವಾರ ಆಂದೋಲನ ಆರಂಭಿಸಿದ ಮೇಲೆ ಶಬ್ದ ಮಾಲಿನ್ಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ~ ಎಂದು ಹೇಳಿದ ಅವರು, `ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಶಬ್ದ ಮಾಲಿನ್ಯದ ಬಗ್ಗೆ ಜಾಗೃತಿ ಉಂಟು ಮಾಡುವುದು ಹಾಗೂ ಹಾರ್ನ್ನ ಅನಿಯಮಿತ ಬಳಕೆ ತಡೆಯಲು ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಆಂದೋಲನದ ಉದ್ದೇಶ ಎಂದರು.<br /> <br /> `ಆಸ್ಪತ್ರೆ ಮತ್ತು ಇತರ ನಿಶ್ಯಬ್ದ ವಲಯಗಳಲ್ಲಿ ಸುಮಾರು 500 ಮೀಟರ್ ಪ್ರದೇಶದಲ್ಲಿ ಹಾರ್ನ್ ರಹಿತ ಪ್ರದೇಶವೆಂದು ಜಾಗೃತಿ ಮೂಡಿಸಬೇಕು. ಜತೆಗೆ ಸಿಗ್ನಲ್ಗಳಲ್ಲಿ ಹಾರ್ನ್ ಮಾಡುವ ವಾಹನ ಸವಾರರಿಗೆ ಎಚ್ಚರಿಕೆ ನೀಡಬೇಕು~ ಎಂದು ಅಭಿಪ್ರಾಯಪಟ್ಟರು.ಹೆಚ್ಚು ಶಬ್ದ ಮಾಡುವ ವಾಹನಗಳ ವಿರುದ್ಧ ಕ್ರಮ ಜರುಗಿಸುವ ಕಾರ್ಯಾಚರಣೆ ನಡೆಸಲು ಸಂಚಾರ ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ~ ಎಂದು ಅವರು ಹೇಳಿದರು.<br /> <br /> ಪ್ರಥಮ್ ಮೋಟಾರ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ (ಸಿಇಒ) ಸಮರ್ ವಿಕ್ರಮ್ ಭಾಸಿನ್ ಮಾತನಾಡಿ, `ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಈ ಆಂದೋಲನವನ್ನು ಹಮ್ಮಿಕೊಂಡಿದ್ದೇವೆ~ ಎಂದರು.<br /> <br /> ಕೋರಮಂಗಲದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ನಿತಿನ್ ಶೇಷಾದ್ರಿ ಮಾತನಾಡಿ `ಹಾರ್ನ್ ರಹಿತ ಸೋಮವಾರ ಆಚರಣೆಯಿಂದಾಗಿ ನಮ್ಮ ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯ ಕಡಿಮೆಯಾಗಿದೆ~ ಎಂದು ತಿಳಿಸಿದರು.<br /> <br /> <strong>ದೂಳು: ಮೆಟ್ರೊಗೆ ಸೂಚನೆ</strong><br /> `ನಮ್ಮ ಮೆಟ್ರೊ~ದ ಕಾಮಗಾರಿ ನಡೆದಿರುವ ಪ್ರದೇಶಗಳಲ್ಲಿ ಎದ್ದಿರುವ ಮತ್ತು ಏಳುವ ದೂಳಿನ ಹಾವಳಿಯನ್ನು ಕಡಿಮೆ ಮಾಡುವಂತೆ `ಬೆಂಗಳೂರು ಮೆಟ್ರೊ ರೈಲು ನಿಗಮ~ಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ವಾಮನಾಚಾರ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.<br /> <br /> `ಮೆಟ್ರೊ ಕಾಮಗಾರಿಯಿಂದ ಪರಿಸರದ ಮೇಲಾಗುವ ಪರಿಣಾಮದ ಮೇಲೆ ನಿಗಾ ಇರಿಸಲು ಮುಖ್ಯಮಂತ್ರಿಯವರ ಸಲಹೆಗಾರ ಎ.ರವೀಂದ್ರ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಅದರಲ್ಲಿ ಮಂಡಳಿಯ ಪ್ರತಿನಿಧಿಯೂ ಇದ್ದಾರೆ. ಈ ಸಮಿತಿಯು ಮೆಟ್ರೊ ನಿಗಮಕ್ಕೆ ಸೂಚನೆಗಳನ್ನು ನೀಡುತ್ತದೆ~ ಎಂದು ಅವರು ಹೇಳಿದರು.<br /> <br /> `ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಬಾರದೆಂದು ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಅದು ಮೆಟ್ರೊ ಕಾಮಗಾರಿಗಳಿಗೂ ಅನ್ವಯವಾಗುತ್ತದೆ~ ಎಂದು ಅವರು ತಿಳಿಸಿದರು.<br /> </p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರ ಸಂಚಾರ ಪೊಲೀಸ್, ಮಾರುತಿ ಕಾರುಗಳ ಮಾರಾಟ ಸಂಸ್ಥೆಯಾದ `ಪ್ರಥಮ್ ಮೋಟಾರ್ಸ್~-ಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದಲ್ಲಿ ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲು ಇನ್ನು ಮುಂದೆ ಪ್ರತಿ ಸೋಮವಾರವನ್ನು `ಹಾರ್ನ್ ರಹಿತ ದಿನ~ವನ್ನು ಆಚರಿಸಲು ನಿರ್ಧರಿಸಿದೆ.<br /> <br /> ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಂಡಳಿಯ ಅಧ್ಯಕ್ಷ ಡಾ.ವಾಮನಾಚಾರ್ಯ, `ಕೋರಮಂಗಲದಲ್ಲಿ ಅಲ್ಲಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಈಗಾಗಲೇ ಜಾರಿಗೆ ತಂದಿರುವ ಹಾರ್ನ್ ರಹಿತ ಸೋಮವಾರ ಆಂದೋಲನವು ಯಶಸ್ವಿಯಾಗಿದೆ. ಇದೀಗ ನಗರದ ಎಲ್ಲೆಡೆ ವಿಸ್ತರಿಸಲಾಗುತ್ತಿದೆ~ ಎಂದರು.<br /> <br /> `ಮಂಡಳಿ ನಡೆಸಿದ ಅಧ್ಯಯನದ ಪ್ರಕಾರ ನಗರದ ಜನವಸತಿ ಪ್ರದೇಶಗಳಲ್ಲಿ ಶಬ್ದದ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿ ಅಂದರೆ 70ರಿಂದ 75 ಡೆಸಿಬಲ್ಗಳಷ್ಟು ಇದೆ. ಆರೋಗ್ಯಕರ ಶಬ್ದದ ಮಟ್ಟವೆಂದರೆ 55 ಡೆಸಿಬಲ್ಗಿಂತ ಕಡಿಮೆ ಇರಬೇಕು. <br /> <br /> ವಾಣಿಜ್ಯ ಪ್ರದೇಶಗಳಲ್ಲಿ ಸರಾಸರಿ 90ರಿಂದ 95 ಡೆಸಿಬಲ್ಗಳಷ್ಟು ಶಬ್ದ ಹೊರಹೊಮ್ಮುತ್ತಿದೆ. ಇದು 65 ಡೆಸಿಬಲ್ಗಿಂತ ಕಡಿಮೆ ಇರಬೇಕಿತ್ತು~ ಎಂದು ಅವರು ತಿಳಿಸಿದರು.ನಗರದಲ್ಲೇ ಹೆಚ್ಚು ಶಬ್ದ ಮಾಲಿನ್ಯ ಇರುವ ಕೋರಮಂಗಲದಲ್ಲಿ ಹಾರ್ನ್ ರಹಿತ ಸೋಮವಾರ ಆಂದೋಲನ ಆರಂಭಿಸಿದ ಮೇಲೆ ಶಬ್ದ ಮಾಲಿನ್ಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ~ ಎಂದು ಹೇಳಿದ ಅವರು, `ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಶಬ್ದ ಮಾಲಿನ್ಯದ ಬಗ್ಗೆ ಜಾಗೃತಿ ಉಂಟು ಮಾಡುವುದು ಹಾಗೂ ಹಾರ್ನ್ನ ಅನಿಯಮಿತ ಬಳಕೆ ತಡೆಯಲು ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಆಂದೋಲನದ ಉದ್ದೇಶ ಎಂದರು.<br /> <br /> `ಆಸ್ಪತ್ರೆ ಮತ್ತು ಇತರ ನಿಶ್ಯಬ್ದ ವಲಯಗಳಲ್ಲಿ ಸುಮಾರು 500 ಮೀಟರ್ ಪ್ರದೇಶದಲ್ಲಿ ಹಾರ್ನ್ ರಹಿತ ಪ್ರದೇಶವೆಂದು ಜಾಗೃತಿ ಮೂಡಿಸಬೇಕು. ಜತೆಗೆ ಸಿಗ್ನಲ್ಗಳಲ್ಲಿ ಹಾರ್ನ್ ಮಾಡುವ ವಾಹನ ಸವಾರರಿಗೆ ಎಚ್ಚರಿಕೆ ನೀಡಬೇಕು~ ಎಂದು ಅಭಿಪ್ರಾಯಪಟ್ಟರು.ಹೆಚ್ಚು ಶಬ್ದ ಮಾಡುವ ವಾಹನಗಳ ವಿರುದ್ಧ ಕ್ರಮ ಜರುಗಿಸುವ ಕಾರ್ಯಾಚರಣೆ ನಡೆಸಲು ಸಂಚಾರ ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ~ ಎಂದು ಅವರು ಹೇಳಿದರು.<br /> <br /> ಪ್ರಥಮ್ ಮೋಟಾರ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ (ಸಿಇಒ) ಸಮರ್ ವಿಕ್ರಮ್ ಭಾಸಿನ್ ಮಾತನಾಡಿ, `ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಈ ಆಂದೋಲನವನ್ನು ಹಮ್ಮಿಕೊಂಡಿದ್ದೇವೆ~ ಎಂದರು.<br /> <br /> ಕೋರಮಂಗಲದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ನಿತಿನ್ ಶೇಷಾದ್ರಿ ಮಾತನಾಡಿ `ಹಾರ್ನ್ ರಹಿತ ಸೋಮವಾರ ಆಚರಣೆಯಿಂದಾಗಿ ನಮ್ಮ ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯ ಕಡಿಮೆಯಾಗಿದೆ~ ಎಂದು ತಿಳಿಸಿದರು.<br /> <br /> <strong>ದೂಳು: ಮೆಟ್ರೊಗೆ ಸೂಚನೆ</strong><br /> `ನಮ್ಮ ಮೆಟ್ರೊ~ದ ಕಾಮಗಾರಿ ನಡೆದಿರುವ ಪ್ರದೇಶಗಳಲ್ಲಿ ಎದ್ದಿರುವ ಮತ್ತು ಏಳುವ ದೂಳಿನ ಹಾವಳಿಯನ್ನು ಕಡಿಮೆ ಮಾಡುವಂತೆ `ಬೆಂಗಳೂರು ಮೆಟ್ರೊ ರೈಲು ನಿಗಮ~ಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ವಾಮನಾಚಾರ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.<br /> <br /> `ಮೆಟ್ರೊ ಕಾಮಗಾರಿಯಿಂದ ಪರಿಸರದ ಮೇಲಾಗುವ ಪರಿಣಾಮದ ಮೇಲೆ ನಿಗಾ ಇರಿಸಲು ಮುಖ್ಯಮಂತ್ರಿಯವರ ಸಲಹೆಗಾರ ಎ.ರವೀಂದ್ರ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಅದರಲ್ಲಿ ಮಂಡಳಿಯ ಪ್ರತಿನಿಧಿಯೂ ಇದ್ದಾರೆ. ಈ ಸಮಿತಿಯು ಮೆಟ್ರೊ ನಿಗಮಕ್ಕೆ ಸೂಚನೆಗಳನ್ನು ನೀಡುತ್ತದೆ~ ಎಂದು ಅವರು ಹೇಳಿದರು.<br /> <br /> `ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಬಾರದೆಂದು ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಅದು ಮೆಟ್ರೊ ಕಾಮಗಾರಿಗಳಿಗೂ ಅನ್ವಯವಾಗುತ್ತದೆ~ ಎಂದು ಅವರು ತಿಳಿಸಿದರು.<br /> </p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>