<p>ಔರಾದ್: ವನಮಾರಪಳ್ಳಿ ಗಡಿಯಿಂದ ಔರಾದ್ವರೆಗೆ ತೀವ್ರವಾಗಿ ಕೆಟ್ಟುಹೋದ ರಸ್ತೆಯನ್ನು ಜಿಲ್ಲಾಧಿಕಾರಿ ಸಮೀರ್ ಶುಕ್ಲ ಗುರುವಾರ ಪರಿಶೀಲಿಸಿದರು.<br /> <br /> ಇಷ್ಟೊಂದು ಕೆಟ್ಟುಹೋದ ರಸ್ತೆ ಮೇಲೆ ಪ್ರಯಾಣಿಕರು ಹೇಗೆ ಸಂಚರಿಸಬೇಕೆಂದು ತಬ್ಬಿಬ್ಬಾದ ಜಿಲ್ಲಾಧಿಕಾರಿಗಳು ಸ್ಥಳದಲ್ಲಿದ್ದ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿದರು. ಮಹಾರಾಷ್ಟ್ರ ಗಡಿಯಿಂದ ಕೌಠಾ ವರೆಗೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ನಾನು ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ.<br /> <br /> ಅದರೂ ಕೆಲಸ ಆಗುತ್ತಿಲ್ಲ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು. ನೀವು ಸರ್ಕಾರದ ಸಂಬಂಧಿತ ಇಲಾಖೆ ಮುಖ್ಯಸ್ಥರಿಗೆ ಈ ರಸ್ತೆಯ ಸ್ಥಿತಿಗತಿ ಮನವರಿಗೆ ಮಾಡಿಕೊಡುವಂತೆ ಶಾಸಕರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳನ್ನು ಕೇಳಿಕೊಂಡರು. ಬೋರಾಳ ಎತ್ತರ ಪ್ರದೇಶದ ಬಳಿ ಅಪಾಯಕಾರಿ ಸಂಚಾರದ ಬಗ್ಗೆ ತಮಗೂ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ ಲೋಕೋಪಯೊಗಿ ಇಲಾಖೆಯವರು ಅಗತ್ಯ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸೂಚಿಸಿದರು. <br /> <br /> ನಾವು ರಸ್ತೆ ಮಾಡಲು ಹೋದರೆ ಕೆಲವರು ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಕಾರಣ ಬೋರಾಳ ರಸ್ತೆ ಕಾಮಗಾರಿ ನಿಂತು ಹೋಗಿದೆ. ಆದಾಗ್ಯೂ ಪ್ರಯಾಣಿಕರ ತೊಂದರೆ ತಪ್ಪಿಸಲು ಗುತ್ತಿಗೆದಾರರ ಜೊತೆ ಮಾತನಾಡಿ ಕಾಮಗಾರಿ ಆರಂಭಿಸಲಾಗುವುದು. <br /> <br /> ಈ ವಿಷಯದಲ್ಲಿ ತಾವು ನಮಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳನ್ನು ಕೇಳಿಕೊಂಡರು. <br /> ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶ್ರೀರಂಗ ಪರಿಹಾರ, ಮುಖ್ಯಾಧಿಕಾರಿ ಅಶೋಕ ಕಾಳಗಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಧೊಂಡಿಬಾ ನರೋಟೆ, ತಹಸೀಲ್ದಾರ್ ಶಿವಕುಮಾರ ಶೀಲವಂತ, ಶರಣಪ್ಪ ಪಂಚಾಕ್ಷಿರೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಔರಾದ್: ವನಮಾರಪಳ್ಳಿ ಗಡಿಯಿಂದ ಔರಾದ್ವರೆಗೆ ತೀವ್ರವಾಗಿ ಕೆಟ್ಟುಹೋದ ರಸ್ತೆಯನ್ನು ಜಿಲ್ಲಾಧಿಕಾರಿ ಸಮೀರ್ ಶುಕ್ಲ ಗುರುವಾರ ಪರಿಶೀಲಿಸಿದರು.<br /> <br /> ಇಷ್ಟೊಂದು ಕೆಟ್ಟುಹೋದ ರಸ್ತೆ ಮೇಲೆ ಪ್ರಯಾಣಿಕರು ಹೇಗೆ ಸಂಚರಿಸಬೇಕೆಂದು ತಬ್ಬಿಬ್ಬಾದ ಜಿಲ್ಲಾಧಿಕಾರಿಗಳು ಸ್ಥಳದಲ್ಲಿದ್ದ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿದರು. ಮಹಾರಾಷ್ಟ್ರ ಗಡಿಯಿಂದ ಕೌಠಾ ವರೆಗೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ನಾನು ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ.<br /> <br /> ಅದರೂ ಕೆಲಸ ಆಗುತ್ತಿಲ್ಲ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು. ನೀವು ಸರ್ಕಾರದ ಸಂಬಂಧಿತ ಇಲಾಖೆ ಮುಖ್ಯಸ್ಥರಿಗೆ ಈ ರಸ್ತೆಯ ಸ್ಥಿತಿಗತಿ ಮನವರಿಗೆ ಮಾಡಿಕೊಡುವಂತೆ ಶಾಸಕರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳನ್ನು ಕೇಳಿಕೊಂಡರು. ಬೋರಾಳ ಎತ್ತರ ಪ್ರದೇಶದ ಬಳಿ ಅಪಾಯಕಾರಿ ಸಂಚಾರದ ಬಗ್ಗೆ ತಮಗೂ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ ಲೋಕೋಪಯೊಗಿ ಇಲಾಖೆಯವರು ಅಗತ್ಯ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸೂಚಿಸಿದರು. <br /> <br /> ನಾವು ರಸ್ತೆ ಮಾಡಲು ಹೋದರೆ ಕೆಲವರು ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಕಾರಣ ಬೋರಾಳ ರಸ್ತೆ ಕಾಮಗಾರಿ ನಿಂತು ಹೋಗಿದೆ. ಆದಾಗ್ಯೂ ಪ್ರಯಾಣಿಕರ ತೊಂದರೆ ತಪ್ಪಿಸಲು ಗುತ್ತಿಗೆದಾರರ ಜೊತೆ ಮಾತನಾಡಿ ಕಾಮಗಾರಿ ಆರಂಭಿಸಲಾಗುವುದು. <br /> <br /> ಈ ವಿಷಯದಲ್ಲಿ ತಾವು ನಮಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳನ್ನು ಕೇಳಿಕೊಂಡರು. <br /> ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶ್ರೀರಂಗ ಪರಿಹಾರ, ಮುಖ್ಯಾಧಿಕಾರಿ ಅಶೋಕ ಕಾಳಗಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಧೊಂಡಿಬಾ ನರೋಟೆ, ತಹಸೀಲ್ದಾರ್ ಶಿವಕುಮಾರ ಶೀಲವಂತ, ಶರಣಪ್ಪ ಪಂಚಾಕ್ಷಿರೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>