<p><strong>ಕೆಜಿಎಫ್:</strong> ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮನುಷ್ಯರಲ್ಲಿ ಮಿತಿ ಮೀರಿದ ಆಸೆ ಹೆಚ್ಚುತ್ತಿರುವುದರಿಂದ ಸಮಾಜದಲ್ಲಿ ಅಶಾಂತಿ ಹೆಚ್ಚುತ್ತಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.<br /> <br /> ರಾಬರ್ಟಸನ್ಪೇಟೆ ಆರ್ಯವೈಶ್ಯ ಮಂಡಳಿ ಶಿವರಾತ್ರಿ ಪ್ರಯುಕ್ತ ಏರ್ಪಡಿಸಿದ್ದ ಲಕ್ಷ ಲಿಂಗಾರ್ಚನೆ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿ, ದೇವರ ಧ್ಯಾನ ಮತ್ತು ಸಾತ್ವಿಕ ನಡವಳಿಕೆಗಳಿಂದ ಸಮಾಜವನ್ನು ಸರಿದಾರಿಗೆ ತರಬಹುದು. ಮನದಲ್ಲಿ ಶಿವ ಧ್ಯಾನ ಮೂಡಿ ಬರಬೇಕು. ಎಲ್ಲರ ಬದುಕು ಹಸನಾಗಬೇಕು. ದಾನ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಸಂತೃಪ್ತ ಜೀವನ ನಡೆಸಬಹುದು ಎಂದು ಕಿವಿಮಾತು ಹೇಳಿದರು.<br /> <br /> ಆರ್ಯವೈಶ್ಯ ಮಂಡಳಿಯವರು ಮಣ್ಣು ಮತ್ತು ಸ್ಪಟಿಕದಿಂದ ಮಾಡಿದ ಸುಮಾರು ಒಂದೂವರೆ ಲಕ್ಷ ಶಿವಲಿಂಗಗಳ ದರ್ಶನ ಮಾಡಿದ ಅವರು, ಮಹಾರುದ್ರ ಯಾಗದ ಅಗ್ನಿಗೆ ಪೂರ್ಣಾಹುತಿ ನೀಡಿದರು.<br /> <br /> ಸುಮಾರು ಎರಡು ತಿಂಗಳಿನಿಂದ ಆರ್ಯವೈಶ್ಯ ಸಮುದಾಯದವರು ಮನೆಗಳಲ್ಲಿಯೇ ಜೇಡಿ ಮಣ್ಣಿನಲ್ಲಿ ರೂಪಿಸಿದ್ದ ಶಿವಲಿಂಗಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.<br /> <br /> ಮುಖಂಡರಾದ ಚಂದ್ರಶೇಖರಶೆಟ್ಟಿ, ಕೋದಂಡರಾಮಶೆಟ್ಟಿ, ನರಸಿಂಹಗುಪ್ತ, ವಾಣಿ ಶ್ರೀಧರ್, ಕಾರ್ತಿಕ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್:</strong> ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮನುಷ್ಯರಲ್ಲಿ ಮಿತಿ ಮೀರಿದ ಆಸೆ ಹೆಚ್ಚುತ್ತಿರುವುದರಿಂದ ಸಮಾಜದಲ್ಲಿ ಅಶಾಂತಿ ಹೆಚ್ಚುತ್ತಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.<br /> <br /> ರಾಬರ್ಟಸನ್ಪೇಟೆ ಆರ್ಯವೈಶ್ಯ ಮಂಡಳಿ ಶಿವರಾತ್ರಿ ಪ್ರಯುಕ್ತ ಏರ್ಪಡಿಸಿದ್ದ ಲಕ್ಷ ಲಿಂಗಾರ್ಚನೆ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿ, ದೇವರ ಧ್ಯಾನ ಮತ್ತು ಸಾತ್ವಿಕ ನಡವಳಿಕೆಗಳಿಂದ ಸಮಾಜವನ್ನು ಸರಿದಾರಿಗೆ ತರಬಹುದು. ಮನದಲ್ಲಿ ಶಿವ ಧ್ಯಾನ ಮೂಡಿ ಬರಬೇಕು. ಎಲ್ಲರ ಬದುಕು ಹಸನಾಗಬೇಕು. ದಾನ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಸಂತೃಪ್ತ ಜೀವನ ನಡೆಸಬಹುದು ಎಂದು ಕಿವಿಮಾತು ಹೇಳಿದರು.<br /> <br /> ಆರ್ಯವೈಶ್ಯ ಮಂಡಳಿಯವರು ಮಣ್ಣು ಮತ್ತು ಸ್ಪಟಿಕದಿಂದ ಮಾಡಿದ ಸುಮಾರು ಒಂದೂವರೆ ಲಕ್ಷ ಶಿವಲಿಂಗಗಳ ದರ್ಶನ ಮಾಡಿದ ಅವರು, ಮಹಾರುದ್ರ ಯಾಗದ ಅಗ್ನಿಗೆ ಪೂರ್ಣಾಹುತಿ ನೀಡಿದರು.<br /> <br /> ಸುಮಾರು ಎರಡು ತಿಂಗಳಿನಿಂದ ಆರ್ಯವೈಶ್ಯ ಸಮುದಾಯದವರು ಮನೆಗಳಲ್ಲಿಯೇ ಜೇಡಿ ಮಣ್ಣಿನಲ್ಲಿ ರೂಪಿಸಿದ್ದ ಶಿವಲಿಂಗಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.<br /> <br /> ಮುಖಂಡರಾದ ಚಂದ್ರಶೇಖರಶೆಟ್ಟಿ, ಕೋದಂಡರಾಮಶೆಟ್ಟಿ, ನರಸಿಂಹಗುಪ್ತ, ವಾಣಿ ಶ್ರೀಧರ್, ಕಾರ್ತಿಕ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>