<p>ಕಳೆದ ಒಂದು ದಶಕದಲ್ಲಿ ಮಂಡಿಸಲಾದ ರೈಲ್ವೆಬಜೆಟ್ಗಳ ಮೇಲೆ ಕಣ್ಣಾಡಿಸಿದರೆ ಅವುಗಳೆಲ್ಲವೂ ಜನಪ್ರಿಯತೆಯ ಹಳಿಯಲ್ಲಿಯೇ ಸಾಗಿಬಂದದ್ದನ್ನು ಕಾಣಬಹುದು. ಈ ಅವಧಿಯಲ್ಲಿ ಸಚಿವರಾದವರು ಹೆಚ್ಚುವರಿಯಾಗಿ ಸಂಪನ್ಮೂಲವನ್ನು ಕ್ರೋಡೀಕರಿಸಿ ರೈಲ್ವೆ ಇಲಾಖೆಯನ್ನು ಸಶಕ್ತಗೊಳಿಸುವ ಮೂಲಕ ಪ್ರಯಾಣಿಕರಿಗೆ ಹೆಚ್ಚು ಅನುಕೂಲಗಳನ್ನು ಕಲ್ಪಿಸಬೇಕೆಂಬ ದೂರದೃಷ್ಟಿಯಿಂದ ಬಜೆಟ್ ಮಂಡಿಸಲೇ ಇಲ್ಲ. <br /> <br /> ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವೇ ಅವರಿಗೆ ಮುಖ್ಯವಾಗಿತ್ತು. ಇವರಲ್ಲಿ ಹೆಚ್ಚಿನ ಸಚಿವರು ಪ್ರಾದೇಶಿಕ ಪಕ್ಷಗಳ ನಾಯಕರೇ ಆಗಿದ್ದ ಕಾರಣ ಬಜೆಟ್ಗಳು ಕೂಡಾ ಪ್ರಾದೇಶಿಕ ಪಕ್ಷಪಾತತನದಿಂದ ಕೂಡಿದ್ದವು. ಈ ಕಾರಣದಿಂದಾಗಿ ಸದಾ ಆರ್ಥಿಕ ಸಂಕಷ್ಟದಿಂದ ನರಳುತ್ತಿದ್ದ ರೈಲ್ವೆ ಇಲಾಖೆಗೆ ಪ್ರಯಾಣಿಕರಿಗೆ ಹೆಚ್ಚು ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ.<br /> <br /> ಅದು ಸರ್ಕಾರದ ಸಹಾಯಧನವನ್ನೇ ನಂಬಿದ್ದ ಪರಾವಲಂಬಿ ಇಲಾಖೆಯಾಗಿ ಹೋಗಿದೆ. ಈ ಸವೆದ ದಾರಿಯನ್ನು ತುಳಿಯಲು ಹೋಗದ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ಹೊಸದಾರಿಯಲ್ಲಿ ಹೆಜ್ಜೆ ಇಡುವ ಪ್ರಯತ್ನ ಮಾಡಿದ್ದಾರೆ. ಒಂಬತ್ತು ವರ್ಷಗಳ ನಂತರ ಇದೇ ಮೊದಲ ಬಾರಿ ಅವರು ಎಲ್ಲ ವರ್ಗಗಳ ಪ್ರಯಾಣಿಕ ದರವನ್ನು ಹೆಚ್ಚಿಸುವ ದಿಟ್ಟತನದ ನಿರ್ಧಾರ ಕೈಗೊಂಡಿದ್ದಾರೆ.<br /> <br /> ಪ್ರಯಾಣಿಕರ ತಲೆಯ ಮೇಲೆ ಹೊರಲಾಗದಷ್ಟು ಭಾರದ ಹೊರೆಯನ್ನು ಹೊರಿಸಲು ಹೋಗದೆ ಪ್ರತಿ ಕಿ.ಮೀ.ಗೆ ಎರಡರಿಂದ ಮೂವತ್ತು ಪೈಸೆವರೆಗೆ ಪ್ರಯಾಣ ದರವನ್ನು ಅವರು ಹೆಚ್ಚಿಸಿದ್ದಾರೆ. <br /> <br /> ಬಡವಾಗಿ ಹೋಗಿರುವ ರೈಲ್ವೆ ಇಲಾಖೆಯ ಆರೋಗ್ಯ ಸುಧಾರಣೆಗೆ ಈ ಪ್ರಮಾಣದ ದರ ಏರಿಕೆ ಅನಿವಾರ್ಯವಾಗಿತ್ತು. <br /> <br /> ಕಳೆದ ಒಂದು ದಶಕದಲ್ಲಿ ಸಾಮಾನ್ಯ ಜನತೆಯ ಇನ್ನೊಂದು ಪ್ರಮುಖ ಸಂಚಾರ ಸಾಧನವಾಗಿರುವ ಬಸ್ಗಳ ಪ್ರಯಾಣ ದರ ಹಲವು ಪಟ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರೈಲು ಪ್ರಯಾಣ ದರ ದುಬಾರಿ ಎಂದು ಗೊಣಗಾಡುವವರ ಸಂಖ್ಯೆ ಬಹಳ ಇಲ್ಲ. ರೈಲಿನಲ್ಲಿ ಪ್ರಯಾಣಿಸುವವರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ರೈಲ್ವೆ ಸಂಪರ್ಕದ ಕೊರತೆಯೇ ಹೊರತು ಪ್ರಯಾಣ ದರ ಹೆಚ್ಚಳ ಅಲ್ಲ.<br /> <br /> ಪ್ರಯಾಣ ದರವನ್ನು ಸ್ವಲ್ಪ ಹೆಚ್ಚಿಸಿ ಆ ಹಣವನ್ನು ರೈಲ್ವೆ ಸಂಪರ್ಕದ ಸುಧಾರಣೆಗೆ ಬಳಸುವುದನ್ನು ಯಾರೂ ವಿರೋಧಿಸಲಾರರು. ಈ ಹಿನ್ನೆಲೆಯಲ್ಲಿ ರೈಲ್ವೆ ಸಚಿವರ ನಿರ್ಧಾರ ಸ್ವಾಗತಾರ್ಹ.<br /> <br /> ಆದರೆ ಜನಪ್ರಿಯ ರಾಜಕಾರಣವನ್ನೇ ಮಾಡುತ್ತಾ ಬಂದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಯಾಣದರ ಹೆಚ್ಚಳ ಪಥ್ಯೆ ಆಗಿಲ್ಲ. ಹಟಕ್ಕೆ ಬಿದ್ದಿರುವ ಅವರು ತಮ್ಮ ಪಕ್ಷಕ್ಕೆ ಸೇರಿರುವ ಸಚಿವರೇ ಮಂಡಿಸಿರುವ ಬಜೆಟ್ಅನ್ನು ವಿರೋಧಿಸುವ ಮೂಲಕ ರಾಜಕೀಯ ಬಿಕ್ಕಟ್ಟಿಗೆ ಕಾರಣರಾಗಿದ್ದಾರೆ. ಈ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿಯದೆ ಸಚಿವ ದಿನೇಶ್ ತ್ರಿವೇದಿ ಅವರ ಬೆಂಬಲಕ್ಕೆ ನಿಲ್ಲಬೇಕು. <br /> <br /> ಈ ಮೂಲಕ ಜನಪ್ರಿಯ ಬಜೆಟ್ಗಳ ಹಾವಳಿಯಿಂದ ಸೊರಗಿಹೋಗಿರುವ ರೈಲ್ವೆಯನ್ನು ಬಲಗೊಳಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಕರ್ನಾಟಕಕ್ಕೆ ಬಜೆಟ್ ಅನ್ಯಾಯವನ್ನೇನೂ ಮಾಡಿಲ್ಲ. ಮುಖ್ಯವಾಗಿ ವೆಚ್ಚ ಹಂಚಿಕೆಯ ಅನೇಕ ಯೋಜನೆಗಳಿಗೆ ಇಲಾಖೆ ಒಪ್ಪಿಕೊಂಡಿದೆ.<br /> <br /> ಐದು ಹೊಸಮಾರ್ಗಗಳ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದೆ. ಆದರೆ ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳಿಗೆ ಸುಮಾರು 600 ಕೋಟಿ ರೂಪಾಯಿಗಳನ್ನಷ್ಟೇ ನೀಡಿರುವುದು ನಿರಾಶೆ ಉಂಟುಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳೆದ ಒಂದು ದಶಕದಲ್ಲಿ ಮಂಡಿಸಲಾದ ರೈಲ್ವೆಬಜೆಟ್ಗಳ ಮೇಲೆ ಕಣ್ಣಾಡಿಸಿದರೆ ಅವುಗಳೆಲ್ಲವೂ ಜನಪ್ರಿಯತೆಯ ಹಳಿಯಲ್ಲಿಯೇ ಸಾಗಿಬಂದದ್ದನ್ನು ಕಾಣಬಹುದು. ಈ ಅವಧಿಯಲ್ಲಿ ಸಚಿವರಾದವರು ಹೆಚ್ಚುವರಿಯಾಗಿ ಸಂಪನ್ಮೂಲವನ್ನು ಕ್ರೋಡೀಕರಿಸಿ ರೈಲ್ವೆ ಇಲಾಖೆಯನ್ನು ಸಶಕ್ತಗೊಳಿಸುವ ಮೂಲಕ ಪ್ರಯಾಣಿಕರಿಗೆ ಹೆಚ್ಚು ಅನುಕೂಲಗಳನ್ನು ಕಲ್ಪಿಸಬೇಕೆಂಬ ದೂರದೃಷ್ಟಿಯಿಂದ ಬಜೆಟ್ ಮಂಡಿಸಲೇ ಇಲ್ಲ. <br /> <br /> ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವೇ ಅವರಿಗೆ ಮುಖ್ಯವಾಗಿತ್ತು. ಇವರಲ್ಲಿ ಹೆಚ್ಚಿನ ಸಚಿವರು ಪ್ರಾದೇಶಿಕ ಪಕ್ಷಗಳ ನಾಯಕರೇ ಆಗಿದ್ದ ಕಾರಣ ಬಜೆಟ್ಗಳು ಕೂಡಾ ಪ್ರಾದೇಶಿಕ ಪಕ್ಷಪಾತತನದಿಂದ ಕೂಡಿದ್ದವು. ಈ ಕಾರಣದಿಂದಾಗಿ ಸದಾ ಆರ್ಥಿಕ ಸಂಕಷ್ಟದಿಂದ ನರಳುತ್ತಿದ್ದ ರೈಲ್ವೆ ಇಲಾಖೆಗೆ ಪ್ರಯಾಣಿಕರಿಗೆ ಹೆಚ್ಚು ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ.<br /> <br /> ಅದು ಸರ್ಕಾರದ ಸಹಾಯಧನವನ್ನೇ ನಂಬಿದ್ದ ಪರಾವಲಂಬಿ ಇಲಾಖೆಯಾಗಿ ಹೋಗಿದೆ. ಈ ಸವೆದ ದಾರಿಯನ್ನು ತುಳಿಯಲು ಹೋಗದ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ಹೊಸದಾರಿಯಲ್ಲಿ ಹೆಜ್ಜೆ ಇಡುವ ಪ್ರಯತ್ನ ಮಾಡಿದ್ದಾರೆ. ಒಂಬತ್ತು ವರ್ಷಗಳ ನಂತರ ಇದೇ ಮೊದಲ ಬಾರಿ ಅವರು ಎಲ್ಲ ವರ್ಗಗಳ ಪ್ರಯಾಣಿಕ ದರವನ್ನು ಹೆಚ್ಚಿಸುವ ದಿಟ್ಟತನದ ನಿರ್ಧಾರ ಕೈಗೊಂಡಿದ್ದಾರೆ.<br /> <br /> ಪ್ರಯಾಣಿಕರ ತಲೆಯ ಮೇಲೆ ಹೊರಲಾಗದಷ್ಟು ಭಾರದ ಹೊರೆಯನ್ನು ಹೊರಿಸಲು ಹೋಗದೆ ಪ್ರತಿ ಕಿ.ಮೀ.ಗೆ ಎರಡರಿಂದ ಮೂವತ್ತು ಪೈಸೆವರೆಗೆ ಪ್ರಯಾಣ ದರವನ್ನು ಅವರು ಹೆಚ್ಚಿಸಿದ್ದಾರೆ. <br /> <br /> ಬಡವಾಗಿ ಹೋಗಿರುವ ರೈಲ್ವೆ ಇಲಾಖೆಯ ಆರೋಗ್ಯ ಸುಧಾರಣೆಗೆ ಈ ಪ್ರಮಾಣದ ದರ ಏರಿಕೆ ಅನಿವಾರ್ಯವಾಗಿತ್ತು. <br /> <br /> ಕಳೆದ ಒಂದು ದಶಕದಲ್ಲಿ ಸಾಮಾನ್ಯ ಜನತೆಯ ಇನ್ನೊಂದು ಪ್ರಮುಖ ಸಂಚಾರ ಸಾಧನವಾಗಿರುವ ಬಸ್ಗಳ ಪ್ರಯಾಣ ದರ ಹಲವು ಪಟ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರೈಲು ಪ್ರಯಾಣ ದರ ದುಬಾರಿ ಎಂದು ಗೊಣಗಾಡುವವರ ಸಂಖ್ಯೆ ಬಹಳ ಇಲ್ಲ. ರೈಲಿನಲ್ಲಿ ಪ್ರಯಾಣಿಸುವವರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ರೈಲ್ವೆ ಸಂಪರ್ಕದ ಕೊರತೆಯೇ ಹೊರತು ಪ್ರಯಾಣ ದರ ಹೆಚ್ಚಳ ಅಲ್ಲ.<br /> <br /> ಪ್ರಯಾಣ ದರವನ್ನು ಸ್ವಲ್ಪ ಹೆಚ್ಚಿಸಿ ಆ ಹಣವನ್ನು ರೈಲ್ವೆ ಸಂಪರ್ಕದ ಸುಧಾರಣೆಗೆ ಬಳಸುವುದನ್ನು ಯಾರೂ ವಿರೋಧಿಸಲಾರರು. ಈ ಹಿನ್ನೆಲೆಯಲ್ಲಿ ರೈಲ್ವೆ ಸಚಿವರ ನಿರ್ಧಾರ ಸ್ವಾಗತಾರ್ಹ.<br /> <br /> ಆದರೆ ಜನಪ್ರಿಯ ರಾಜಕಾರಣವನ್ನೇ ಮಾಡುತ್ತಾ ಬಂದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಯಾಣದರ ಹೆಚ್ಚಳ ಪಥ್ಯೆ ಆಗಿಲ್ಲ. ಹಟಕ್ಕೆ ಬಿದ್ದಿರುವ ಅವರು ತಮ್ಮ ಪಕ್ಷಕ್ಕೆ ಸೇರಿರುವ ಸಚಿವರೇ ಮಂಡಿಸಿರುವ ಬಜೆಟ್ಅನ್ನು ವಿರೋಧಿಸುವ ಮೂಲಕ ರಾಜಕೀಯ ಬಿಕ್ಕಟ್ಟಿಗೆ ಕಾರಣರಾಗಿದ್ದಾರೆ. ಈ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿಯದೆ ಸಚಿವ ದಿನೇಶ್ ತ್ರಿವೇದಿ ಅವರ ಬೆಂಬಲಕ್ಕೆ ನಿಲ್ಲಬೇಕು. <br /> <br /> ಈ ಮೂಲಕ ಜನಪ್ರಿಯ ಬಜೆಟ್ಗಳ ಹಾವಳಿಯಿಂದ ಸೊರಗಿಹೋಗಿರುವ ರೈಲ್ವೆಯನ್ನು ಬಲಗೊಳಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಕರ್ನಾಟಕಕ್ಕೆ ಬಜೆಟ್ ಅನ್ಯಾಯವನ್ನೇನೂ ಮಾಡಿಲ್ಲ. ಮುಖ್ಯವಾಗಿ ವೆಚ್ಚ ಹಂಚಿಕೆಯ ಅನೇಕ ಯೋಜನೆಗಳಿಗೆ ಇಲಾಖೆ ಒಪ್ಪಿಕೊಂಡಿದೆ.<br /> <br /> ಐದು ಹೊಸಮಾರ್ಗಗಳ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದೆ. ಆದರೆ ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳಿಗೆ ಸುಮಾರು 600 ಕೋಟಿ ರೂಪಾಯಿಗಳನ್ನಷ್ಟೇ ನೀಡಿರುವುದು ನಿರಾಶೆ ಉಂಟುಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>