<p><strong>ಮುಂಬೈ: </strong>ಹೋಳಿ ಹಬ್ಬದ ಸಂದರ್ಭದಲ್ಲಿ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮ ಪಡುತ್ತಿದ್ದ ಇಲ್ಲಿನ ನೂರಾರು ಮಕ್ಕಳು ಹಾಗೂ ಕೆಲ ಹಿರಿಯರಲ್ಲಿ ಅಲರ್ಜಿ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಘಟನೆ ಧಾರಾವಿಯಲ್ಲಿ ನಡೆದಿದೆ.<br /> <br /> ಶಾಸ್ತ್ರಿ ನಗರದವರಾದ ಇವರಲ್ಲಿ ಬಹುಪಾಲು ಮಂದಿ ದಕ್ಷಿಣ ಭಾರತದವರಾಗಿದ್ದಾರೆ. ಬಣ್ಣ ಎರಚಾಟದ ವೇಳೆ ಹಲವರಿಗೆ ವಾಕರಿಕೆ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತು.<br /> <br /> ಮಕ್ಕಳಲ್ಲಿ ಹೆಚ್ಚಿನವರು 8-10 ವರ್ಷದೊಳಗಿನವರಾಗಿದ್ದು, ಸೂಕ್ತ ಚಿಕಿತ್ಸೆಯ ಬಳಿಕ ಕೆಲವರನ್ನು ಮನೆಗೆ ಕಳುಹಿಸಲಾಯಿತು. ದಾಖಲಾದವರ ಆರೋಗ್ಯ ಸ್ಥಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.<br /> <br /> ಈ ಮಕ್ಕಳು ಚರ್ಮದ ವಸ್ತುಗಳನ್ನು ತಯಾರಿಸುವ ಸಮೀಪದ ಕಾರ್ಖಾನೆಯಿಂದ ಬಣ್ಣ ಅಥವಾ `ಡೈ~ಗಳನ್ನು ಕದ್ದು ತಂದು ಎರಚಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಅವರ ಬಳಿ ಇದ್ದ ಡೈಯನ್ನು ವಶಪಡಿಸಿಕೊಳ್ಳಲಾಗಿದ್ದು, ರಾಸಾಯನಿಕ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ಹೋಳಿ ಹಬ್ಬದ ಸಂದರ್ಭದಲ್ಲಿ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮ ಪಡುತ್ತಿದ್ದ ಇಲ್ಲಿನ ನೂರಾರು ಮಕ್ಕಳು ಹಾಗೂ ಕೆಲ ಹಿರಿಯರಲ್ಲಿ ಅಲರ್ಜಿ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಘಟನೆ ಧಾರಾವಿಯಲ್ಲಿ ನಡೆದಿದೆ.<br /> <br /> ಶಾಸ್ತ್ರಿ ನಗರದವರಾದ ಇವರಲ್ಲಿ ಬಹುಪಾಲು ಮಂದಿ ದಕ್ಷಿಣ ಭಾರತದವರಾಗಿದ್ದಾರೆ. ಬಣ್ಣ ಎರಚಾಟದ ವೇಳೆ ಹಲವರಿಗೆ ವಾಕರಿಕೆ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತು.<br /> <br /> ಮಕ್ಕಳಲ್ಲಿ ಹೆಚ್ಚಿನವರು 8-10 ವರ್ಷದೊಳಗಿನವರಾಗಿದ್ದು, ಸೂಕ್ತ ಚಿಕಿತ್ಸೆಯ ಬಳಿಕ ಕೆಲವರನ್ನು ಮನೆಗೆ ಕಳುಹಿಸಲಾಯಿತು. ದಾಖಲಾದವರ ಆರೋಗ್ಯ ಸ್ಥಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.<br /> <br /> ಈ ಮಕ್ಕಳು ಚರ್ಮದ ವಸ್ತುಗಳನ್ನು ತಯಾರಿಸುವ ಸಮೀಪದ ಕಾರ್ಖಾನೆಯಿಂದ ಬಣ್ಣ ಅಥವಾ `ಡೈ~ಗಳನ್ನು ಕದ್ದು ತಂದು ಎರಚಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಅವರ ಬಳಿ ಇದ್ದ ಡೈಯನ್ನು ವಶಪಡಿಸಿಕೊಳ್ಳಲಾಗಿದ್ದು, ರಾಸಾಯನಿಕ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>