<p><strong>ಬೆಂಗಳೂರು:</strong> ‘ಅನುಭವದ ನೆಲೆಯಲ್ಲಿ ಹುಟ್ಟಿಕೊಳ್ಳುವ ಕಾವ್ಯ ಶಾಶ್ವತವಾಗಿ ಉಳಿಯುತ್ತದೆ’ ಎಂದು ಹಿರಿಯ ಸಾಹಿತಿ ಸಾ.ಶಿ.ಮರುಳಯ್ಯ ಅಭಿಪ್ರಾಯಪಟ್ಟರು. ಕರ್ನಾಟಕ ಸ್ವಾಭಿಮಾನಿ ವೇದಿಕೆಯು ಅತ್ತಿಮಬ್ಬೆ ಪ್ರತಿಷ್ಠಾನ ಟ್ರಸ್ಟ್ನ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯೋತ್ಸವ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ‘ಕಾಲಕ್ಕೆ ತಕ್ಕಂತೆ ಕವಿತೆಯ ವಿಷಯಗಳು ಬದಲಾಗುತ್ತಿದ್ದು, ಸೃಜನಶೀಲತೆಯ ಹೊಸ ರೂಪ ಪಡೆಯುತ್ತಿವೆ’ ಎಂದು ವ್ಯಾಖ್ಯಾನಿಸಿದರು.<br /> ಈ ಸಂದರ್ಭ ಪ್ರೊ. ಚಂದ್ರಶೇಖರ ಪಾಟೀಲ ಅವರ ‘ಚಂಪಾಲಹರಿ’, ನ್ಯಾಯಮೂರ್ತಿ ಮಹಿಪಾಲ ದೇಸಾಯಿ ಅವರ ‘ಕಹಅಲ್ ಜಿಬ್ರಾನ್: ಪ್ರವಾದಿ’, ಡಾ.ರಾಜಶೇಖರ ಮಠಪತಿ ಅವರ ‘ಇರುವಷ್ಟು ಕಾಲ ಇರುವಷ್ಟೇ ಕಾಲ’, ಡಾ.ಕೋ.ಶ್ರೀ ವಸಂತಕುಮಾರ ಅವರ ‘ಜೈನ ರಾಮಾಯಣ–ಭಾಗ 2’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಉಷಾ ಪಿ.ರೈ, ರಾಧಾ ಕುಲಕರ್ಣಿ, ಸುಜಾತ ವಿಶ್ವನಾಥ, ರೇಣುಕಾ ಹೆಳವರ, ಚಂದ್ರಶೇಖರ ಸಾಕೃವಂಶಿ ಅವರಿಂದ ಕವಿಗೋಷ್ಠಿ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಅನುಭವದ ನೆಲೆಯಲ್ಲಿ ಹುಟ್ಟಿಕೊಳ್ಳುವ ಕಾವ್ಯ ಶಾಶ್ವತವಾಗಿ ಉಳಿಯುತ್ತದೆ’ ಎಂದು ಹಿರಿಯ ಸಾಹಿತಿ ಸಾ.ಶಿ.ಮರುಳಯ್ಯ ಅಭಿಪ್ರಾಯಪಟ್ಟರು. ಕರ್ನಾಟಕ ಸ್ವಾಭಿಮಾನಿ ವೇದಿಕೆಯು ಅತ್ತಿಮಬ್ಬೆ ಪ್ರತಿಷ್ಠಾನ ಟ್ರಸ್ಟ್ನ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯೋತ್ಸವ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ‘ಕಾಲಕ್ಕೆ ತಕ್ಕಂತೆ ಕವಿತೆಯ ವಿಷಯಗಳು ಬದಲಾಗುತ್ತಿದ್ದು, ಸೃಜನಶೀಲತೆಯ ಹೊಸ ರೂಪ ಪಡೆಯುತ್ತಿವೆ’ ಎಂದು ವ್ಯಾಖ್ಯಾನಿಸಿದರು.<br /> ಈ ಸಂದರ್ಭ ಪ್ರೊ. ಚಂದ್ರಶೇಖರ ಪಾಟೀಲ ಅವರ ‘ಚಂಪಾಲಹರಿ’, ನ್ಯಾಯಮೂರ್ತಿ ಮಹಿಪಾಲ ದೇಸಾಯಿ ಅವರ ‘ಕಹಅಲ್ ಜಿಬ್ರಾನ್: ಪ್ರವಾದಿ’, ಡಾ.ರಾಜಶೇಖರ ಮಠಪತಿ ಅವರ ‘ಇರುವಷ್ಟು ಕಾಲ ಇರುವಷ್ಟೇ ಕಾಲ’, ಡಾ.ಕೋ.ಶ್ರೀ ವಸಂತಕುಮಾರ ಅವರ ‘ಜೈನ ರಾಮಾಯಣ–ಭಾಗ 2’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಉಷಾ ಪಿ.ರೈ, ರಾಧಾ ಕುಲಕರ್ಣಿ, ಸುಜಾತ ವಿಶ್ವನಾಥ, ರೇಣುಕಾ ಹೆಳವರ, ಚಂದ್ರಶೇಖರ ಸಾಕೃವಂಶಿ ಅವರಿಂದ ಕವಿಗೋಷ್ಠಿ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>