<p><strong>ನಿಪ್ಪಾಣಿ: </strong>‘ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಬರುವ ಚುನಾವಣೆಯಲ್ಲಿ ವಿಜಯ ಗಳಿಸಲಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಸಚಿವ ಪ್ರಕಾಶ ಹುಕ್ಕೇರಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ದಿನದಂದೇ ಅವರ ಆಯ್ಕೆ ನಿಶ್ಚಿತಗೊಂಡಿದೆ’ ಎಂದು ವಿಧಾನ ಪರಿಷತ್ ಸದಸ್ಯ ವೀರಕುಮಾರ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು."<br /> <br /> ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ಎಂಟು ತಿಂಗಳಿನಲ್ಲಿ ಬಡವರ, ದೀನದಲಿತರ ಪರ ಕೈಗೊಂಡ ₨ 750 ಕೋಟಿಗಳ ಯೋಜನೆಗಳು ಬರುವ ಚುನಾವಣೆಯಲ್ಲಿ ನೆರವಾಗಲಿವೆ. ಪಟ್ಟಣದಲ್ಲಿ ಬಿಜೆಪಿ ಪಕ್ಷದ ಕಾರ್ಯವೈಖರಿಗೆ ಬೇಸತ್ತ ನಾಗರಿಕರು ಕಾಂಗ್ರೆಸ್ ಜೊತೆಗೆ ಇರಲು ನಿರ್ಧರಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಪರಾಜಿತಗೊಂಡ ಮತಗಳ ಎರಡುಪಟ್ಟು ಮತಗಳಿಂದ ಸಚಿವ ಪ್ರಕಾಶ ಹುಕ್ಕೇರಿ ಜಯ ಗಳಿಸಲಿದ್ದಾರೆ ಎಂದರು.<br /> <br /> ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ‘ಬರುವ ಲೋಕಸಭೆ ಚುನಾವಣೆಯಲ್ಲಿ ಜೇಷ್ಠ ಧುರೀಣ ರಘುನಾಥರಾವ್ ಕದಮ್ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಸೇರಿ ಪ್ರಚಾರವನ್ನು ಚುರುಕುಗೊಳಿಸಲಿದ್ದೇವೆ. ಸಚಿವ ಪ್ರಕಾಶ ಹುಕ್ಕೇರಿ ಅವರು ನಾಮಪತ್ರ ಸಲ್ಲಿಸಿದ ನಂತರ ಏಪ್ರಿಲ್ 2 ರಂದು ಇಲ್ಲಿನ ಮರಾಠಾ ಮಂಡಳದ ಸಾಂಸ್ಕೃತಿಕ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಮೇಳ ನಡೆಸಲಾಗುವುದು’ ಎಂದರು.<br /> <br /> ಲಕ್ಷ್ಮಣರಾವ ಚಿಂಗಳೆ, ದಲಿತ ಮುಖಂಡ ಅಶೋಕ ಅಸೂದೆ, ನಗರಸಭೆ ಸದಸ್ಯ ರಾಜ ಪಠಾಣ ರಾಜೇಶ ಕದಮ್, ಪಂಕಜ ಪಾಟೀಲ, ಗೋಪಾಳ ನಾಯಿಕ, ಪುಷ್ಪಾತಾಯಿ ಕುಂಬಾರ, ಶೈಲಜಾ ಚಡಚಾಳೆ, ಕಿರಣ ಪಾಟೀಲ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಿಪ್ಪಾಣಿ: </strong>‘ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಬರುವ ಚುನಾವಣೆಯಲ್ಲಿ ವಿಜಯ ಗಳಿಸಲಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಸಚಿವ ಪ್ರಕಾಶ ಹುಕ್ಕೇರಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ದಿನದಂದೇ ಅವರ ಆಯ್ಕೆ ನಿಶ್ಚಿತಗೊಂಡಿದೆ’ ಎಂದು ವಿಧಾನ ಪರಿಷತ್ ಸದಸ್ಯ ವೀರಕುಮಾರ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು."<br /> <br /> ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ಎಂಟು ತಿಂಗಳಿನಲ್ಲಿ ಬಡವರ, ದೀನದಲಿತರ ಪರ ಕೈಗೊಂಡ ₨ 750 ಕೋಟಿಗಳ ಯೋಜನೆಗಳು ಬರುವ ಚುನಾವಣೆಯಲ್ಲಿ ನೆರವಾಗಲಿವೆ. ಪಟ್ಟಣದಲ್ಲಿ ಬಿಜೆಪಿ ಪಕ್ಷದ ಕಾರ್ಯವೈಖರಿಗೆ ಬೇಸತ್ತ ನಾಗರಿಕರು ಕಾಂಗ್ರೆಸ್ ಜೊತೆಗೆ ಇರಲು ನಿರ್ಧರಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಪರಾಜಿತಗೊಂಡ ಮತಗಳ ಎರಡುಪಟ್ಟು ಮತಗಳಿಂದ ಸಚಿವ ಪ್ರಕಾಶ ಹುಕ್ಕೇರಿ ಜಯ ಗಳಿಸಲಿದ್ದಾರೆ ಎಂದರು.<br /> <br /> ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ‘ಬರುವ ಲೋಕಸಭೆ ಚುನಾವಣೆಯಲ್ಲಿ ಜೇಷ್ಠ ಧುರೀಣ ರಘುನಾಥರಾವ್ ಕದಮ್ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಸೇರಿ ಪ್ರಚಾರವನ್ನು ಚುರುಕುಗೊಳಿಸಲಿದ್ದೇವೆ. ಸಚಿವ ಪ್ರಕಾಶ ಹುಕ್ಕೇರಿ ಅವರು ನಾಮಪತ್ರ ಸಲ್ಲಿಸಿದ ನಂತರ ಏಪ್ರಿಲ್ 2 ರಂದು ಇಲ್ಲಿನ ಮರಾಠಾ ಮಂಡಳದ ಸಾಂಸ್ಕೃತಿಕ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಮೇಳ ನಡೆಸಲಾಗುವುದು’ ಎಂದರು.<br /> <br /> ಲಕ್ಷ್ಮಣರಾವ ಚಿಂಗಳೆ, ದಲಿತ ಮುಖಂಡ ಅಶೋಕ ಅಸೂದೆ, ನಗರಸಭೆ ಸದಸ್ಯ ರಾಜ ಪಠಾಣ ರಾಜೇಶ ಕದಮ್, ಪಂಕಜ ಪಾಟೀಲ, ಗೋಪಾಳ ನಾಯಿಕ, ಪುಷ್ಪಾತಾಯಿ ಕುಂಬಾರ, ಶೈಲಜಾ ಚಡಚಾಳೆ, ಕಿರಣ ಪಾಟೀಲ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>