<p><strong>ಬೆಂಗಳೂರು: </strong>‘ಅಖಂಡತೆ, ಐಕ್ಯತೆ ಎತ್ತಿ ಹಿಡಿದ ನಾಯಕರು ಬಾಳಿದ ರಾಷ್ಟ್ರದಲ್ಲಿ ಅಭದ್ರತೆ, ಅಶಾಂತಿ, ಜಾತೀಯತೆ, ಭ್ರಷ್ಟತೆಯಿಂದ ನಾವೆಲ್ಲರೂ ನಲುಗಿ ಹೋಗಿದ್ದೇವೆ’ ಎಂದು ಜಾನಪದ ತಜ್ಞ ಗೊ.ರು.ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದರು.<br /> <br /> ನೇತಾಜಿ ಸುಭಾಷಚಂದ್ರ ಬೋಸ್ ಅಭಿವೃದ್ದಿ ಮತ್ತು ಸಂಶೋಧನಾ ಟ್ರಸ್ಟ್ ವತಿಯಿಂದ ರಾಜರಾಜೇಶ್ವರಿನಗರದ ಸುಭಾಷ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುಭಾಷಚಂದ್ರ ಬೋಸ್ 120ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ‘ಸ್ವಾತಂತ್ರ್ಯ ಬಂದ ನಂತರದ ದಿನಗಳಲ್ಲಿ ನೈತಿಕತೆ ಕುಂದಿದೆ. ಜನ ಸಾಮಾನ್ಯರು ಬಳಲಿ ಬೆಂಡಾಗಿದ್ದಾರೆ. ನಿಜವಾದ ಸ್ವಾತಂತ್ರ್ಯ ನಮಗೆ ಸಿಕ್ಕಿಲ್ಲ. ಈವರೆಗೆ ನಮ್ಮನ್ನಾಳುವ ದೊರೆಗಳು, ಅಧಿಕಾರಿಗಳು ಅವರ ಸ್ವಾರ್ಥಕ್ಕೋಸ್ಕರ ನಮ್ಮನ್ನು ಬಳಸಿಕೊಂಡು ಕಸದಂತೆ ಬಿಸಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.<br /> <br /> ‘ಬ್ರಿಟಿಷ್ರಿಗಿಂತ ನಮ್ಮವರು ಮೂರು ಪಟ್ಟು ಭ್ರಷ್ಟತೆ, ಅನ್ಯಾಯದಲ್ಲಿ ತೊಡಗಿದ್ದಾರೆ. ರಾಷ್ಟ್ರದಲ್ಲಿ ಜಾತೀಯತೆ, ಕೋಮುವಾದ, ಭಯೋತ್ಪಾದನೆ ಹೆಚ್ಚಾಗಿದೆ. ಇದರ ವಿರುದ್ಧ ಹೋರಾಡಲು ಪ್ರಗತಿಪರ ಚಿಂತಕರು, ಸಾಹಿತಿಗಳು, ಯುವಹೋರಾಟಗಾರರು, ದೇಶಪ್ರೇಮಿಗಳು ಸೈನಿಕರಂತೆ ಮುಂದೆ ಬರಬೇಕಾಗಿದೆ’ ಎಂದು ಕರೆ ನೀಡಿದರು.<br /> <br /> ‘ನೇತಾಜಿ ಹೋರಾಟದ ಅರಿವು ಮೂಡಿಸಲು ರಾಷ್ಟ್ರದಲ್ಲೇ ರಾಜರಾಜೇಶ್ವರಿ ನಗರದಲ್ಲಿ ಏಳು ಎಕರೆ ಪ್ರದೇಶದಲ್ಲಿ ಸುಭಾಷ ಭವನ, ಸಂಶೋಧನಾ ಟ್ರಸ್ಟ್ ಪ್ರಾರಂಭಿಸಲಾಗಿದೆ’ ಎಂದು ಟ್ರಸ್ಟ್ನ ಸಂಸ್ಥಾಪಕ ಸಂಘಟನಾ ಕಾರ್ಯದರ್ಶಿ ಎಂ.ರಾಜ್ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಅಖಂಡತೆ, ಐಕ್ಯತೆ ಎತ್ತಿ ಹಿಡಿದ ನಾಯಕರು ಬಾಳಿದ ರಾಷ್ಟ್ರದಲ್ಲಿ ಅಭದ್ರತೆ, ಅಶಾಂತಿ, ಜಾತೀಯತೆ, ಭ್ರಷ್ಟತೆಯಿಂದ ನಾವೆಲ್ಲರೂ ನಲುಗಿ ಹೋಗಿದ್ದೇವೆ’ ಎಂದು ಜಾನಪದ ತಜ್ಞ ಗೊ.ರು.ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದರು.<br /> <br /> ನೇತಾಜಿ ಸುಭಾಷಚಂದ್ರ ಬೋಸ್ ಅಭಿವೃದ್ದಿ ಮತ್ತು ಸಂಶೋಧನಾ ಟ್ರಸ್ಟ್ ವತಿಯಿಂದ ರಾಜರಾಜೇಶ್ವರಿನಗರದ ಸುಭಾಷ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುಭಾಷಚಂದ್ರ ಬೋಸ್ 120ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ‘ಸ್ವಾತಂತ್ರ್ಯ ಬಂದ ನಂತರದ ದಿನಗಳಲ್ಲಿ ನೈತಿಕತೆ ಕುಂದಿದೆ. ಜನ ಸಾಮಾನ್ಯರು ಬಳಲಿ ಬೆಂಡಾಗಿದ್ದಾರೆ. ನಿಜವಾದ ಸ್ವಾತಂತ್ರ್ಯ ನಮಗೆ ಸಿಕ್ಕಿಲ್ಲ. ಈವರೆಗೆ ನಮ್ಮನ್ನಾಳುವ ದೊರೆಗಳು, ಅಧಿಕಾರಿಗಳು ಅವರ ಸ್ವಾರ್ಥಕ್ಕೋಸ್ಕರ ನಮ್ಮನ್ನು ಬಳಸಿಕೊಂಡು ಕಸದಂತೆ ಬಿಸಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.<br /> <br /> ‘ಬ್ರಿಟಿಷ್ರಿಗಿಂತ ನಮ್ಮವರು ಮೂರು ಪಟ್ಟು ಭ್ರಷ್ಟತೆ, ಅನ್ಯಾಯದಲ್ಲಿ ತೊಡಗಿದ್ದಾರೆ. ರಾಷ್ಟ್ರದಲ್ಲಿ ಜಾತೀಯತೆ, ಕೋಮುವಾದ, ಭಯೋತ್ಪಾದನೆ ಹೆಚ್ಚಾಗಿದೆ. ಇದರ ವಿರುದ್ಧ ಹೋರಾಡಲು ಪ್ರಗತಿಪರ ಚಿಂತಕರು, ಸಾಹಿತಿಗಳು, ಯುವಹೋರಾಟಗಾರರು, ದೇಶಪ್ರೇಮಿಗಳು ಸೈನಿಕರಂತೆ ಮುಂದೆ ಬರಬೇಕಾಗಿದೆ’ ಎಂದು ಕರೆ ನೀಡಿದರು.<br /> <br /> ‘ನೇತಾಜಿ ಹೋರಾಟದ ಅರಿವು ಮೂಡಿಸಲು ರಾಷ್ಟ್ರದಲ್ಲೇ ರಾಜರಾಜೇಶ್ವರಿ ನಗರದಲ್ಲಿ ಏಳು ಎಕರೆ ಪ್ರದೇಶದಲ್ಲಿ ಸುಭಾಷ ಭವನ, ಸಂಶೋಧನಾ ಟ್ರಸ್ಟ್ ಪ್ರಾರಂಭಿಸಲಾಗಿದೆ’ ಎಂದು ಟ್ರಸ್ಟ್ನ ಸಂಸ್ಥಾಪಕ ಸಂಘಟನಾ ಕಾರ್ಯದರ್ಶಿ ಎಂ.ರಾಜ್ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>