<p><strong>ನವದೆಹಲಿ (ಪಿಟಿಐ):</strong> ‘ಐಪಿಎಲ್ 7ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಅವರನ್ನು ಖರೀದಿಸಲು ಮುಂದಾಗಿದ್ದೆವು. ಆದರೆ ಅವರ ಬೆಲೆ ಹೆಚ್ಚಾಗಿದ್ದರಿಂದ ನಾವು ಬಿಡ್ನಿಂದ ಹಿಂದೆ ಸರಿದೆವು. ಅವರು ತಂಡದಲ್ಲಿ ಇರಬೇಕಾಗಿತ್ತು’ ಎಂದು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸಹಾಯಕ ಕೋಚ್ ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.<br /> <br /> ‘ನಾವು ಹರಾಜಿನ ವೇಳೆ ಯುವರಾಜ್ ಅವರನ್ನು ಖರೀದಿಸಿ ಅವರನ್ನು ಮರಳಿ ತಂಡಕ್ಕೆ ಕರೆತರಲು ಉತ್ಸುಕರಾಗಿದ್ದೆವು. ಆದರೆ ಅವರ ಬೆಲೆ ಭಾರಿ ಪ್ರಮಾಣದಲ್ಲಿ ಏರಿತು. ನಾವು ಯುವಿಗೆ ಅಷ್ಟು ಮೊತ್ತ ನೀಡಿ ಖರೀದಿಸುವ ಸ್ಥಿತಿಯಲ್ಲಿರಲಿಲ್ಲ. ಅವರು ಈಗ ಆರ್ಸಿಬಿ ತಂಡದ ಪಾಲಾಗಿದ್ದು, ಅವರಿಗೆ ಶುಭ ಹಾರೈಸುತ್ತೇನೆ’ ಎಂದು ಅವರು ಹೇಳಿದ್ದಾರೆ.<br /> <br /> ‘ಆಸೀಸ್ ವೇಗಿ ಮಿಷೆಲ್ ಜಾನ್ಸನ್ ತಂಡದಲ್ಲಿರುವುದರಿಂದ ನಾವು ಸಂತಸಗೊಂಡಿದ್ದೇವೆ. ಅವರ ಅಂತರರಾಷ್ಟ್ರೀಯ ಅನುಭವ ತಂಡದ ನೆರವಿಗೆ ಬರಲಿದೆ. ನಾವು ಬಯಸ್ಸಿದ್ದ ಸಮರ್ಥ ವೇಗದ ಬೌಲರ್ನ ಸ್ಥಾನವನ್ನು ಅವರು ತುಂಬಲಿದ್ದಾರೆ ಎಂಬ ವಿಶ್ವಾಸವಿದೆ. ಜಾನ್ಸನ್ ಇರುವ ಕಾರಣ ತಂಡ ಸಮತೋಲನವನ್ನು ಕಾಯ್ದುಕೊಂಡಿದೆ’ ಎಂದು ಬಂಗಾರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ‘ಐಪಿಎಲ್ 7ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಅವರನ್ನು ಖರೀದಿಸಲು ಮುಂದಾಗಿದ್ದೆವು. ಆದರೆ ಅವರ ಬೆಲೆ ಹೆಚ್ಚಾಗಿದ್ದರಿಂದ ನಾವು ಬಿಡ್ನಿಂದ ಹಿಂದೆ ಸರಿದೆವು. ಅವರು ತಂಡದಲ್ಲಿ ಇರಬೇಕಾಗಿತ್ತು’ ಎಂದು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸಹಾಯಕ ಕೋಚ್ ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.<br /> <br /> ‘ನಾವು ಹರಾಜಿನ ವೇಳೆ ಯುವರಾಜ್ ಅವರನ್ನು ಖರೀದಿಸಿ ಅವರನ್ನು ಮರಳಿ ತಂಡಕ್ಕೆ ಕರೆತರಲು ಉತ್ಸುಕರಾಗಿದ್ದೆವು. ಆದರೆ ಅವರ ಬೆಲೆ ಭಾರಿ ಪ್ರಮಾಣದಲ್ಲಿ ಏರಿತು. ನಾವು ಯುವಿಗೆ ಅಷ್ಟು ಮೊತ್ತ ನೀಡಿ ಖರೀದಿಸುವ ಸ್ಥಿತಿಯಲ್ಲಿರಲಿಲ್ಲ. ಅವರು ಈಗ ಆರ್ಸಿಬಿ ತಂಡದ ಪಾಲಾಗಿದ್ದು, ಅವರಿಗೆ ಶುಭ ಹಾರೈಸುತ್ತೇನೆ’ ಎಂದು ಅವರು ಹೇಳಿದ್ದಾರೆ.<br /> <br /> ‘ಆಸೀಸ್ ವೇಗಿ ಮಿಷೆಲ್ ಜಾನ್ಸನ್ ತಂಡದಲ್ಲಿರುವುದರಿಂದ ನಾವು ಸಂತಸಗೊಂಡಿದ್ದೇವೆ. ಅವರ ಅಂತರರಾಷ್ಟ್ರೀಯ ಅನುಭವ ತಂಡದ ನೆರವಿಗೆ ಬರಲಿದೆ. ನಾವು ಬಯಸ್ಸಿದ್ದ ಸಮರ್ಥ ವೇಗದ ಬೌಲರ್ನ ಸ್ಥಾನವನ್ನು ಅವರು ತುಂಬಲಿದ್ದಾರೆ ಎಂಬ ವಿಶ್ವಾಸವಿದೆ. ಜಾನ್ಸನ್ ಇರುವ ಕಾರಣ ತಂಡ ಸಮತೋಲನವನ್ನು ಕಾಯ್ದುಕೊಂಡಿದೆ’ ಎಂದು ಬಂಗಾರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>