<p>ಸುರಪುರ: ನಾನು ಕೆಟ್ಟವನು ಎಂದು ಅಪಪ್ರಚಾರ ಮಾಡುವ ವಿರೋಧಿಗಳ ಮಾತಿಗೆ ಬೆಲೆ ಕೂಡಬೇಡಿ. ಅಭಿವೃದ್ದಿ ಕಾರ್ಯಗಳಲ್ಲಿ ರಾಜೀ ಮಾಡಿಕೊಳ್ಳುವ ಸ್ವಭಾವ ನನ್ನದಲ್ಲ. ಇದು ಕೆಲವರಿಗೆ ಕಹಿ ಎನಿಸಿರಬಹುದು. ನಾನು ಅಭಿವೃದ್ದಿಯ ಕನಸ್ಸುಳ್ಳವನು ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಹೇಳಿದರು.<br /> <br /> ಶನಿವಾರ ಇಲ್ಲಿನ ರಾಜೂಗೌಡ ಅವರ ಮನೆಯಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.<br /> ಈ ಭಾಗದ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾರಾಯಣಪುರ ಜಲಾಶಯ ವ್ಯಾಪ್ತಿಯ ಕಾಲುವೆಗಳ ನವೀಕರಣಕ್ಕೆ ₨4 ಸಾವಿರ ಕೋಟಿ ಹಣ ಒದಗಿಸಿರುವುದು ಬಿಜೆಪಿ ಕೂಡುಗೆಯಾಗಿದೆ ಎಂದು ಮಾಜಿ ಸಚಿವ ರಾಜೂಗೌಡ ಹೇಳಿದರು.<br /> <br /> ಈ ಭಾಗದ ಅಭಿವೃದ್ದಿಯ ಹಿನ್ನೆಲೆಯಲ್ಲಿ ಗುಲ್ಬರ್ಗದಲ್ಲಿ ನಡೆದ ಸಚಿವ ಸಂಪುಟ ಸಭೆೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದು ಬಿಜೆಪಿಯ ದೂರ ದೃಷ್ಟಿಯಾಗಿದೆ ಎಂದರು. ನೀರಾವರಿ ವಂಚಿತರಿಗೆ ನೀರಾವರಿ ಕಲ್ಪಿಸುವ ಉದ್ದೇಶದಿಂದ ಬೊೋನಾಳ ಸೆರಿದಂತೆ ವಿವಿಧ ಏತ ನೀರಾವರಿ ಮತ್ತು ಹಲವಾರು ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಒದಗಿಸಿದ್ದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದರು.<br /> <br /> ಕಾಂಗ್ರೆಸ್ನಲ್ಲಿ ಚಾಡಿಕೋರರಿಗೆ ಮಣೆ ಹಾಕಲಾಗುತ್ತದೆ. ಸರ್ವಾಧಿಕಾರಿ ಧೋರಣೆಯುಳ್ಳ ಕಾಂಗ್ರೆಸ್ನಿಂದ ದೇಶದ ಅಭಿವೃದ್ದಿ ಸಾಧ್ಯವಿಲ್ಲ. ಬಿಜೆಪಿಯಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ. ಈ ಬಾರಿ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶಿವನಗೌಡ ನಾಯಕರಿಗೆ ಮತ ನೀಡವಂತೆ ಮನವಿ ಮಾಡಿದರು.<br /> <br /> ಅಪ್ಪಾಸಾಹೇಬ ಪಾಟೀಲ, ಚಂದ್ರಶೇಖರ ಜಡಿಮರಳ, ಎಚ್.ಸಿ.ಪಾಟೀಲ, ಯಲ್ಲಪ್ಪ, ನಿಂಗಣ್ಣ ಬಾದ್ಯಾಪುರ, ಮಾತನಾಡಿದರು.<br /> ರಾಜಾ ಹನುಮಪ್ಪ ನಾಯಕ, ಚಂದ್ರಕಾಂತ ಕಡೇಚೂರು, ಭೀಮಾಶಂಕರ ಬಿಲ್ಲವ್, ವೇಣುಮಾಧವ, ರಾಜಾ ಜಯರಾಂ ನಾಯಕ, ಪಾರಪ್ಪ ಗುತ್ತೇದಾರ, ಕಲೀಮ ಜಹಾಗೀರದಾರ, ಪ್ರಕಾಶ ಗುತ್ತೇದಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುರಪುರ: ನಾನು ಕೆಟ್ಟವನು ಎಂದು ಅಪಪ್ರಚಾರ ಮಾಡುವ ವಿರೋಧಿಗಳ ಮಾತಿಗೆ ಬೆಲೆ ಕೂಡಬೇಡಿ. ಅಭಿವೃದ್ದಿ ಕಾರ್ಯಗಳಲ್ಲಿ ರಾಜೀ ಮಾಡಿಕೊಳ್ಳುವ ಸ್ವಭಾವ ನನ್ನದಲ್ಲ. ಇದು ಕೆಲವರಿಗೆ ಕಹಿ ಎನಿಸಿರಬಹುದು. ನಾನು ಅಭಿವೃದ್ದಿಯ ಕನಸ್ಸುಳ್ಳವನು ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಹೇಳಿದರು.<br /> <br /> ಶನಿವಾರ ಇಲ್ಲಿನ ರಾಜೂಗೌಡ ಅವರ ಮನೆಯಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.<br /> ಈ ಭಾಗದ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾರಾಯಣಪುರ ಜಲಾಶಯ ವ್ಯಾಪ್ತಿಯ ಕಾಲುವೆಗಳ ನವೀಕರಣಕ್ಕೆ ₨4 ಸಾವಿರ ಕೋಟಿ ಹಣ ಒದಗಿಸಿರುವುದು ಬಿಜೆಪಿ ಕೂಡುಗೆಯಾಗಿದೆ ಎಂದು ಮಾಜಿ ಸಚಿವ ರಾಜೂಗೌಡ ಹೇಳಿದರು.<br /> <br /> ಈ ಭಾಗದ ಅಭಿವೃದ್ದಿಯ ಹಿನ್ನೆಲೆಯಲ್ಲಿ ಗುಲ್ಬರ್ಗದಲ್ಲಿ ನಡೆದ ಸಚಿವ ಸಂಪುಟ ಸಭೆೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದು ಬಿಜೆಪಿಯ ದೂರ ದೃಷ್ಟಿಯಾಗಿದೆ ಎಂದರು. ನೀರಾವರಿ ವಂಚಿತರಿಗೆ ನೀರಾವರಿ ಕಲ್ಪಿಸುವ ಉದ್ದೇಶದಿಂದ ಬೊೋನಾಳ ಸೆರಿದಂತೆ ವಿವಿಧ ಏತ ನೀರಾವರಿ ಮತ್ತು ಹಲವಾರು ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಒದಗಿಸಿದ್ದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದರು.<br /> <br /> ಕಾಂಗ್ರೆಸ್ನಲ್ಲಿ ಚಾಡಿಕೋರರಿಗೆ ಮಣೆ ಹಾಕಲಾಗುತ್ತದೆ. ಸರ್ವಾಧಿಕಾರಿ ಧೋರಣೆಯುಳ್ಳ ಕಾಂಗ್ರೆಸ್ನಿಂದ ದೇಶದ ಅಭಿವೃದ್ದಿ ಸಾಧ್ಯವಿಲ್ಲ. ಬಿಜೆಪಿಯಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ. ಈ ಬಾರಿ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶಿವನಗೌಡ ನಾಯಕರಿಗೆ ಮತ ನೀಡವಂತೆ ಮನವಿ ಮಾಡಿದರು.<br /> <br /> ಅಪ್ಪಾಸಾಹೇಬ ಪಾಟೀಲ, ಚಂದ್ರಶೇಖರ ಜಡಿಮರಳ, ಎಚ್.ಸಿ.ಪಾಟೀಲ, ಯಲ್ಲಪ್ಪ, ನಿಂಗಣ್ಣ ಬಾದ್ಯಾಪುರ, ಮಾತನಾಡಿದರು.<br /> ರಾಜಾ ಹನುಮಪ್ಪ ನಾಯಕ, ಚಂದ್ರಕಾಂತ ಕಡೇಚೂರು, ಭೀಮಾಶಂಕರ ಬಿಲ್ಲವ್, ವೇಣುಮಾಧವ, ರಾಜಾ ಜಯರಾಂ ನಾಯಕ, ಪಾರಪ್ಪ ಗುತ್ತೇದಾರ, ಕಲೀಮ ಜಹಾಗೀರದಾರ, ಪ್ರಕಾಶ ಗುತ್ತೇದಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>