<p>ಮುಂಡರಗಿ: ‘ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿರುವ ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಂಸ್ಕಾರಯುತ ಬದುಕು ನಡೆಸಿದರೆ ಏಡ್ಸ್ನಂತಹ ಭಯಾನಕ ರೋಗಗಳನ್ನು ಸಮಾಜದಿಂದ ನಿರ್ಮೂಲನೆ ಮಾಡಬಹುದು’ ಎಂದು ಮುಖ್ಯಶಿಕ್ಷಕ ಶರಣು ಗೋಗೇರಿ ಅಭಿಪ್ರಾಯಪಟ್ಟರು.<br /> <br /> ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ತಾಲ್ಲೂಕಿನ ಮೇವುಂಡಿ ಗ್ರಾಮದ ಶಾಂತಾಬಾಯಿ ಮಲ್ಲಪ್ಪ ಕೊರ್ಲಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಏಡ್ಸ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ‘ದೇಶದಲ್ಲಿ ಹಲವಾರು ಅಮಾಯಕರು ತಮಗೆ ತಿಳಿಯದಂತೆ ಏಡ್ಸನಂತಹ ಭಯಾನಕ ಕಾಯಲೆಗಳಿಗೆ ಬಲಿಯಾಗುತ್ತಿದ್ದಾರೆ. ಏಡ್ಸ್ ರೋಗವನ್ನು ತಡೆಗಟ್ಟುವಲ್ಲಿ ಜನರು ವಿಶೇಷವಾಗಿ ಯುವ ಜನರು ಜಾಗೃತಿನ್ನು ಹೊಂದಬೇಕು. ಕರ್ನಾಟಕ ರಾಜ್ಯ ಸರಕಾರವು ಏಡ್ಸ್ ಪ್ರಿವೆನ್ಶೆನ್ ಸಂಸ್ಥೆಯ ಮೂಲಕ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಆ ಮೂಲಕ ಜನ ಜಾಗೃತಿ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಏರ್ಪಡಿಸುತ್ತಿದೆ ಎಂದು ಅವರು ತಿಳಿಸಿದರು.<br /> <br /> ನೀಲಗುಂದದ ಜೈ ಭೀಮ ಗೀಗೀ ಪದ ಜಾನಪದ ಕಲಾ ತಂಡದ ಬಸುವರಾಜ ಜಕ್ಕಮ್ಮನವರ ಹಾಗೂ ಸಂಗಡಿಗರು ಗೀಗೀ ಪದಗಳನ್ನು ಹಾಡಿ ಜನರನ್ನು ರಂಜಿಸಿದರು. ಎಸ್.ಡಿ.ಚಿಗರಿ, ವಿ.ಡಿ.ಶಿರಗುಂಪಿ, ಎ.ಬಿ.ರಂಗರೇಜಿ ಉಪಸ್ಥಿತರಿದ್ದರು. ಎಲ್.ಎಚ್.ಯಣ್ಣಿ ಸ್ವಾಗತಿಸಿದರು. ಪಿ.ಆರ್.ನಡುವಿನಹಳ್ಳಿ ನಿರೂಪಿಸಿದರು. ಎನ್. ಎಮ್. ಚಿತ್ರಗಾರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಂಡರಗಿ: ‘ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿರುವ ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಂಸ್ಕಾರಯುತ ಬದುಕು ನಡೆಸಿದರೆ ಏಡ್ಸ್ನಂತಹ ಭಯಾನಕ ರೋಗಗಳನ್ನು ಸಮಾಜದಿಂದ ನಿರ್ಮೂಲನೆ ಮಾಡಬಹುದು’ ಎಂದು ಮುಖ್ಯಶಿಕ್ಷಕ ಶರಣು ಗೋಗೇರಿ ಅಭಿಪ್ರಾಯಪಟ್ಟರು.<br /> <br /> ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ತಾಲ್ಲೂಕಿನ ಮೇವುಂಡಿ ಗ್ರಾಮದ ಶಾಂತಾಬಾಯಿ ಮಲ್ಲಪ್ಪ ಕೊರ್ಲಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಏಡ್ಸ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ‘ದೇಶದಲ್ಲಿ ಹಲವಾರು ಅಮಾಯಕರು ತಮಗೆ ತಿಳಿಯದಂತೆ ಏಡ್ಸನಂತಹ ಭಯಾನಕ ಕಾಯಲೆಗಳಿಗೆ ಬಲಿಯಾಗುತ್ತಿದ್ದಾರೆ. ಏಡ್ಸ್ ರೋಗವನ್ನು ತಡೆಗಟ್ಟುವಲ್ಲಿ ಜನರು ವಿಶೇಷವಾಗಿ ಯುವ ಜನರು ಜಾಗೃತಿನ್ನು ಹೊಂದಬೇಕು. ಕರ್ನಾಟಕ ರಾಜ್ಯ ಸರಕಾರವು ಏಡ್ಸ್ ಪ್ರಿವೆನ್ಶೆನ್ ಸಂಸ್ಥೆಯ ಮೂಲಕ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಆ ಮೂಲಕ ಜನ ಜಾಗೃತಿ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಏರ್ಪಡಿಸುತ್ತಿದೆ ಎಂದು ಅವರು ತಿಳಿಸಿದರು.<br /> <br /> ನೀಲಗುಂದದ ಜೈ ಭೀಮ ಗೀಗೀ ಪದ ಜಾನಪದ ಕಲಾ ತಂಡದ ಬಸುವರಾಜ ಜಕ್ಕಮ್ಮನವರ ಹಾಗೂ ಸಂಗಡಿಗರು ಗೀಗೀ ಪದಗಳನ್ನು ಹಾಡಿ ಜನರನ್ನು ರಂಜಿಸಿದರು. ಎಸ್.ಡಿ.ಚಿಗರಿ, ವಿ.ಡಿ.ಶಿರಗುಂಪಿ, ಎ.ಬಿ.ರಂಗರೇಜಿ ಉಪಸ್ಥಿತರಿದ್ದರು. ಎಲ್.ಎಚ್.ಯಣ್ಣಿ ಸ್ವಾಗತಿಸಿದರು. ಪಿ.ಆರ್.ನಡುವಿನಹಳ್ಳಿ ನಿರೂಪಿಸಿದರು. ಎನ್. ಎಮ್. ಚಿತ್ರಗಾರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>