<p><strong>ಬೆಂಗಳೂರು: </strong>ಉದ್ಯಮಿಯಾಗುವ ಕನಸು ನನಸಾಗಿಸಲು ಸೂಕ್ತ ಸಮಯ ಎಂಬು ದೇನೂ ಇರುವುದಿಲ್ಲ. ಉದ್ಯಮ ಆರಂಭಿ ಸಲು ಕಾಲ ಕೂಡಿಬರಬೇಕೆಂದೇನೂ ಇಲ್ಲ ಎಂದು ‘ನ್ಯೂ ಸಿಲ್ಕ್ರೂಟ್’ ಕಂಪೆನಿ ಪಾಲುದಾರ ಜಾಕೋಬ್ ಕುರಿಯನ್ ಹೇಳಿದರು.<br /> <br /> ಇಲ್ಲಿ ಇತ್ತೀಚೆಗೆ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿದ್ದ ಯುವ ಭಾರತೀಯ ಉದ್ಯಮಿಗಳ ಸಮಾವೇಶದಲ್ಲಿ ಮಾತನಾಡಿ, ಗೆಲುವು ಎಲ್ಲರಿಗೂ ಸುಲಭವಾಗಿ ದಕ್ಕದು. ಪ್ರತಿ ಗೆಲುವಿನ ಹಿಂದೆ ಕನಿಷ್ಠ ೮ ವೈಫಲ್ಯಗಳು ಇರುತ್ತವೆ. ಯುವ ಉದ್ಯಮಿ ಎದೆಗುಂದ ಬಾರದು. ಸಮಗ್ರತೆ, ಉನ್ನತ ಗುಣಮ ಟ್ಟಕ್ಕೆ ಆದ್ಯತೆ, ಸಹವರ್ತಿ ಕಂಪೆನಿಗಳ ಜತೆ ಮೈತ್ರಿ, ಸದಾಕಾಲ ಭವಿಷ್ಯದತ್ತ ಸ್ಪಷ್ಟ ನೋಟ ಯಶಸ್ಸಿನ ಒಳಗುಟ್ಟುಗಳು ಎಂದು ಅವರು ಕಿವಿಮಾತು ಹೇಳಿದರು.<br /> <br /> ಯುವ ಉದ್ಯಮಿಗಳಿಗೆ ಹಣವೇ ಮುಖ್ಯ ಚಾಲಕ ಶಕ್ತಿಯಾಗದಿರಲಿ. ನಡ ವಳಿಕೆಯೇ ಸದಾಕಾಲಕ್ಕೂ ಮುಖ್ಯ ಪ್ರೇರ ಣೆಯಾಗಿರಲಿ ಎಂದು ‘ಕರ್ಲಾನ್ ಲಿ.’ ವ್ಯವಸ್ಥಾಪಕ ನಿರ್ದೇಶಕ ಸುಧಾಕರ ಪೈ ಗಮನ ಸೆಳೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಉದ್ಯಮಿಯಾಗುವ ಕನಸು ನನಸಾಗಿಸಲು ಸೂಕ್ತ ಸಮಯ ಎಂಬು ದೇನೂ ಇರುವುದಿಲ್ಲ. ಉದ್ಯಮ ಆರಂಭಿ ಸಲು ಕಾಲ ಕೂಡಿಬರಬೇಕೆಂದೇನೂ ಇಲ್ಲ ಎಂದು ‘ನ್ಯೂ ಸಿಲ್ಕ್ರೂಟ್’ ಕಂಪೆನಿ ಪಾಲುದಾರ ಜಾಕೋಬ್ ಕುರಿಯನ್ ಹೇಳಿದರು.<br /> <br /> ಇಲ್ಲಿ ಇತ್ತೀಚೆಗೆ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿದ್ದ ಯುವ ಭಾರತೀಯ ಉದ್ಯಮಿಗಳ ಸಮಾವೇಶದಲ್ಲಿ ಮಾತನಾಡಿ, ಗೆಲುವು ಎಲ್ಲರಿಗೂ ಸುಲಭವಾಗಿ ದಕ್ಕದು. ಪ್ರತಿ ಗೆಲುವಿನ ಹಿಂದೆ ಕನಿಷ್ಠ ೮ ವೈಫಲ್ಯಗಳು ಇರುತ್ತವೆ. ಯುವ ಉದ್ಯಮಿ ಎದೆಗುಂದ ಬಾರದು. ಸಮಗ್ರತೆ, ಉನ್ನತ ಗುಣಮ ಟ್ಟಕ್ಕೆ ಆದ್ಯತೆ, ಸಹವರ್ತಿ ಕಂಪೆನಿಗಳ ಜತೆ ಮೈತ್ರಿ, ಸದಾಕಾಲ ಭವಿಷ್ಯದತ್ತ ಸ್ಪಷ್ಟ ನೋಟ ಯಶಸ್ಸಿನ ಒಳಗುಟ್ಟುಗಳು ಎಂದು ಅವರು ಕಿವಿಮಾತು ಹೇಳಿದರು.<br /> <br /> ಯುವ ಉದ್ಯಮಿಗಳಿಗೆ ಹಣವೇ ಮುಖ್ಯ ಚಾಲಕ ಶಕ್ತಿಯಾಗದಿರಲಿ. ನಡ ವಳಿಕೆಯೇ ಸದಾಕಾಲಕ್ಕೂ ಮುಖ್ಯ ಪ್ರೇರ ಣೆಯಾಗಿರಲಿ ಎಂದು ‘ಕರ್ಲಾನ್ ಲಿ.’ ವ್ಯವಸ್ಥಾಪಕ ನಿರ್ದೇಶಕ ಸುಧಾಕರ ಪೈ ಗಮನ ಸೆಳೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>