<p><strong>ನವದೆಹಲಿ (ಪಿಟಿಐ</strong>): ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ನಂಟಿನ ಆರೋಪದಡಿ ದೇಶದ ವಿವಿಧೆಡೆ ಬಂಧನಕ್ಕೆ ಒಳಗಾಗಿರುವ 12 ಶಂಕಿತ ಉಗ್ರರರನ್ನು ವಿಶೇಷ ನ್ಯಾಯಾಲಯವು ಫೆಬ್ರುವರಿ 5ರ ವರೆಗೂ ರಾಷ್ಟ್ರೀಯ ತನಿಖಾ ತಂಡದ ವಶಕ್ಕೆ ನೀಡಿದೆ.<br /> <br /> ರಹಸ್ಯ ವಿಚಾರಣೆಯ ವೇಳೆ, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ವಶಕ್ಕೆ ನೀಡುವಂತೆ ಎನ್ಐಎ ವಿಶೇಷ ನ್ಯಾಯಾಧೀಶ ಅಮರನಾಥ್ ಅವರನ್ನು ತನಿಖಾ ದಳ ಕೋರಿತು. ಆದರೆ, ನ್ಯಾಯಾಲಯವು 11 ದಿನಗಳ ಕಾಲ ಆರೋಪಿಗಳನ್ನು ಅವರ ವಶಕ್ಕೆ ನೀಡಿತು.</p>.<p>‘ಪ್ರಾಥಮಿಕ ವಿಚಾರಣೆಯ ವೇಳೆ, ಎಲ್ಲಾ ಆರೋಪಿಗಳು ಐಎಸ್ ಉಗ್ರ ಸಂಘಟನೆ ಜತೆಗಿನ ತಮ್ಮ ನಂಟಿನ ಕುರಿತ ಬಹಿರಂಗ ಪಡಿಸಿದ್ದಾರೆ’ ಎಂದು ನ್ಯಾಯಾಲಯಕ್ಕೆ ಎನ್ಐಎ ತಿಳಿಸಿತು.</p>.<p>12 ಆರೋಪಿಗಳಲ್ಲಿ 10 ಜನರ ಪರವಾಗಿ ಹಾಜರಾಗಿದ್ದ ವಕೀಲ ಎಂ.ಎಸ್.ಖಾನ್, ಆರೋಪಿಗಳನ್ನು ವಶಕ್ಕೆ ಪಡೆಯುವ ಎನ್ಐಎ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದರು.</p>.<p>ಆರೋಪಿಗಳ ವಿರುದ್ಧ ಭಯೋತ್ಪಾದನಾ ಶಂಕೆಯ ಆಧಾರದಲ್ಲಿ ಎನ್ಐಎ ಎಫ್ಐಆರ್ ದಾಖಲಿಸಿದೆ. ಆದರೆ, ಅವರು ಯಾವುದೇ ಉಗ್ರ ಕೃತ್ಯ ಎಸೆಗಿಲ್ಲ ಎಂದು ವಾದಿಸಿದರು.</p>.<p>ಅಲ್ಲದೇ, ಜನವರಿ 22 ಹಾಗೂ 23 ರಂದು ಆರೋಪಿಗಳನ್ನು ತನಿಖಾ ದಳವು ಬಂಧಿಸಿತ್ತು. ಅಂದಿನಿಂದ ಈ ತನಕ ಅವರು ಎನ್ಐಎ ವಶದಲ್ಲಿದ್ದರು. ಆದ್ದರಿಂದ ಆರೋಪಿಗಳನ್ನು ಮತ್ತೆ ತನಿಖಾ ದಳದ ವಶಕ್ಕೆ ನೀಡುವ ಅಗತ್ಯವಿಲ್ಲ ಎಂದೂ ವಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ</strong>): ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ನಂಟಿನ ಆರೋಪದಡಿ ದೇಶದ ವಿವಿಧೆಡೆ ಬಂಧನಕ್ಕೆ ಒಳಗಾಗಿರುವ 12 ಶಂಕಿತ ಉಗ್ರರರನ್ನು ವಿಶೇಷ ನ್ಯಾಯಾಲಯವು ಫೆಬ್ರುವರಿ 5ರ ವರೆಗೂ ರಾಷ್ಟ್ರೀಯ ತನಿಖಾ ತಂಡದ ವಶಕ್ಕೆ ನೀಡಿದೆ.<br /> <br /> ರಹಸ್ಯ ವಿಚಾರಣೆಯ ವೇಳೆ, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ವಶಕ್ಕೆ ನೀಡುವಂತೆ ಎನ್ಐಎ ವಿಶೇಷ ನ್ಯಾಯಾಧೀಶ ಅಮರನಾಥ್ ಅವರನ್ನು ತನಿಖಾ ದಳ ಕೋರಿತು. ಆದರೆ, ನ್ಯಾಯಾಲಯವು 11 ದಿನಗಳ ಕಾಲ ಆರೋಪಿಗಳನ್ನು ಅವರ ವಶಕ್ಕೆ ನೀಡಿತು.</p>.<p>‘ಪ್ರಾಥಮಿಕ ವಿಚಾರಣೆಯ ವೇಳೆ, ಎಲ್ಲಾ ಆರೋಪಿಗಳು ಐಎಸ್ ಉಗ್ರ ಸಂಘಟನೆ ಜತೆಗಿನ ತಮ್ಮ ನಂಟಿನ ಕುರಿತ ಬಹಿರಂಗ ಪಡಿಸಿದ್ದಾರೆ’ ಎಂದು ನ್ಯಾಯಾಲಯಕ್ಕೆ ಎನ್ಐಎ ತಿಳಿಸಿತು.</p>.<p>12 ಆರೋಪಿಗಳಲ್ಲಿ 10 ಜನರ ಪರವಾಗಿ ಹಾಜರಾಗಿದ್ದ ವಕೀಲ ಎಂ.ಎಸ್.ಖಾನ್, ಆರೋಪಿಗಳನ್ನು ವಶಕ್ಕೆ ಪಡೆಯುವ ಎನ್ಐಎ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದರು.</p>.<p>ಆರೋಪಿಗಳ ವಿರುದ್ಧ ಭಯೋತ್ಪಾದನಾ ಶಂಕೆಯ ಆಧಾರದಲ್ಲಿ ಎನ್ಐಎ ಎಫ್ಐಆರ್ ದಾಖಲಿಸಿದೆ. ಆದರೆ, ಅವರು ಯಾವುದೇ ಉಗ್ರ ಕೃತ್ಯ ಎಸೆಗಿಲ್ಲ ಎಂದು ವಾದಿಸಿದರು.</p>.<p>ಅಲ್ಲದೇ, ಜನವರಿ 22 ಹಾಗೂ 23 ರಂದು ಆರೋಪಿಗಳನ್ನು ತನಿಖಾ ದಳವು ಬಂಧಿಸಿತ್ತು. ಅಂದಿನಿಂದ ಈ ತನಕ ಅವರು ಎನ್ಐಎ ವಶದಲ್ಲಿದ್ದರು. ಆದ್ದರಿಂದ ಆರೋಪಿಗಳನ್ನು ಮತ್ತೆ ತನಿಖಾ ದಳದ ವಶಕ್ಕೆ ನೀಡುವ ಅಗತ್ಯವಿಲ್ಲ ಎಂದೂ ವಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>