<p><strong>ನವದೆಹಲಿ (ಪಿಟಿಐ): </strong>ಎಸ್ಸಾರ್ ಸಮೂಹ ಹಾಗೂ ಲೂಪ್ ಟೆಲಿಕಾಂ ಪ್ರವರ್ತಕರಾದ ಅಂಶುಮಾನ್, ರವಿ ರುಯಾ ಮತ್ತು ಐ.ಪಿ.ಖೈತಾನ್, ಕಿರಣ್ ಖೈತಾನ್ ಅವರು, 2ಜಿ ತರಂಗಾಂತರ ಹಂಚಿಕೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್ಗೆ ಶುಕ್ರವಾರ ಗೈರು ಹಾಜರಿದ್ದರು.<br /> <br /> ಇವರಿಗೆಲ್ಲ ಸಮನ್ಸ್ ಜಾರಿ ಮಾಡಿಲ್ಲ ಎಂದು ಅವರ ವಕೀಲರು ಕೋರ್ಟ್ಗೆ ತಿಳಿಸಿದರು. `ನನ್ನ ಕಕ್ಷಿದಾರನ ನಿವಾಸಕ್ಕೆ ಸಮನ್ಸ್ ಕಳುಹಿಸಿಲ್ಲ. ಅದೂ ಅಲ್ಲದೆ ಅವರು ವಿದೇಶದಲ್ಲಿ ಇರುವುದರಿಂದ ನ್ಯಾಯಾಲಯದ ಮುಂದೆ ಹಾಜರಾಗಲು ಒಂದು ತಿಂಗಳು ವಿನಾಯಿತಿ ಕೇಳುತ್ತಿದ್ದಾರೆ~ ಎಂದು ಎಸ್ಸಾರ್ ಸಮೂಹದ ನಿರ್ದೇಶಕ ವಿಕಾಸ್ ಸರಾಫ್ ಪರ ವಕೀಲ ಸಿದ್ಧಾರ್ಥ ಲೂಥ್ರಾ, ಸಿಬಿಐ ವಿಶೇಷ ನ್ಯಾಯಾಧೀಶರಾದ ಒ.ಪಿ.ಸೈನಿ ಅವರಿಗೆ ತಿಳಿಸಿದರು.<br /> <br /> ಈ ಹಿನ್ನೆಲೆಯಲ್ಲಿ ಪ್ರವರ್ತಕರಿಗೆ ಹೊಸದಾಗಿ ಸಮನ್ಸ್ ಜಾರಿ ಮಾಡಲಾಯಿತು. ಈ ಮೊದಲು ಡಿಸೆಂಬರ್ 21ರಂದು ಸಿಬಿಐ ವಿಶೇಷ ನ್ಯಾಯಾಧೀಶರು ಅಂಶುಮಾನ್, ರವಿ ರುಯಾ, ಐ.ಪಿ.ಖೈತಾನ್, ಕಿರಣ್ ಖೈತಾನ್, ವಿಕಾಸ್ ಸರಾಫ್ ಮತ್ತು ಮೂರು ಸಂಸ್ಥೆಗಳಿಗೆ ಸಮನ್ಸ್ ಜಾರಿಗೊಳಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಎಸ್ಸಾರ್ ಸಮೂಹ ಹಾಗೂ ಲೂಪ್ ಟೆಲಿಕಾಂ ಪ್ರವರ್ತಕರಾದ ಅಂಶುಮಾನ್, ರವಿ ರುಯಾ ಮತ್ತು ಐ.ಪಿ.ಖೈತಾನ್, ಕಿರಣ್ ಖೈತಾನ್ ಅವರು, 2ಜಿ ತರಂಗಾಂತರ ಹಂಚಿಕೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್ಗೆ ಶುಕ್ರವಾರ ಗೈರು ಹಾಜರಿದ್ದರು.<br /> <br /> ಇವರಿಗೆಲ್ಲ ಸಮನ್ಸ್ ಜಾರಿ ಮಾಡಿಲ್ಲ ಎಂದು ಅವರ ವಕೀಲರು ಕೋರ್ಟ್ಗೆ ತಿಳಿಸಿದರು. `ನನ್ನ ಕಕ್ಷಿದಾರನ ನಿವಾಸಕ್ಕೆ ಸಮನ್ಸ್ ಕಳುಹಿಸಿಲ್ಲ. ಅದೂ ಅಲ್ಲದೆ ಅವರು ವಿದೇಶದಲ್ಲಿ ಇರುವುದರಿಂದ ನ್ಯಾಯಾಲಯದ ಮುಂದೆ ಹಾಜರಾಗಲು ಒಂದು ತಿಂಗಳು ವಿನಾಯಿತಿ ಕೇಳುತ್ತಿದ್ದಾರೆ~ ಎಂದು ಎಸ್ಸಾರ್ ಸಮೂಹದ ನಿರ್ದೇಶಕ ವಿಕಾಸ್ ಸರಾಫ್ ಪರ ವಕೀಲ ಸಿದ್ಧಾರ್ಥ ಲೂಥ್ರಾ, ಸಿಬಿಐ ವಿಶೇಷ ನ್ಯಾಯಾಧೀಶರಾದ ಒ.ಪಿ.ಸೈನಿ ಅವರಿಗೆ ತಿಳಿಸಿದರು.<br /> <br /> ಈ ಹಿನ್ನೆಲೆಯಲ್ಲಿ ಪ್ರವರ್ತಕರಿಗೆ ಹೊಸದಾಗಿ ಸಮನ್ಸ್ ಜಾರಿ ಮಾಡಲಾಯಿತು. ಈ ಮೊದಲು ಡಿಸೆಂಬರ್ 21ರಂದು ಸಿಬಿಐ ವಿಶೇಷ ನ್ಯಾಯಾಧೀಶರು ಅಂಶುಮಾನ್, ರವಿ ರುಯಾ, ಐ.ಪಿ.ಖೈತಾನ್, ಕಿರಣ್ ಖೈತಾನ್, ವಿಕಾಸ್ ಸರಾಫ್ ಮತ್ತು ಮೂರು ಸಂಸ್ಥೆಗಳಿಗೆ ಸಮನ್ಸ್ ಜಾರಿಗೊಳಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>