ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22ಕ್ಕೆ ಸರ್ಕಾರಿ ನೌಕರರ ಸಂಘದ ಚುನಾವಣೆ

Last Updated 19 ಜುಲೈ 2013, 10:58 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ಸರ್ಕಾರಿ ನೌಕರರ ಸಂಘದ 2013ನೇ ಅವಧಿಯ ಕಾರ್ಯಕಾರಿ ಸಮಿತಿಯ ಚುನಾವಣೆಯು ಜುಲೈ 22ರಂದು ನಡೆಯಲಿದೆ.
ತಾಲ್ಲೂಕಿನ 24 ಇಲಾಖೆಗಳಿಂದ 55 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 15 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಣದಲ್ಲಿ 30 ಅಭ್ಯರ್ಥಿಗಳು ಇದ್ದಾರೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಒಟ್ಟು 901 ಮತದಾರರಿದ್ದು, ನಗರದ ಗುರುಭವನ ಹಾಗೂ ಉರ್ದು ಸಿಆರ್‌ಪಿ ಕೇಂದ್ರದಲ್ಲಿ ಮತದಾನ ನಡೆಯಲಿದೆ. ಉಳಿದ ಇಲಾಖೆಗಳ ಮತದಾನ ಸರ್ಕಾರಿ ನೌಕರರ ಭವನದ ಮೂರು ಮತಗಟ್ಟೆಗಳಲ್ಲಿ ನಡೆಯಲಿದೆ. ಮತದಾನ ಅಂದು ಬೆಳಿಗ್ಗೆ 11ರಿಂದ ಸಂಜೆ 4ರವೆರೆಗೆ ನಡೆಯಲಿದೆ.

2013-2018ರ ಅವಧಿಗೆ ಅವಿರೋಧವಾಗಿ ಕೃಷಿ ಇಲಾಖೆಯಿಂದ ಶಾಂತಾಬಾಯಿ, ಪಶುಸಂಗೋಪನಾ ಇಲಾಖೆಯಿಂದ ಲಕ್ಷ್ಮೀ ಭಾಗವತ್, ವಾಣಿಜ್ಯ ತೆರಿಗೆ ಮತ್ತು ಮೀನುಗಾರಿಕೆ ಇಲಾಖೆಯಿಂದ ಶಶಿಕುಮಾರ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಇಲಾಖೆಯಿಂದ ಸಿ.ಲಕ್ಷ್ಮೀನಾರಾಯಣ ಆಯ್ಕೆ ಆಗಿದ್ದಾರೆ.

ಅಬಕಾರಿ ಮತ್ತು ಕಾರ್ಮಿಕ ಇಲಾಖೆಯಿಂದ ವಿ.ಸಿ.ವೀರಭದ್ರಪ್ಪ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಎಂ.ಮೈಲಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಪ ವಿಭಾಗೀಯ ಆಸ್ಪತ್ರೆಯಿಂದ ಮಾ.ಸ. ನಂಜುಂಡಸ್ವಾಮಿ, ವೈ.ಮೋಹನ್ ಆಯ್ಕೆಯಾಗಿದ್ದಾರೆ.

ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಿಂದ ಅರುಣ ಕುಮಾರ್, ಮೋಟಾರ್ ವಾಹನಗಳು, ಪೊಲೀಸ್ ಆಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಉಮೇಶ್ ಖಜಾನೆ ಇಲಾಖೆಯಿಂದ ಕೆ.ವಿಜಯಕುಮಾರ್, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳು ಹಾಗೂ ನೋಂದಣಿ ಮುದ್ರಾಂಕ ಇಲಾಖೆಯಿಂದ ಕೆ.ಟಿ.ನಾಯ್ಕ, ನ್ಯಾಯಾಂಗ ಇಲಾಖೆಯಿಂದ ಎಚ್.ಜಿ.ರಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಲ್ಲಿಕಾರ್ಜುನಪ್ಪ ಲಿಂಗಾಪುರ, ಬಂದರು ಇಲಾಖೆಯಿಂದ ಎಚ್.ಆರ್.ಈಶ್ವರ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಎಂ.ರಾಮಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

12 ಸ್ಥಾನಗಳಿಗೆ ಚುನಾವಣೆ
ಭದ್ರಾವತಿ: ಇಲ್ಲಿನ ರಾಜ್ಯ ಸರ್ಕಾರಿ ನೌಕರರ ಸಂಘದ 6 ಇಲಾಖೆಯ 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಬಿ.ಎಸ್.ಮೈಲಾರಯ್ಯ ತಿಳಿಸಿದ್ದಾರೆ.

ತಾಲ್ಲೂಕಿನ 23 ಇಲಾಖೆಯ 30 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಅದರಲ್ಲಿ 17 ಇಲಾಖೆಯ 18 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಉಳಿದ ಸ್ಥಾನಗಳಿಗೆ ಜುಲೈ 22ರಂದು ಸಂಚಿಯ ಹೊನ್ನಮ್ಮ ಬಾಲಿಕಾ ಪ್ರೌಢಶಾಲೆಯಲ್ಲಿ ಚುನಾವಣೆ ನಡೆಯಲಿದೆ.
ಆಯ್ಕೆಯಾದ ನಿರ್ದೇಶಕರ ವಿವರ: ವೈ.ಕಾಶಿನಾಥ ಒಂಟೇಕರ್ (ಕೃಷಿ), ಎಸ್.ಮಾರ್ಕಂಡಯ್ಯ (ವಾಣಿಜ್ಯ ಹಾಗೂ ಮೀನುಗಾರಿಕೆ), ಆರ್.ಕೇಶವಯ್ಯ (ಸಾಂಖ್ಯಿಕ ಹಾಗೂ ನಾಗರಿಕ ಸರಬರಾಜು), ಜೆ.ಮಂಜುನಾಥ್, ಸುಕುಮಾರ್ (ಲೋಕೋಪಯೋಗಿ), ಎ.ಕೆ.ಚಂದ್ರಪ್ಪ (ಪ.ಪೂ ಕಾಲೇಜು), ಕೆ.ನಾಗರಾಜ್ (ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತ), ಎಚ್.ಕೆ.ನಂಜಪ್ಪ (ಅರಣ್ಯ), ಎಂ.ಡಿ.ಮಲ್ಲಿಕಾರ್ಜುನ (ಅಬಕಾರಿ ಮತ್ತು ಕಾರ್ಮಿಕ), ಎಸ್.ಜಿ.ಸುರೇಶ್ (ತೋಟಗಾರಿಕೆ ಮತ್ತು ರೇಷ್ಮೆ), ಸಿ.ಚಂದ್ರಪ್ಪ (ಖಜಾನೆ), ಬಿ.ಚನ್ನಕೇಶವಮೂರ್ತಿ (ಭೂಮಾಪನ ಕಂದಾಯ ಮತ್ತು ದಾಖಲೆಗಳ ನೋಂದಣಿ ಮುದ್ರಾಂಕ), ಆರ್. ಜನಾರ್ಧನ (ಮಾರುಕಟ್ಟೆ ಮತ್ತು ಎಪಿಎಂಸಿ), ಡಿ.ಆರ್.ಹರೀಶ್‌ಕುಮಾರ್ (ನ್ಯಾಯಾಂಗ), ಎನ್.ಕೃಷ್ಣಪ್ಪ (ತಾಲ್ಲೂಕು ಪಂಚಾಯ್ತಿ), ಡಿ.ಕೇಶವ  ಮೂರ್ತಿ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್), ಎಂ.ಉಮಾದೇವಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ), ಕೆ.ಕೃಷ್ಣಮೂರ್ತಿ (ಉದ್ಯೋಗ ಮತ್ತು ತರಬೇತಿ).

ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು: ಡಿ.ಎಸ್.ರಾಜಪ್ಪ, ಎಸ್.ಎನ್. ಶಿವಪ್ಪ (ಪಶು ಸಂಗೋಪನಾ)-1, ಕೆ.ಎಸ್. ಗೋಪಾಲಕೃಷ್ಣ, ವಿ.ನಾಗರಾಜ, ನಾರಾಯಣಗೌಡ, ಎಸ್.ಕೆ.ಬಸವ ರಾಜ ಗೌಡ, ಎಂ.ಕೆ. ಯಶೋಧ (ಕಂದಾಯ)-2, ಓಂಕಾರಪ್ಪ, ಎಸ್. ಕೂಬಾನಾಯ್ಕ, ತಿಪ್ಪೇಸ್ವಾಮಿ, ಎಂ.ಎಸ್. ಬಸವರಾಜ, ಭಾರತಿ, ಮಲ್ಲಿಕಾರ್ಜುನ, ಯು.ಮಹಾದೇವಪ್ಪ, ಮುಕ್ತಿಯಾರ್ ಅಹಮದ್, ಎಸ್.ಕೆ.ಮೋಹನ್, ಲೋಲಾಕ್ಷಿ, ಎ.ಕೆ.ಲಿಂಗಾರಾಜು, ಕೆ.ಎಂ. ಶಿವಕುಮಾರ್, ಸಿ.ಎ.ಸುನೀಲ್‌ಕುಮಾರ್ (ಪ್ರಾಥಮಿಕ ಹಿರಿಯ ಶಾಲೆಗಳು)-3, ಎಚ್. ಆಂಜನೇಯ, ಜೆ.ಕೀರ್ತಿ, ಪಿ.ನಾಗರಾಜಪ್ಪ, ಜಿ.ಎಚ್. ಪ್ರಭು, ಮೂರ್ತಿ, ಹಸೀನಾ ಪರ್ವೀನ್ (ಪ್ರೌಢ ಶಾಲೆಗಳು)-1, ತುಳಸಿಬಾಯಿ, ಬಿ.ವಿ.ಪ್ರಕಾಶ್, ಕೆ.ಪ್ರಭಾಕರ, ಎಂ.ಮಲ್ಲಮ್ಮ, ಬಿ.ಕೆ.ಮೋಹನ್‌ಕುಮಾರ್, ಆರ್.ಎನ್.ಮಂಜುನಾಥ, ಕೆ.ಬಿ. ರಾಜು, ಬಿ.ವಿ. ರೇವತಿ, ವಿಪುಲ, ಶಂಕರ, ಎಂ.ಸೆಲ್ವಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ)-4, ಕೆ.ನಾಗರಾಜ, ಎ.ಜೆ.ರಂಗನಾಥ ಪ್ರಸಾದ್, ಬಿ.ಎಸ್.ವೆಂಕಟೇಶ್ವರಪ್ಪ (ತಾಂತ್ರಿಕ ಶಿಕ್ಷಣ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT