<p><strong>ಬೀದರ್</strong>: ವಚನ ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸುವಲ್ಲಿ ಪ್ರಮುಖರಾದ ಡಾ. ಫ.ಗು ಹಳಕಟ್ಟಿ ಅವರ ನೆನಪಿನಲ್ಲಿ ಆಯೋಜಿಸಲಿರುವ ‘ಹಳಕಟ್ಟಿ –ವಚನೋತ್ಸವ’ದ ಏಳನೇ ರಾಷ್ಟ್ರೀಯ ಸಮ್ಮೇಳನ ಇದೇ 28 ಮತ್ತು 29ರಂದು ನಗರದಲ್ಲಿ ನಡೆಯಲಿದ್ದು, ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಸಮ್ಮೇಳನಾಧ್ಯಕ್ಷರಾಗಿದ್ದಾರೆ.<br /> <br /> ಎರಡು ದಿನ ನಗರದ ರಂಗಮಂದಿರದಲ್ಲಿ ಸಮ್ಮೇಳನದ ನಿಮಿತ್ತ ವಿವಿಧ ಗೋಷ್ಠಿಗಳು, ವಚನ ಗಾಯನ, ನಡೆಯಲಿದ್ದು, ಇದೇ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರಗಳ ಐವರು ಪ್ರಮುಖರಿಗೆ ‘ಹಳಗಟ್ಟಿ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.<br /> <br /> ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿವರಗಳನ್ನು ನೀಡಿದ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ, ಶಾಸಕ ಡಾ.ಗುರುಪಾದಪ್ಪ ನಾಗಮಾರಪಳ್ಳಿ, ಇದೇ ಮೊದಲಿಗೆ ಬೀದರ್ನಲ್ಲಿ ಇಂಥ ಸಮ್ಮೇಳನ ನಡೆಯುತ್ತಿದೆ. ಮೊದಲ ದಿನ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯುತ್ತದೆ ಎಂದರು.<br /> <br /> ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು, ಹಾರಕೂಡ ಮಠದ ಚನ್ನವೀರ ಶಿವಾಚಾರ್ಯ ಸಾನಿಧ್ಯದಲ್ಲಿ ವಹಿಸಲಿದ್ದು, ಉಸ್ತುವಾರಿ ಸಚಿವೆ ಉಮಾಶ್ರೀ ಉದ್ಘಾಟಿಸುವರು ಎಂದರು.<br /> <br /> ಸಮ್ಮೇಳನದ ನಿಮಿತ್ತ ಉದ್ಘಾಟನಾ ಸಮಾ-ರಂಭದಲ್ಲಿ 25 ವಿವಿಧ ಕೃತಿಗಳು ಮತ್ತು ಸಿ.ಡಿ ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಚಿತ್ರಕಲಾ ಶಿಕ್ಷಕರ ಸಂಘ, ಯೋಗೇಶ್ ಚಿತ್ರಕಲಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಶರಣರ ಚಿತ್ರಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ ಎಂದರು.<br /> <br /> ಪ್ರಶಸ್ತಿ ಪುರಸ್ಕೃತರು: ಪ್ರಸಕ್ತ ಸಾಲಿನ ‘ಹಳಕಟ್ಟಿ ಶ್ರೀ’ ಪ್ರಶಸ್ತಿಗೆ ಉದ್ಯಮಿ ವಿಜಯ್ ಸಂಕೇಶ್ವರ, ಬೆಲ್ದಾಳ ಸಿದ್ಧರಾಮ ಶರಣರು, ಗುಲ್ಬರ್ಗ ಅಕ್ಕನ ಬಳಗದ ವಿಲಾಸವತಿ ಬೂಬಾ, ಬೆಳಗಾವಿಯ ಡಾ. ಗುರುದೇವಿ ಹುಲೆಪ್ಪನವರಮಠ ಅವರು ಪಾತ್ರರಾಗಿದ್ದಾರೆ.<br /> <br /> ಡಾ. ಫ.ಗು.ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ಮಹಾಲಿಂಗಪುರ ಮತ್ತು ನೀಲಮ್ಮನ ಬಳಗ ಮತ್ತು ಬಸವಪರ ಸಂಘಟನೆಗಳ ಜಂಟಿ ಸಹಭಾಗಿತ್ವದಲ್ಲಿ ಸಮ್ಮೇಳಣ ಆಯೋಜನೆಗೊಂಡಿದೆ.<br /> <br /> ಎರಡು ದಿನಕಾಲ ಸ್ವರಚಿತ ವಚನ ಗಾಯನ, ವಚನ ಸಾಹಿತ್ಯ ಮತ್ತು ಜಾಗತಿಕ ಸವಾಲು ಕುರಿತ ಗೋಷ್ಠಿಯೂ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಗುರುನಾಥ ಕೊಳ್ಳೂರ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖದೀರ್, ಬಸವರಾಜ ಧನ್ನೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ವಚನ ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸುವಲ್ಲಿ ಪ್ರಮುಖರಾದ ಡಾ. ಫ.ಗು ಹಳಕಟ್ಟಿ ಅವರ ನೆನಪಿನಲ್ಲಿ ಆಯೋಜಿಸಲಿರುವ ‘ಹಳಕಟ್ಟಿ –ವಚನೋತ್ಸವ’ದ ಏಳನೇ ರಾಷ್ಟ್ರೀಯ ಸಮ್ಮೇಳನ ಇದೇ 28 ಮತ್ತು 29ರಂದು ನಗರದಲ್ಲಿ ನಡೆಯಲಿದ್ದು, ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಸಮ್ಮೇಳನಾಧ್ಯಕ್ಷರಾಗಿದ್ದಾರೆ.<br /> <br /> ಎರಡು ದಿನ ನಗರದ ರಂಗಮಂದಿರದಲ್ಲಿ ಸಮ್ಮೇಳನದ ನಿಮಿತ್ತ ವಿವಿಧ ಗೋಷ್ಠಿಗಳು, ವಚನ ಗಾಯನ, ನಡೆಯಲಿದ್ದು, ಇದೇ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರಗಳ ಐವರು ಪ್ರಮುಖರಿಗೆ ‘ಹಳಗಟ್ಟಿ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.<br /> <br /> ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿವರಗಳನ್ನು ನೀಡಿದ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ, ಶಾಸಕ ಡಾ.ಗುರುಪಾದಪ್ಪ ನಾಗಮಾರಪಳ್ಳಿ, ಇದೇ ಮೊದಲಿಗೆ ಬೀದರ್ನಲ್ಲಿ ಇಂಥ ಸಮ್ಮೇಳನ ನಡೆಯುತ್ತಿದೆ. ಮೊದಲ ದಿನ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯುತ್ತದೆ ಎಂದರು.<br /> <br /> ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು, ಹಾರಕೂಡ ಮಠದ ಚನ್ನವೀರ ಶಿವಾಚಾರ್ಯ ಸಾನಿಧ್ಯದಲ್ಲಿ ವಹಿಸಲಿದ್ದು, ಉಸ್ತುವಾರಿ ಸಚಿವೆ ಉಮಾಶ್ರೀ ಉದ್ಘಾಟಿಸುವರು ಎಂದರು.<br /> <br /> ಸಮ್ಮೇಳನದ ನಿಮಿತ್ತ ಉದ್ಘಾಟನಾ ಸಮಾ-ರಂಭದಲ್ಲಿ 25 ವಿವಿಧ ಕೃತಿಗಳು ಮತ್ತು ಸಿ.ಡಿ ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಚಿತ್ರಕಲಾ ಶಿಕ್ಷಕರ ಸಂಘ, ಯೋಗೇಶ್ ಚಿತ್ರಕಲಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಶರಣರ ಚಿತ್ರಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ ಎಂದರು.<br /> <br /> ಪ್ರಶಸ್ತಿ ಪುರಸ್ಕೃತರು: ಪ್ರಸಕ್ತ ಸಾಲಿನ ‘ಹಳಕಟ್ಟಿ ಶ್ರೀ’ ಪ್ರಶಸ್ತಿಗೆ ಉದ್ಯಮಿ ವಿಜಯ್ ಸಂಕೇಶ್ವರ, ಬೆಲ್ದಾಳ ಸಿದ್ಧರಾಮ ಶರಣರು, ಗುಲ್ಬರ್ಗ ಅಕ್ಕನ ಬಳಗದ ವಿಲಾಸವತಿ ಬೂಬಾ, ಬೆಳಗಾವಿಯ ಡಾ. ಗುರುದೇವಿ ಹುಲೆಪ್ಪನವರಮಠ ಅವರು ಪಾತ್ರರಾಗಿದ್ದಾರೆ.<br /> <br /> ಡಾ. ಫ.ಗು.ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ಮಹಾಲಿಂಗಪುರ ಮತ್ತು ನೀಲಮ್ಮನ ಬಳಗ ಮತ್ತು ಬಸವಪರ ಸಂಘಟನೆಗಳ ಜಂಟಿ ಸಹಭಾಗಿತ್ವದಲ್ಲಿ ಸಮ್ಮೇಳಣ ಆಯೋಜನೆಗೊಂಡಿದೆ.<br /> <br /> ಎರಡು ದಿನಕಾಲ ಸ್ವರಚಿತ ವಚನ ಗಾಯನ, ವಚನ ಸಾಹಿತ್ಯ ಮತ್ತು ಜಾಗತಿಕ ಸವಾಲು ಕುರಿತ ಗೋಷ್ಠಿಯೂ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಗುರುನಾಥ ಕೊಳ್ಳೂರ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖದೀರ್, ಬಸವರಾಜ ಧನ್ನೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>