ಬೆಂಗಳೂರು: ವಾಲ್ಮಿಕಿನಗರ, ಆಜಾದ್ನಗರ ಹಾಗೂ ಟಿಪ್ಪುನಗರದ ಶಾಲಾ ಬ್ಯಾಗ್ ತಯಾರಿಕಾ ಘಟಕಗಳ ಮೇಲೆ ಬುಧವಾರ ದಾಳಿ ನಡೆಸಿದ ಚಾಮರಾಜಪೇಟೆ ಪೊಲೀಸರು 41 ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ.
ಬ್ಯಾಗ್ ತಯಾರಿಕಾ ಘಟಕದಲ್ಲಿ ಮಕ್ಕಳು ದುಡಿಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು.
ಕಾರ್ಯಾಚರಣೆ ನಡೆಸಿ ಬಿಹಾರ, ಪಶ್ಚಿಮಬಂಗಾಳ ಹಾಗೂ ಒಡಿಶಾ ಮೂಲದ 10 ರಿಂದ 15ರ ವಯೋಮಾನದ 41 ಮಕ್ಕಳನ್ನು ರಕ್ಷಿಸಲಾಗಿದೆ. ಮಕ್ಕಳನ್ನು ಸಮೀಪದ ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.