ಮೂಡಿಗೆರೆ: ಕಳೆದ ಎಂಟು ತಿಂಗಳ ಹಿಂದೆ 90 ಲಕ್ಷ ವೆಚ್ಚದಲ್ಲಿ ಮರು ಡಾಂಬರೀಕರಣಗೊಂಡಿದ್ದ ರಾಜ್ಯ ಹೆದ್ದಾರಿ ಕಡೂರು ಮಂಗಳೂರು ರಸ್ತೆಯು, ಮೇಗಲಪೇಟೆ, ರೈತಭವನ, ಹ್ಯಾಂಡ್ಪೋಸ್ಟ್ಗಳಲ್ಲಿ ಗುಂಡಿ ಬಿದ್ದಿದ್ದು, ಸಂಚಾರ ದುಸ್ತರವಾಗಿದೆ.
ಕಳೆದ ಡಿಸೆಂಬರ್ನಲ್ಲಿ ಹ್ಯಾಂಡ್ಪೋಸ್ಟ್ನಿಂದ ಕೊಲ್ಲಿಬೈಲು ಗ್ರಾಮದ ವರೆಗೂ ಸುಮಾರು 90 ಲಕ್ಷ ವೆಚ್ಚದಲ್ಲಿ ಮರು ಡಾಂಬರೀಕರಣ ಮಾಡಲಾಗಿತ್ತು. ಡಾಂಬರೀಕರಣವನ್ನು ರಾತ್ರೋರಾತ್ರಿ ನಡೆಸಲಾಗಿದ್ದು, ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಹಳೆ ಮೂಡಿ ಗೆರೆಯಲ್ಲಿ ಕೆಜೆಪಿ, ಜೆಡಿಎಸ್ ಮುಂತಾದ ರಾಜಕೀಯ ಪಕ್ಷಗಳು ಪ್ರತಿ ಭಟನೆ ನಡೆಸಿ, ಕಳಪೆ ಕಾಮಗಾರಿ ಸರಿಪಡಿ ಸುವಂತೆ ಒತ್ತಾಯಿಸಿದ್ದರು.
ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರೂ ಮೇಗಲ ಪೇಟೆಯಲ್ಲಿ ಡಾಂಬರೀಕರಣ ಮಾಡು ವಾಗ ಪುನಃ ಕಳಪೆಯಾಗಿದೆ ಎಂದು ಆರೋಪಿಸಿ ಮೊದಲ ಪ್ರತಿಭಟನೆ ನಡೆದು ಎರಡು ದಿನಗಳ ನಂತರ ಜಿಲ್ಲಾ ಪಂಚಾ ಯಿತಿ ಸದಸ್ಯ ಎಂ.ಎಸ್. ಅನಂತ್ ಮತ್ತು ಆಟೋ ಚಾಲಕರ ಮತ್ತು ಮಾಲೀಕರ ಸಂಘ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದ್ದವು.