ನ್ಯಾಯಲಯಕ್ಕೆ ಹಾಜರಿದ್ದ ಕೃಷ್ಣಯ್ಯ ಶೆಟ್ಟಿ ಅವರನ್ನು ತಕ್ಷಣ ಲೋಕಾಯುಕ್ತ ಪೊಲೀಸರು ಬಂಧಿಸಿದರು. ಅನಾರೋಗ್ಯದ ಕಾರಣ ನೀಡಿ ನ್ಯಾಯಾಲಯದ ಕಲಾಪದಿಂದ ಯಡಿಯೂರಪ್ಪ ಅವರು ದೂರ ಉಳಿದಿದ್ದರು. ಬಂಧನದ ವಾರೆಂಟ್ ಜಾರಿಯಾಗುತ್ತಿದ್ದಂತೆ ಲೋಕಾಯಕ್ತ ಪೋಲಿಸರು ಬಿ.ಎಸ್. ಯಡಿಯೂರಪ್ಪ ಅವರ ರೇಸ್ ಕೋರ್ಸ್ ನಿವಾಸಕ್ಕೆ ಬಂಧನದ ವಾರೆಂಟ್ ಹಿಡಿದು ಧಾವಿಸಿದರು.ಆದರೆ, ಅವರು ಆ ನಿವಾಸದಲ್ಲಿ ಇರಲಿಲ್ಲ.