ನೆಲಮಂಗಲ: ‘ಪಾಲಕರು ತಮ್ಮ ಮಕ್ಕಳ ಅಂಕ ಗಳಿಕೆಗೆ ಮಾತ್ರ ಮಾನ್ಯತೆ ನೀಡದೆ ಗುಣವಂತರು, ಚಾರಿತ್ರ್ಯವಂತರಾಗುವಂತೆ ಕಾಳಜಿ ವಹಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ತಿಳಿಸಿದರು.
ಸ್ಥಳೀಯ ಯೂರೊ ಕಿಡ್ಸ್ ಮತ್ತು ಹರ್ಷ ಇಂಟರ್ನ್ಯಾಷನಲ್ ಶಾಲೆ ಏರ್ಪಡಿಸಿದ್ದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
‘ಶಿಕ್ಷಣವೆಂದರೆ ಬರಿ ಮಾಹಿತಿ ತುರುಕುವುದಲ್ಲ. ಅಂತರಂಗದಲ್ಲಿ ಸುಪ್ತವಾಗಿರುವ ಪರಿಪೂರ್ಣತೆಹೊರತೆಗೆದು, ಚೈತನ್ಯಭರಿತ, ಚಾರಿತ್ರ್ಯವಂತ ವ್ಯಕ್ತಿಗಳನ್ನು ರೂಪಿಸುವುದು’ ಎಂದರು.
₨ 10 ಲಕ್ಷ ಅನುದಾನ
ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರಂಗಮಂದಿರ ನಿರ್ಮಾಣಕ್ಕಾಗಿ ₨10 ಲಕ್ಷ ಅನುದಾನ ಬಿಡುಗಡೆ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ತಿಳಿಸಿದರು.