ಮಸೂದೆ ವಿರೋಧ ವ್ಯಕ್ತಪಡಿಸುವುದು ಮುಂದುವರಿಸಿದರೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮತ್ತೊಮ್ಮೆ ಅಜ್ಞಾತವಾಸ ಅನುಭವಿಸ ಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕೋಮುವಾದಿ ಮಸೂದೆಯಲ್ಲ: ಗೋಹತ್ಯೆ ನಿಷೇಧದ ಹಿಂದೆ ಯಾವುದೇ ಕೋಮುವಾದಿ ಅಜೆಂಡಾ ಇಲ್ಲ. ಹೀಗಾಗಿ ಇದು ದಲಿತರು, ಮುಸ್ಲಿಮರ ವಿರೋಧಿಯೂ ಅಲ್ಲ. ಗೋಹತ್ಯೆ ನಿಷೇಧಕ್ಕೆ ಆ ಸಮುದಾಯಗಳ ಬಹುತೇಕರ ಸಹಮತವೂ ಇದೆ ಎಂದು ದಯಾನಂದ ಸ್ವಾಮೀಜಿ ಹೇಳಿದರು.
ಈಗಾಗಲೇ 11 ರಾಜ್ಯಗಳಲ್ಲಿ ಗೋಹತ್ಯೆ ನಿಷೇಧವಿದೆ. ಹೀಗಾಗಿ ರಾಜ್ಯದಲ್ಲಿಯೂ ಇದಕ್ಕೆ ನಿಷೇಧ ಹೇರಲು ರಾಜ್ಯಪಾಲರು ಅಂಕಿತ ಹಾಕಬೇಕು. ಇಲ್ಲದಿದ್ದಲ್ಲಿ ಎಲ್ಲ ಮಠಾಧೀ ಶರು ಒಟ್ಟಾಗಿ ಸೇರಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಪಿಂಜರಪೋಳ ಸಂಸ್ಥೆಯ ಮೇಘರಾಜ ಕವಾಟ, ಕರುಣಾಮಂದಿರ ಗೋಶಾಲೆಯ ಬೆಹರ್ಲಾಲ್ ಜೈನ್ ಹಾಗೂ ಸುನಂದಾದೇವಿ ಪತ್ರಿಕಾಗೋಷ್ಠಿಯಲ್ಲಿದ್ದರು.