ಬೆಂಗಳೂರು: ಅಂಗವಿಕಲ ಎನ್ನುವ ಒಂದೇ ಕಾರಣಕ್ಕೆ ಅಂದು ಶಾಲೆಯಿಂದ ತಿರಸ್ಕೃತಗೊಂಡಿದ್ದ ವ್ಯಕ್ತಿ ಈಗ ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತರಾಗಿ ನೇಮಕಗೊಂಡಿದ್ದಾರೆ.
ಎರಡೂ ಕೈ ಮತ್ತು ಕಾಲು ಇಲ್ಲದ 54 ವರ್ಷದ ಕೆ.ಎಸ್.ರಾಜಣ್ಣ ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತರಾಗಿ ಸೋಮವಾರ ಅಧಿಕಾರ ವಹಿಸಿಕೊಂಡರು. ಇದೇ ಮೊದಲ ಬಾರಿಗೆ ಈ ಸ್ಥಾನಕ್ಕೆ ಅಂಗವಿಕಲರೊಬ್ಬರು ನೇಮಕಗೊಂಡಿದ್ದಾರೆ.