ಶ್ವಾಸಕೋಶದಲ್ಲಿನ ಸೋಂಕಿಗಾಗಿ ಅಣ್ಣಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಪರಾಗ್ ಸಂಚೇತಿ ಅವರು, ಒಂದು ವಾರ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ನಂತರ ಅವರ ಆರೋಗ್ಯ ಸ್ಥಿತಿಯನ್ನು ಪುನಃ ಪರಿಶೀಲಿಸಲಾಗುವದು ಎಂದಿದ್ದಾರೆ. ಜೊತೆಗೆ, ~ಅಣ್ಣಾ ಅವರು ಯಾವುದೇ ಒತ್ತಡಕ್ಕೆ ಒಳಗಾಗದೇ ಒಂದು ತಿಂಗಳು ವಿಶ್ರಾಂತಿ ಪಡೆಯುವುದು ಅಗತ್ಯ, ಉಪವಾಸ ಕೂಡುವಂತಿಲ್ಲ~ ಎಂದೂ ಸಂಚೇತಿ ಹೇಳಿದ್ದಾರೆ.